Home / ಲೇಖನ / ವಿಜ್ಞಾನ / ಬ್ಯಾಕ್ಟೀರಿಯಾ ರೋಗಿಗಳಿಗೆ ಪ್ರತಿಬಂಧಕ ಶಕ್ತಿ ಆಡಿನ ಹಾಲು

ಬ್ಯಾಕ್ಟೀರಿಯಾ ರೋಗಿಗಳಿಗೆ ಪ್ರತಿಬಂಧಕ ಶಕ್ತಿ ಆಡಿನ ಹಾಲು

ಮಹಾತ್ಮ ಗಾಂಧೀಜಿಯವರು ಆಡಿನ ಹಾಲನ್ನು ಕುಡಿಯುತ್ತ ಆದರ್ಶವಾಗಿ ಬಾಳಿದ ಚರಿತ್ರೆಯನ್ನು ಓದಲಾಗಿದೆ. ಆಡಿನ ಹಾಲಿನಲ್ಲಿರುವ ಅನೇಕ ಮಹಾತ್ಮೆಗಳು ಆರೋಗ್ಯಕ್ಕೆ ಪುಷ್ಟಿದಾಯಕವೆಂದೇ ಮಹಾತ್ಮರು ಬಳಸಿದ್ದು ಸತ್ಯದ ಸಂಗತಿ. ಈಗ ಪ್ರಸ್ತುತ ಆಡಿನ ಹಾಲಿಗೆ ನೇರವಾಗಿ ಬರುವುದಾದರೆ ಈ ಹಾಲಿನಲ್ಲಿ ಒಂದು ವಿಶೇಷವಾದ ಪ್ರೋಟಿನ್ ಇದೆ. ಇದು ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳನ್ನು ತಡೆಯುತ್ತದೆ. ಆಡಿನ ಹಾಲಿನಲ್ಲಿ ‘ಲ್ಯಕ್ಟೋಪೆರಾಕಿಸಡೇಜ’ ನ್ನೂ ಬ್ಯಾಕ್ಟೀರಿಯಾ ಕಾರಣದಿಂದ ಉಂಟಾಗುವ ರೋಗಗಳಾದ ಹೈಜಾ, ಟೈಪಾಯಿಡಾ, ನಿಮೋನಿಯಾ ಹೈಸ್ಟ್ರೋ, ಅತಿಸಾರ ಮತ್ತು ಪುಡ್ ಪ್ಯಾ ನಿಂಗಿನ ವಿರುದ್ಧ ಹೋರಾಡುವ ಪ್ರಭಾವಶಾಲಿ ಆಸ್ತ್ರವೆಂದು ಸಂಶೋಧಕರು ಹೇಳುತ್ತಾರೆ.

ಕೊಟ್ಟಾಯಂನಲ್ಲಿರುವ ಮಹಾತ್ಮಾಗಾಂಧಿ ವಿಶ್ವವಿದ್ಯಾನಿಲಯದ ಸಂಶೋಧಕರು ಆಡಿನ ಹಾಲಿನಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕಂಡು ಹಿಡಿದಿದ್ದಾರೆ. ಯಾವ ದುರ್ಬಲ ರೋಗಿಗಳಿಗೆ ಔಷಧಿಗಳು ಪಚನವಾಗುವದಿಲ್ಲವೋ ಅಂಥವರ ಶರೀರದೊಳಕ್ಕೆ ಔಷಧಿಯನ್ನು ತಲುಪಿಸಲು ವೈದ್ಯರು ಈ ವಿಶೇಷ ಮತ್ತು ಉಪಯುಕ್ತ ಪದ್ಧತಿಯನ್ನು ಕಂಡು ಹಿಡಿದಿದ್ದಆರೆ. ವೈದ್ಯರು ಆಡಿನ ಮೇವಿನಲ್ಲಿ ಕೆಲವು ಗಿಡ ಮೂಲಕೆ ಭಸ್ಮಗಳನ್ನು ಬೆರೆಸಿ ತಿನ್ನಿಸುತ್ತಾರೆ. ಮೂರನೆ ದಿನದಿಂದ ಆಡಿನ ಹಾಲಿನಲ್ಲಿ ಆ ಔಷಧಿಯ ಗುಣಗಳು ಕಂಡು ಬರುತ್ತವೆ. ಔಷಧಿಯ ಗುಪ್ತ ಗಾಮಾನಿಶಕ್ತಿಯು ಆಡಿನ ಜೀವಸತ್ವದೊಂದಿಗೆ ಸಮೀಕರಣಗೊಂಡಿರುತ್ತದೆ. ಕಠಿಣಶಕ್ತಿಯನ್ನು ಸಹಿಸಲು ಸಾಧ್ಯವಾಗುತ್ತದೆ.

ಆಡಿನ ಹಾಲು ಕಂಡರೆ ಸಿಂಡರಿಸಿಕೊಳ್ಳುವ, ವಾಸನೆಯನ್ನೂ ಕಂಡು ದೂರ ಹೋಗುವ ಜನ ವೈಜ್ಞಾನಿಕವಾಗಿ ಈ ಸಂಶೋಧನೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...