ಬುದ್ಧ ಮತ್ತು ನನ್ನ ಮಾತುಗಳು

ಬುದ್ಧ ಹೇಳಿದ ಮುಳ್ಳಿನ ಕಿರೀಟ
ಧರಿಸಿದರೆ ನೋವುಗಳು ಎದೆಗಿಳಿದು
ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು
ಎಲ್ಲವೂ ಮೌನವಾಗುತ್ತವೆ.
ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ
ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು
ಎಲ್ಲವೂ ಉಕ್ಕಿಯ ಉರಿಯಂತೆ ಸುಡುತ್ತವೆ
ಎಂದೂ ಮತ್ತೆ ಮಾತಿನ ಶಸ್ತ್ರ ಪ್ರಹಾರ
ಮೌನದ ಆಳವನ್ನು ಕಲುಕಿ ರಾಡಿ ಮಾಡುತ್ತದೆಂದು.

ಬುದ್ಧ ಹೇಳಿದ ಅವಮಾನ ಹಿಯ್ಯಾಳಿಸಿದರೆ
ಈ ದೇಹ ಬಂಧನದಿಂದ ಬಿಡುಗಡೆ
ಸಿಗುತ್ತದೆ. ಎಂದೂ ಅಲ್ಲ ಕ್ರೂರ ಮನಸ್ಸಿರುವುದಿಲ್ಲ,
ಎಲ್ಲವೂ ಮಾತಿನಾಚೆಯ ಮೌನವಾಗುತ್ತದೆ.
ಅವನಿಗೆ ಗೊತ್ತಿಲ್ಲ ಉಳಿಯಿಂದ
ಹೊಡೆದು ಶಿಲ್ಪಿ ಮಾಡಿದ ಮಾಟ
ಮೂರ್ತಿ ತಾಳ್ಮೆಯಿಂದ ಎಲ್ಲ ದಾಟಿ ಮೀರಿ
ಪೂಜೆಗೊಳ್ಳುತ್ತದೆ ಕತ್ತಲೆಯಿಂದ ಬೆಳಕಿನ ಅರಮನೆಯಲಿ.

ಬುದ್ಧ ಹೇಳಿದ ಎಲ್ಲ ಬಿಟ್ಟು ಊರಿಗೆ ಬೆನ್ನು ಹಾಕಿ
ನಿರ್ಮೋಹಿಯಾಗಿ ನಡೆದರೆ ದಾರಿಯಲಿ ಏಕಾಂಗಿಯಾಗಿ
ನಿರ್ಲಕ್ಷಿಸಿದ ಸತ್ಯಗಳು ಕಣ್ಣಮುಂದೆ ಕಂಗೊಳಿಸುತ್ತದೆ
ಮತ್ತೆ ಭವ ಬದುಕು ಒಂದಾಗುತ್ತದೆ.
ಅವನಿಗೆ ಗೊತ್ತಿಲ್ಲ ಸಂತೆಯೊಳಗೆ ನಿಂತು
ಸತ್ಯವನ್ನ ಸುಳ್ಳಿನೊಡನೆ ಹೊಡೆದಾಡಿ ನಮ್ಮಿಂದಲೇ
ಕಳಚಿ ಕೊಂಡು ಹೊಸ ನಮೂನೆಯ ಮನಸ್ಸು.
ಬದುಕು ಮತ್ತೆ ನಮ್ಮಲ್ಲೇ ಹುಟ್ಟಿಕೊಳ್ಳುತ್ತದೆ ಎಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ಯಾಕ್ಟೀರಿಯಾ ರೋಗಿಗಳಿಗೆ ಪ್ರತಿಬಂಧಕ ಶಕ್ತಿ ಆಡಿನ ಹಾಲು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೨

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…