Home / ಕವನ / ಕವಿತೆ / ಬ್ರಾಹ್ಮಣನೂ ಭಗವದ್ಗೀಯೂ

ಬ್ರಾಹ್ಮಣನೂ ಭಗವದ್ಗೀಯೂ

ದಾರಿ ತಪ್ಪಿದವನೊಬ್ಬ ಬ್ರಾಹ್ಮಣ
ಅಲೆಯುತಿದ್ದ ಕಾಡಿನಲ್ಲಿ
ಮುಸ್ಸಂಜೆಯ ಸಮಯ
ಸಿಕ್ಕಿದ ಯಕ್ಷಿಯ ಬಲೆಯಲ್ಲಿ

ಹೆಣ್ಣು ರೂಪದ ಯಕ್ಷಿ
ತನ್ನ ಮನೆಗೆ ಕರೆಯಿತು
ನಾಳೆ ಹೋದರಾಯಿತೆಂದು
ಅವನ ಮನವ ಒಲಿಸಿತು

ಊಟ ಕೊಟ್ಟು ಚಾಪೆ ಹಾಕಿ
ಮಾತಾಡುತ್ತ ಕುಳಿತಿತು
ಕೈಯಲಿದ್ದ ಭಗವದ್ಗೀತೆ
ಕೆಳಗಿಡೊದನ್ನ ಕಾದಿತು

ಕಣ್ಣಿನಲ್ಲಿ ಕುಡಿನೋಟ
ಕೆಳ ಜಾರಿದ ಸೆರಗು
ಎಷ್ಟಾದರೂ ಬಡ ಬ್ರಾಹ್ಮಣ
ಆಂದುಕೊಂಡ ಕೊನೆಗು

ಗೀತೆಯಾದರೂ ಹೇಳುವುದೇನು:
ಅಡಿಯ ಮುಂದಿಡೆ ಸ್ವರ್ಗ!
ಮುನಿ ಕೂಡ ಮಾಡಿದ್ದೇನು?
ಬೆಸ್ತರವಳ ಸಂಸರ್ಗ!

ಒಗೆದೇ ಬಿಟ್ಟ ಪುಸ್ತಕ
ಅದರ ಮೇಲೆ ಧೋತರ
ಯಕ್ಷಿ ಸುಮ್ಮನೆ ನಕ್ಕಿತು-
ಯಕ್ಷಿಗಳು ನಗುವ ತರ

ಮರುದಿನ ಅಲ್ಲಿ ಕಂಡೆದ್ದೇನು?
ಮನೆಯಿದ್ದಲ್ಲಿ ತಾಳೆ!
ಕೆಳಗೆ ಹಸಿ ಹಸೀ ಮೂಳೆ ಹಾಗೂ
ಭಗವದ್ಗೀತೆಯ ಹಾಳೆ!
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...