ಹೆಸರು ಅಳಿಸಿ ಬದುಕಬೇಕೊಮ್ಮೆ

ಹೆಸರು ಅಳಿಸಿ ಬದುಕಬೇಕೊಮ್ಮೆ
ನೀನು ಸಹ ನಾನು ಸಹ ಅವರು ಸಹ

ಹೊಸ ಮಳೆಗೆ ಹೊಸ ದಂಡೆ
ಹೊಸ ಕಡಲು
ಹೊಸ ಜನ್ಮ ತಾಳಿದಂತೆ
ಯಾವ ಕಡಲಿಗೆ ಯಾವ ಹೆಸರು??
ಯಾವ ನದಿಗೆ ಯಾವ ಹೆಸರು??
ಇರುವ ಒಂದೇ ಕಡಲಿನಲ್ಲಿ
ಎಲ್ಲಿ ಮಿಲನವಾದಯೋ??
ಯಾವ ನದಿಯ ಎಲ್ಲಿ ಹುಡುಕಲಿ??
ಈ ಅಪಾರ ಕಡಲಲಿ??

ಹೆಸರಿಟ್ಟಿದ್ದೇವೆ ನಾವು ಅಳೆಯಲಾಗದ ಕಡಲಿಗೆ

ಹೆಸರಿಟ್ಟಿದ್ದಾರೆ ನಮಗೆ ನಮ್ಮ ಹಿರಿಯರು, ಅವರಿಗೆ ಅವರ ಹಿರಿಯರು…ಹೀಗೆ…..

ಪ್ರೀತಿಯನು ಉಸಿರಾಡದ ಊರು
ಯಾವುದಿದೆ ತೋರಿಸಿ
ಊರಿಗೊಂದು ಹೆಸರಿಟ್ಟೆವು

ಉರಿವ ದ್ವೇಷದ ನಡುವೆಯೂ
ತಾಯ್ತನ ಮರೆಯಾದ ದೇಶ ಯಾವುದಿದೆ?
ದೇಶಕ್ಕೊಂದು ಹೆಸರಿಟ್ಟೆವು

ಪ್ರೀತಿ ಹಂಚದ ಭಾಷೆಯಾವುದಿದೆ
ಅದಕ್ಕೂ ಒಂದು ಬಂಧ ಎಳೆದೆವು

ಹೆಸರು ಅಳಿಸಿ ಬದುಕಬೇಕೊಮ್ಮೆ
ಗಾಳಿ ಗಾಳಿಯನು ಉಂಡು ಬದುಕಿದಂತೆ
ಬೆಳಕು ಬೆಳಕನು ಚೆಲ್ಲಿದಂತೆ
ಕತ್ತಲು ಕತ್ತಲನು ಹೊಕ್ಕಿದಂತೆ
ಆಕಾಶವಾಗಿ ಬಯಲಾಗಿ ನದಿ ಕಡಲಾಗಿ
ಕಡಲು ಕಡಲಾಗಿ ವಿಸ್ತರಿಸಿ ವ್ಯಾಪಿಸಿದಂತೆ
ದಂಡೆ ದಂಡೆಗೆ ಜನ್ಮ ನೀಡಿದ ಹಾಗೆ

ಬದುಕಬೇಕೊಮ್ಮೆ ಹೆಸರನಳಿಸಿ
ನನ್ನಿರವು ನಿನ್ನಲಿ ಬಂದು
ನಿನ್ನಿರವು ನನ್ನಲಿ ಮಿಂದು ಬದುಕಬೇಕೊಮ್ಮೆ ಹೆಸರನಳಿಸಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂವಿನ ಪೂಜೆ
Next post ಮನುಜ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…