ಬುದ್ಧ ಮತ್ತು ನನ್ನ ಮಾತುಗಳು

ಬುದ್ಧ ಹೇಳಿದ ಮುಳ್ಳಿನ ಕಿರೀಟ
ಧರಿಸಿದರೆ ನೋವುಗಳು ಎದೆಗಿಳಿದು
ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು
ಎಲ್ಲವೂ ಮೌನವಾಗುತ್ತವೆ.
ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ
ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು
ಎಲ್ಲವೂ ಉಕ್ಕಿಯ ಉರಿಯಂತೆ ಸುಡುತ್ತವೆ
ಎಂದೂ ಮತ್ತೆ ಮಾತಿನ ಶಸ್ತ್ರ ಪ್ರಹಾರ
ಮೌನದ ಆಳವನ್ನು ಕಲುಕಿ ರಾಡಿ ಮಾಡುತ್ತದೆಂದು.

ಬುದ್ಧ ಹೇಳಿದ ಅವಮಾನ ಹಿಯ್ಯಾಳಿಸಿದರೆ
ಈ ದೇಹ ಬಂಧನದಿಂದ ಬಿಡುಗಡೆ
ಸಿಗುತ್ತದೆ. ಎಂದೂ ಅಲ್ಲ ಕ್ರೂರ ಮನಸ್ಸಿರುವುದಿಲ್ಲ,
ಎಲ್ಲವೂ ಮಾತಿನಾಚೆಯ ಮೌನವಾಗುತ್ತದೆ.
ಅವನಿಗೆ ಗೊತ್ತಿಲ್ಲ ಉಳಿಯಿಂದ
ಹೊಡೆದು ಶಿಲ್ಪಿ ಮಾಡಿದ ಮಾಟ
ಮೂರ್ತಿ ತಾಳ್ಮೆಯಿಂದ ಎಲ್ಲ ದಾಟಿ ಮೀರಿ
ಪೂಜೆಗೊಳ್ಳುತ್ತದೆ ಕತ್ತಲೆಯಿಂದ ಬೆಳಕಿನ ಅರಮನೆಯಲಿ.

ಬುದ್ಧ ಹೇಳಿದ ಎಲ್ಲ ಬಿಟ್ಟು ಊರಿಗೆ ಬೆನ್ನು ಹಾಕಿ
ನಿರ್ಮೋಹಿಯಾಗಿ ನಡೆದರೆ ದಾರಿಯಲಿ ಏಕಾಂಗಿಯಾಗಿ
ನಿರ್ಲಕ್ಷಿಸಿದ ಸತ್ಯಗಳು ಕಣ್ಣಮುಂದೆ ಕಂಗೊಳಿಸುತ್ತದೆ
ಮತ್ತೆ ಭವ ಬದುಕು ಒಂದಾಗುತ್ತದೆ.
ಅವನಿಗೆ ಗೊತ್ತಿಲ್ಲ ಸಂತೆಯೊಳಗೆ ನಿಂತು
ಸತ್ಯವನ್ನ ಸುಳ್ಳಿನೊಡನೆ ಹೊಡೆದಾಡಿ ನಮ್ಮಿಂದಲೇ
ಕಳಚಿ ಕೊಂಡು ಹೊಸ ನಮೂನೆಯ ಮನಸ್ಸು.
ಬದುಕು ಮತ್ತೆ ನಮ್ಮಲ್ಲೇ ಹುಟ್ಟಿಕೊಳ್ಳುತ್ತದೆ ಎಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ಯಾಕ್ಟೀರಿಯಾ ರೋಗಿಗಳಿಗೆ ಪ್ರತಿಬಂಧಕ ಶಕ್ತಿ ಆಡಿನ ಹಾಲು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೨

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…