ಗಾಳಿ ಮಾತು

ಗಾಳಿಯೊಳಗೆ ಬೆಸೆದು
ರೆಂಬೆ ಕೊಂಬೆಗಳಲ್ಲಿ ಹರಿದಾಡಿ
ಹಕ್ಕಿ ಗೂಡೊಳಗೆ ನುಸುಳಿ
ರೆಕ್ಕೆ ಪುಕ್ಕ ಕಟ್ಟಿಕೊಂಡು
ಬಾನಿಗೇರಿ ಬಲಿತು

ಕಂಡಕಂಡವರ ಹೆಗಲೇರಿ
ಹದತಪ್ಪಿ ಹಾಲಾಹಲವಾಗಿ
ಕೊನೆಗೂ ಬಾಯಿ ತೀಟೆ ತೀರಿಸಿಕೊಳ್ಳುತ್ತದೆ.

ಮನಸ್ಸುಗಳು ಮುರಿದು
ಮನೆಗಳು ಮುಚ್ಚಿಕೊಂಡ
ಹಂಚು ಹೊದಿಕೆಗಳೆಲ್ಲ ಹರಾಜಾಗಿ
ಇನ್ನೆನೋ ಆಗಿ
ಬೂದಿಯೊಳಗಣ ಕೆಂಡ
ಕಂಕುಳಲ್ಲೆ ಕಟ್ಟಿಕೊಳ್ಳುತ್ತದೆ.

ಆಗಾಗ ಪತ್ರಿಕೆಯ ಮುಖಪುಟ
ರಾರಾಜಿಸುತ್ತದೆ
ರುಂಡ ಮುಂಡ ಬೇರ್ಪಟ್ಟ
ದೇಹಗಳು ಪತ್ತೆ.
ಬಂಧ ಅನುಬಂಧಗಳು ಕೆಟ್ಟು
ಜೀವ ಭಾವ
ಬತ್ತಿದ ಒಡಲುಗಳು ಕಣ್ಣೀರಿನ
ಅಗುಳುಂಡು.
ಹಾಲ್ಕುಡಿದ ತುಟಿಗಳು ಹಂಬಲಿಸಿ
ಅಳುವುಂಡು
ಬದುಕ ನರಕದ ಮಹಲು
ಮಾಡುವ ಗಾಳಿಮಾತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೯
Next post ಮುಸ್ಸಂಜೆಯ ಮಿಂಚು – ೧೭

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…