ಒಬ್ಬ ವಿಯೆಟ್ನಾಮೀ ಸುಂದರಿಗೆ

ಎಲೆ ವಿಯಟ್ನಾಮಿನ ಸುಂದರಿಯೆ ನಿನ್ನ
ಹೆಸರು ಹುಣ್ಣಿಮೆಯೆಂದು ಹೂವೆಂದು
ಹಸಿರು ಹುಲ್ಲಿನ ಬೆಟ್ಟವೆಂದು ಪ್ರಾತಃ–
ಕಾಲದ ಬೆಳಕೆಂದು ಸ್ವಪ್ನವೆಂದು

ಪ್ರೇಮವೆಂದು ಎಲ್ಲಿರಲ್ಲೂ ಇರುವ ಅಸೂಯೆ-
ಯೆಂದು ನಿದ್ರಿಸುವ ಜ್ವಾಲಾಮುಖಿಯೆಂದು
ಹೊತ್ತಿ ಉರಿಯುವ ಕಾಡೆಂದು ಹೇಳಿದ್ದಿ.
ಎಲ್ಲರನ್ನೂ ಕಳೆದುಕೊಂಡು ನೀನು

ಉತ್ತರ ವಿಯಟ್ನಾಮಿನಿಂದ ದಕ್ಷಿಣಕ್ಕೆ
ಪ್ರಯಾಣಿಸಿದೆ. ದನಗಳನ್ನು ಮೇಯಿಸಿದವಳೆ,
ಹುಲ್ಲುಗಾವಲುಗಳಲ್ಲಿ ಕುಣಿದವಳೆ
ಹೂವುಗಳ ಮುಡಿದವಳೆ, ಹಾಡಿದವಳೆ

ಮನುಷ್ಯರ ವಿಧ್ವಂಸಕ ಯುದ್ಧದಲ್ಲಿ
ಆಗಾಗ ಮಡಿದವಳೆ, ನಿನ್ನ ತೊಡೆಯೇರಿದ
ಗೆಳೆಯರು ಎಲ್ಲಿ ಚದರಿದರು ಹೇಳು–
ಗಂಡಿ ಪೇಟೆಯ ಅಣೆಕಟ್ಟಿನ ಕೆಳಗೆ

ನಿನ್ನೆದುರು ಕುಳಿತು ಯೋಚಿಸುವೆನು
ಸಿಡಿಮದ್ದು ನೆಲದ ಮುಖವ ಒಡೆಯು-
ತಿದ್ದಾಗಲೂ ಸೃಷ್ಟಿ ಮರೆತಿರಲಿಲ್ಲ ನಿನ್ನ!
ಅದು ಪ್ರೀತಿಯ ಕೈಯನಾಡಿಸುತ್ತಲೆ ಇತ್ತು

ನಿನ್ನ ಮೈಯ ಏರುತಗ್ಗುಗಳ ಮೇಲೆ
ಮೂಡಿಸುತಿತ್ತು ಎಂಥ ಅಪರೂಪದ ರಾಗಗಳ!
ನನ್ನ ಕಲ್ಪನೆ ನಿನ್ನ ನೆನಪೆಂದು ನನಗೆ ಗೊತ್ತು,
ದಾಟಲಾರದ ಇತಿಹಾಸವೆ ನಮ್ಮ ನಡುವೆ ಇತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಗಳಿಕೆ
Next post ನನ್ನೊಳಗೆ ನೀನಿದ್ದೆ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys