Home / ಕವನ / ಕವಿತೆ / ಮಂಗಲಂ ಜಯ ಜಯತು ಜಗನ್ಮಾತೆ

ಮಂಗಲಂ ಜಯ ಜಯತು ಜಗನ್ಮಾತೆ

ಮಂಗಲಂ ಜಯ ಜಯತು ಜಗನ್ಮಾತೆ
ಅಂಗಜಹರರೂಪ ಮಂಗಲಾಂಗಿಗೆ
ಸಂಗವಿದೂರ ದುಷ್ಕೃತಿ ಭಂಗತುಂಗ ವಿಕ್ರಮಗೆ || ಪ ||

ಹರಿ ಹರ ಬ್ರಹ್ಮರನು ತಾಯಾಗಿ ರಕ್ಷಿಪಳು
ಸರಿಗಾಣದಿರುವಂಥ ಹರಮೂರ್ತಿಗೆ
ಪರಿಪರಿಯ ವರ್ಣದಲಿ ಹೊಳೆಯುತಲಿ
ಪರಿಪೂರ್ಣ ಸುರಜಾಲಮಯಳಾದ ಸ್ಥಿರಕೀರ್ತಿಗೆ || ೧ ||

ಕೊಬ್ಬಿದಾ ಮಧುಕೈಟಭಾಸುರರ ಸಂಹರಿಸಿ
ಕೊಬ್ಬಿರಿದು ಉಬ್ಬಿದಾ ಮಹಾಕಾಳಿಗೆ
ಅಬ್ಬರಿಸಿ ಬರುವಂಥಾ ದುಷ್ಟದೈತ್ಯರನೆಲ್ಲ
ಇಬ್ಭಾಗ ಸೀಳಿ ಶಾಶ್ವಿತಳಾದ ರಣಕೇಳಿಗೆ || ೨ ||

ಸಿಟ್ಟಿಲೆ ಮಹಿಷನನು ಶಿರಮೆಟ್ಟಿ ಸಂಹರಿಸಿ
ಕಷ್ಟವನು ಕಳಿದಂಥ ಮಹಾಲಕ್ಷ್ಮಿಗೆ ವಟ್ಟರಸಿ ಬರುವಂಥ
ಕೆಟ್ಟ ದೈತ್ಯರನೆಲ್ಲ ಕುಟ್ಟಿ ಸವರಿದ ವೀರ ಜಯಲಕ್ಷ್ಮಿಗೆ || ೩ ||

ಚಂಡಮುಂಡರದೋದ೯ಂಡ ದ್ಯೆತ್ಯರ ಶಿರವ
ಚಂಡಾಡಿ ಮೆರದಂಥ ಚಾಮುಂಡಿಗೆ
ಅಂಡಲೆದು ಒದರುತಲೆ ಬರುವಂಥ ಬಂಡರನು
ತುಂಡಾಗಿ ಖಂಡಿಸಿದ ಪ್ರಚಂಡಿಗೆ || ೪ ||

ಉದ್ಧಟರು ಶುಂಭ-ನಿಶುಂಭರೆಂಬುವರನ್ನು
ಯುದ್ಧದಲ್ಲಿ ಕೊಂದಂಥ ಬ್ರಹ್ಮಾಣಿಗೆ
ಸಿದ್ದ ಶಾಶ್ವಿತನಾದ ಗುಡಿಪುರದ ಕಲ್ಮಾನ
ಪೊದ್ದು ಪೊರೆದಿಹ ಗುರು ಕಲ್ಯಾಣಿಗೆ || ೫ ||
*****

 

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...