ಬ್ರಾಹ್ಮಣನೂ ಭಗವದ್ಗೀಯೂ

ದಾರಿ ತಪ್ಪಿದವನೊಬ್ಬ ಬ್ರಾಹ್ಮಣ
ಅಲೆಯುತಿದ್ದ ಕಾಡಿನಲ್ಲಿ
ಮುಸ್ಸಂಜೆಯ ಸಮಯ
ಸಿಕ್ಕಿದ ಯಕ್ಷಿಯ ಬಲೆಯಲ್ಲಿ

ಹೆಣ್ಣು ರೂಪದ ಯಕ್ಷಿ
ತನ್ನ ಮನೆಗೆ ಕರೆಯಿತು
ನಾಳೆ ಹೋದರಾಯಿತೆಂದು
ಅವನ ಮನವ ಒಲಿಸಿತು

ಊಟ ಕೊಟ್ಟು ಚಾಪೆ ಹಾಕಿ
ಮಾತಾಡುತ್ತ ಕುಳಿತಿತು
ಕೈಯಲಿದ್ದ ಭಗವದ್ಗೀತೆ
ಕೆಳಗಿಡೊದನ್ನ ಕಾದಿತು

ಕಣ್ಣಿನಲ್ಲಿ ಕುಡಿನೋಟ
ಕೆಳ ಜಾರಿದ ಸೆರಗು
ಎಷ್ಟಾದರೂ ಬಡ ಬ್ರಾಹ್ಮಣ
ಆಂದುಕೊಂಡ ಕೊನೆಗು

ಗೀತೆಯಾದರೂ ಹೇಳುವುದೇನು:
ಅಡಿಯ ಮುಂದಿಡೆ ಸ್ವರ್ಗ!
ಮುನಿ ಕೂಡ ಮಾಡಿದ್ದೇನು?
ಬೆಸ್ತರವಳ ಸಂಸರ್ಗ!

ಒಗೆದೇ ಬಿಟ್ಟ ಪುಸ್ತಕ
ಅದರ ಮೇಲೆ ಧೋತರ
ಯಕ್ಷಿ ಸುಮ್ಮನೆ ನಕ್ಕಿತು-
ಯಕ್ಷಿಗಳು ನಗುವ ತರ

ಮರುದಿನ ಅಲ್ಲಿ ಕಂಡೆದ್ದೇನು?
ಮನೆಯಿದ್ದಲ್ಲಿ ತಾಳೆ!
ಕೆಳಗೆ ಹಸಿ ಹಸೀ ಮೂಳೆ ಹಾಗೂ
ಭಗವದ್ಗೀತೆಯ ಹಾಳೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರಾಜ ಅರಸು : ಒಂದು ಸ್ಮರಣೆ
Next post ನಗು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…