ಮನೆ

ನಮ್ಮ ನಡುವಿನ ಮಾತುಗಳೆಲ್ಲಾ
ಮಾತಲ್ಲ ಗೆಳೆಯಾ ಅಲ್ಲಿರುವುದು
ಮೌನದ ಪ್ರತಿಬಿಂಬ, ನದಿಯಲಿ
ತೇಲುವ ದೋಣಿಯ ಗೆಣೆನಾದ
ನೀಲಿ ಆಗಸದ ತೇಲುಚುಕ್ಕಿಗಳ ಬಿಂಬ
ಮೆಲ್ಲಗೆ ಅರಳಿಸುತ್ತದೆ ಸೂರ್ಯಕಾಂತಿ
ಕಣ್ಣಕಾಂತಿ, ತೊಟ್ಟಿಲಲಿ ಮುದ್ದು ಕಂದನ ಕೇಕೆ

ನಮ್ಮ ನಡುವಿನ ಮೌನ ಬರೀ
ಮೌನವಲ್ಲ ಗೆಳೆಯ ಅಲ್ಲಿರುವುದು
ಮಾತಿನ ಬಿಂಬ, ಗೂಡಿನಲಿ ಗುಬ್ಬಚ್ಚಿ ಚಿಲಿಪಿಲಿ,
ಹರಿಯುವ ಮುಂಜಾನೆ ಬೆಳಗು ಫಳಫಳ,
ನದಿಯ ಕಲರವ ಮೆತ್ತಗೆ ತೊಯ್ಯುತ್ತದೆ ಪ್ರೀತಿ
ಎದೆಯ ಸೊನೆಹಾಲು ನನ್ನೊಳಗೆ ನೀ ಸಾಕ್ಷಿ.

ನಮ್ಮ ನಡುವಿನ ಮಾತು ಮೌನ
ಗೂಡು ಮಾಡಿನಲಿ ರಾಗಭೋಗದ
ನೆಂಟು ಈಗ ಅಲ್ಲಿರುವುದು ಬರೀ ಕಲ್ಲುಗೋಡೆಗಳಲ್ಲಾ
ಅದು ಅಲ್ಲಮನೆ ಗುಹೆ
ಚಿಕ್ಕಮಿನುಗಲಿ ಮೋಡತೇಲಿ ನದಿಹರಿದು
ಕಡಲ ಒಡಲ ಸೇರಿದ ಹರವಿನ ದಾಂಪತ್ಯ
ಭವ ಅಂಗೈಯಲಿ ಲಿಂಗವಾಗುವ ಜೀವಭಾವ.

ನಮ್ಮ ನಡುವಿನ ನೇಯ್ಗೆ ಬರೀ
ಬಟ್ಟೆಯಲ್ಲ ಗೆಳೆಯ ರಾಗರಂಗುಗಳು ಸೇರಿ
ಬಚ್ಚಿಟ್ಟ ಬಣ್ಣದ ತುಣುಕುಗಳು ಪ್ರೀತಿ
ವಿಶ್ವಾಸದ ಸೂಜಿದಾರದಲಿ ಪೋಣಿಸಿ
ಒಂದೇ ಜಾಡಿನಲಿ ಹೊಲೆದ ಹಸನಾದ ಕೌದಿ.


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...