ಬ್ಯಾಕ್ಟೀರಿಯಾ ರೋಗಿಗಳಿಗೆ ಪ್ರತಿಬಂಧಕ ಶಕ್ತಿ ಆಡಿನ ಹಾಲು

ಬ್ಯಾಕ್ಟೀರಿಯಾ ರೋಗಿಗಳಿಗೆ ಪ್ರತಿಬಂಧಕ ಶಕ್ತಿ ಆಡಿನ ಹಾಲು

ಮಹಾತ್ಮ ಗಾಂಧೀಜಿಯವರು ಆಡಿನ ಹಾಲನ್ನು ಕುಡಿಯುತ್ತ ಆದರ್ಶವಾಗಿ ಬಾಳಿದ ಚರಿತ್ರೆಯನ್ನು ಓದಲಾಗಿದೆ. ಆಡಿನ ಹಾಲಿನಲ್ಲಿರುವ ಅನೇಕ ಮಹಾತ್ಮೆಗಳು ಆರೋಗ್ಯಕ್ಕೆ ಪುಷ್ಟಿದಾಯಕವೆಂದೇ ಮಹಾತ್ಮರು ಬಳಸಿದ್ದು ಸತ್ಯದ ಸಂಗತಿ. ಈಗ ಪ್ರಸ್ತುತ ಆಡಿನ ಹಾಲಿಗೆ ನೇರವಾಗಿ ಬರುವುದಾದರೆ ಈ ಹಾಲಿನಲ್ಲಿ ಒಂದು ವಿಶೇಷವಾದ ಪ್ರೋಟಿನ್ ಇದೆ. ಇದು ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳನ್ನು ತಡೆಯುತ್ತದೆ. ಆಡಿನ ಹಾಲಿನಲ್ಲಿ ‘ಲ್ಯಕ್ಟೋಪೆರಾಕಿಸಡೇಜ’ ನ್ನೂ ಬ್ಯಾಕ್ಟೀರಿಯಾ ಕಾರಣದಿಂದ ಉಂಟಾಗುವ ರೋಗಗಳಾದ ಹೈಜಾ, ಟೈಪಾಯಿಡಾ, ನಿಮೋನಿಯಾ ಹೈಸ್ಟ್ರೋ, ಅತಿಸಾರ ಮತ್ತು ಪುಡ್ ಪ್ಯಾ ನಿಂಗಿನ ವಿರುದ್ಧ ಹೋರಾಡುವ ಪ್ರಭಾವಶಾಲಿ ಆಸ್ತ್ರವೆಂದು ಸಂಶೋಧಕರು ಹೇಳುತ್ತಾರೆ.

ಕೊಟ್ಟಾಯಂನಲ್ಲಿರುವ ಮಹಾತ್ಮಾಗಾಂಧಿ ವಿಶ್ವವಿದ್ಯಾನಿಲಯದ ಸಂಶೋಧಕರು ಆಡಿನ ಹಾಲಿನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕಂಡು ಹಿಡಿದಿದ್ದಾರೆ. ಯಾವ ದುರ್ಬಲ ರೋಗಿಗಳಿಗೆ ಔಷಧಿಗಳು ಪಚನವಾಗುವದಿಲ್ಲವೋ ಅಂಥವರ ಶರೀರದೊಳಕ್ಕೆ ಔಷಧಿಯನ್ನು ತಲುಪಿಸಲು ವೈದ್ಯರು ಈ ವಿಶೇಷ ಮತ್ತು ಉಪಯುಕ್ತ ಪದ್ಧತಿಯನ್ನು ಕಂಡು ಹಿಡಿದಿದ್ದಆರೆ. ವೈದ್ಯರು ಆಡಿನ ಮೇವಿನಲ್ಲಿ ಕೆಲವು ಗಿಡ ಮೂಲಕೆ ಭಸ್ಮಗಳನ್ನು ಬೆರೆಸಿ ತಿನ್ನಿಸುತ್ತಾರೆ. ಮೂರನೆ ದಿನದಿಂದ ಆಡಿನ ಹಾಲಿನಲ್ಲಿ ಆ ಔಷಧಿಯ ಗುಣಗಳು ಕಂಡು ಬರುತ್ತವೆ. ಔಷಧಿಯ ಗುಪ್ತ ಗಾಮಾನಿಶಕ್ತಿಯು ಆಡಿನ ಜೀವಸತ್ವದೊಂದಿಗೆ ಸಮೀಕರಣಗೊಂಡಿರುತ್ತದೆ. ಕಠಿಣಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತದೆ.

ಆಡಿನ ಹಾಲು ಕಂಡರೆ ಸಿಂಡರಿಸಿಕೊಳ್ಳುವ, ವಾಸನೆಯನ್ನೂ ಕಂಡು ದೂರ ಹೋಗುವ ಜನ ವೈಜ್ಞಾನಿಕವಾಗಿ ಈ ಸಂಶೋಧನೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗ್ರಂಥಾಲಯ
Next post ಬುದ್ಧ ಮತ್ತು ನನ್ನ ಮಾತುಗಳು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys