ಬ್ರಾಹ್ಮಣನೂ ಭಗವದ್ಗೀಯೂ

ದಾರಿ ತಪ್ಪಿದವನೊಬ್ಬ ಬ್ರಾಹ್ಮಣ
ಅಲೆಯುತಿದ್ದ ಕಾಡಿನಲ್ಲಿ
ಮುಸ್ಸಂಜೆಯ ಸಮಯ
ಸಿಕ್ಕಿದ ಯಕ್ಷಿಯ ಬಲೆಯಲ್ಲಿ

ಹೆಣ್ಣು ರೂಪದ ಯಕ್ಷಿ
ತನ್ನ ಮನೆಗೆ ಕರೆಯಿತು
ನಾಳೆ ಹೋದರಾಯಿತೆಂದು
ಅವನ ಮನವ ಒಲಿಸಿತು

ಊಟ ಕೊಟ್ಟು ಚಾಪೆ ಹಾಕಿ
ಮಾತಾಡುತ್ತ ಕುಳಿತಿತು
ಕೈಯಲಿದ್ದ ಭಗವದ್ಗೀತೆ
ಕೆಳಗಿಡೊದನ್ನ ಕಾದಿತು

ಕಣ್ಣಿನಲ್ಲಿ ಕುಡಿನೋಟ
ಕೆಳ ಜಾರಿದ ಸೆರಗು
ಎಷ್ಟಾದರೂ ಬಡ ಬ್ರಾಹ್ಮಣ
ಆಂದುಕೊಂಡ ಕೊನೆಗು

ಗೀತೆಯಾದರೂ ಹೇಳುವುದೇನು:
ಅಡಿಯ ಮುಂದಿಡೆ ಸ್ವರ್ಗ!
ಮುನಿ ಕೂಡ ಮಾಡಿದ್ದೇನು?
ಬೆಸ್ತರವಳ ಸಂಸರ್ಗ!

ಒಗೆದೇ ಬಿಟ್ಟ ಪುಸ್ತಕ
ಅದರ ಮೇಲೆ ಧೋತರ
ಯಕ್ಷಿ ಸುಮ್ಮನೆ ನಕ್ಕಿತು-
ಯಕ್ಷಿಗಳು ನಗುವ ತರ

ಮರುದಿನ ಅಲ್ಲಿ ಕಂಡೆದ್ದೇನು?
ಮನೆಯಿದ್ದಲ್ಲಿ ತಾಳೆ!
ಕೆಳಗೆ ಹಸಿ ಹಸೀ ಮೂಳೆ ಹಾಗೂ
ಭಗವದ್ಗೀತೆಯ ಹಾಳೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರಾಜ ಅರಸು : ಒಂದು ಸ್ಮರಣೆ
Next post ನಗು

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys