ಯಾತ್ರೆಗೆ ಹೋದ ವೃದ್ಧ ಜೋಡಿ, ಜಗಳ ಆಡಿಕೊಂಡೇ ಬಾಳು ಕಳೆದಿದ್ದರು. ಅವರಲ್ಲಿ, ಷಷ್ಟಾಷ್ಟಕವಿತ್ತು. ನದಿ ಸ್ನಾನಕ್ಕೆ ಇಬ್ಬರೂ ಹೋದರು. ಸುಳಿಯೊಂದು ಬಂದು ವೃದ್ಧ ಗಂಡನನ್ನು ಎಳದೊಯ್ಯುವದರಲ್ಲಿತ್ತು. ವೃದ್ಧೆ ತನ್ನ ಕೈಯಿಂದ, ಗಂಡನ್ನನ್ನು ಎಳೆದುಕೊಂಡು ಎದೆ ಗವಚಿಕೊಂಡಳು. “ಮುಳಗಬೇಡಿ, ಮುಳಗಬೇಡಿ” ಎಂದು ಕಿರುಚುತ್ತಾ ದಡಕ್ಕೆ ಎಳದೊಡನೆ ಜಗಳ ಶುರುವಾಯಿತು. “ಬೇಡಾಂತ ಹೇಳಿದ್ರೆ ಕೇಳ್ತಿರಾರಿ? ಯಾಕ್ರಿ ಮುಳಗಿ ಸಾಯಿತೀರಿ?” ಎಂದು ತಾರಾ ಸ್ವರದಲ್ಲಿ ವೃದ್ಧೆ ಕಿರಿಚಿ ಕೊಂಡಳು. “ನಾ ಮುಳಿಗಿದರೆ ಜಗಳ ಯಾರು ಕಾಯಿತಾರೆ? ನಾನು ಖಂಡಿತ ಮುಳುಗೋಲ್ಲ” ಎಂದು ವೃದ್ಧ ನೀರಿನಿಂದ ಮೇಲೆ ಬಂದ.
*****
Related Post
ಸಣ್ಣ ಕತೆ
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ದೇವರೇ ಪಾರುಮಾಡಿದಿ ಕಂಡಿಯಾ
"Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ಗೃಹವ್ಯವಸ್ಥೆ
ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…