ಬುದ್ಧ ಮತ್ತು ನನ್ನ ಮಾತುಗಳು

ಬುದ್ಧ ಹೇಳಿದ ಮುಳ್ಳಿನ ಕಿರೀಟ
ಧರಿಸಿದರೆ ನೋವುಗಳು ಎದೆಗಿಳಿದು
ಅಲ್ಲಿ ಮರಗಳು ಹೂಗಳು ಹುಲ್ಲು ಹಸಿರು
ಎಲ್ಲವೂ ಮೌನವಾಗುತ್ತವೆ.
ಅವನಿಗೆ ಗೊತ್ತಿಲ್ಲ ಮುಳ್ಳಿನ ಹಾಸಿಗೆಯ
ಕಡಿತದಲಿ ನಕ್ಷತ್ರಗಳ ತಿಳಿ ಬೆಳದಿಂಗಳು
ಎಲ್ಲವೂ ಉಕ್ಕಿಯ ಉರಿಯಂತೆ ಸುಡುತ್ತವೆ
ಎಂದೂ ಮತ್ತೆ ಮಾತಿನ ಶಸ್ತ್ರ ಪ್ರಹಾರ
ಮೌನದ ಆಳವನ್ನು ಕಲುಕಿ ರಾಡಿ ಮಾಡುತ್ತದೆಂದು.

ಬುದ್ಧ ಹೇಳಿದ ಅವಮಾನ ಹಿಯ್ಯಾಳಿಸಿದರೆ
ಈ ದೇಹ ಬಂಧನದಿಂದ ಬಿಡುಗಡೆ
ಸಿಗುತ್ತದೆ. ಎಂದೂ ಅಲ್ಲ ಕ್ರೂರ ಮನಸ್ಸಿರುವುದಿಲ್ಲ,
ಎಲ್ಲವೂ ಮಾತಿನಾಚೆಯ ಮೌನವಾಗುತ್ತದೆ.
ಅವನಿಗೆ ಗೊತ್ತಿಲ್ಲ ಉಳಿಯಿಂದ
ಹೊಡೆದು ಶಿಲ್ಪಿ ಮಾಡಿದ ಮಾಟ
ಮೂರ್ತಿ ತಾಳ್ಮೆಯಿಂದ ಎಲ್ಲ ದಾಟಿ ಮೀರಿ
ಪೂಜೆಗೊಳ್ಳುತ್ತದೆ ಕತ್ತಲೆಯಿಂದ ಬೆಳಕಿನ ಅರಮನೆಯಲಿ.

ಬುದ್ಧ ಹೇಳಿದ ಎಲ್ಲ ಬಿಟ್ಟು ಊರಿಗೆ ಬೆನ್ನು ಹಾಕಿ
ನಿರ್ಮೋಹಿಯಾಗಿ ನಡೆದರೆ ದಾರಿಯಲಿ ಏಕಾಂಗಿಯಾಗಿ
ನಿರ್ಲಕ್ಷಿಸಿದ ಸತ್ಯಗಳು ಕಣ್ಣಮುಂದೆ ಕಂಗೊಳಿಸುತ್ತದೆ
ಮತ್ತೆ ಭವ ಬದುಕು ಒಂದಾಗುತ್ತದೆ.
ಅವನಿಗೆ ಗೊತ್ತಿಲ್ಲ ಸಂತೆಯೊಳಗೆ ನಿಂತು
ಸತ್ಯವನ್ನ ಸುಳ್ಳಿನೊಡನೆ ಹೊಡೆದಾಡಿ ನಮ್ಮಿಂದಲೇ
ಕಳಚಿ ಕೊಂಡು ಹೊಸ ನಮೂನೆಯ ಮನಸ್ಸು.
ಬದುಕು ಮತ್ತೆ ನಮ್ಮಲ್ಲೇ ಹುಟ್ಟಿಕೊಳ್ಳುತ್ತದೆ ಎಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ಯಾಕ್ಟೀರಿಯಾ ರೋಗಿಗಳಿಗೆ ಪ್ರತಿಬಂಧಕ ಶಕ್ತಿ ಆಡಿನ ಹಾಲು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೮೨

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys