ಶ್ರೀ ದೇವಿ ದಂಡಕ

ಜಯ ಜಯತು ಜಗದಾಂಬೆ ಭಕ್ತರ ಕುಟುಂಬೆ
ಜಯ ಜಯತು ಜಗದಾಂಬೆ ಸಾಂಬೆ
ತ್ರಯ ಜಗವನೆಡಬಿಡದೆ ತುಂಬೆ ನಯ
ವಿನಯಗುಣ ಗಣಕದಂಬೆ
ಭಯ ಭಕ್ತಿಯಿಂ ಬೇಡಿಕೊಂಬೆ ||ಅ.ಪ||

ಏನು ಇಲ್ಲದಲಂದು ಓಂಕಾರ ಪ್ರಣಮದಿ
ನೀನು ಮೂಲದಿ ಬಂದು
ಅ-ಉ-ಮಾಕಾರವೆ ಸಾನುರಾಗದಿ ನಿಂದು ಜ್ಞಾನೌಘಸಿಂಧು
ತಾನೆ ಸ್ಥೂಲತಿಸೂಕ್ಷ್ಮಕಾರಣ
ಬಾನು ಬಹುರುಚಿ ವಿಶ್ವತೈಜಸವ
ಮಾನ ಪ್ರಜ್ಞಾನಿಸುವ ಜನನಿ ಮೌನ
ರಾಜಸ ಸತ್ವ ತಾಮಸ ಏನು ಇಲ್ದಿರಲಾಗ
ಅಜ ವಿಷ್ಣು ರುದ್ರರು ನಿನ್ನ ಸ್ಥುತಿಸಲು ಬೇಗ
ಪದರೇಣುವನು ಕೃಪೆಯಿಂದ ಪಾಲಿಸಿದಾಗ ಆನಂದ ರಾಗ
ಮಾನ ನಿಧಿ ಉತ್ಪತ್ಯ ಸ್ಥಿತಿ ಲಯ
ಮೌನಮುದ್ರಿ ಸಮಾಧಿಭೇದವು
ಭಾನುವಿನ ಓಲ್ ಬೆಳಗು ಮುಸುಗುವ-
ದೇನು ನಿನ್ನಾಧೀನ ತ್ರೈಜಗ
ನೀನೆ ನೀನೆಯು ತತ್ವ ಕಲ್ಪನೆ
ನೀನೆಯೆಂಬೆನು ಗಹನ ನಾನೆನೆ
ನಾನು ರಹಿತ ನಿರಾಳದೇವಿಗೆ ಜಯ ಜಯತು ಜಗದಾಂಬೆ ||೧||

ಓಂಕಾರಿ ಶರ್ವಾಣಿ ಆಖಳಾಂಡ ಜಗಮಯೆ
ಝೇಂಕಾರಿ ಸತ್ರಾಣಿ ಜಡಮೂಢ ಶುಂಭರ
ಹಂಕಾರಿ ನಿರ್ವಾಣಿ ಕಿಂಕರಪ್ರಾಣಿ
ಶಂಕರಿಯು ಶಿವೆ ಶಾಂಭವಿಯೆಂಬೆನಲು
ಭೀಂಕರಿಯು ಮಧುಕೈಟಭ್ರಾಂತಕಿ
ಓಂಕಾರಿಯು ಮಧುಪೀವಿರಕ್ತಬೀ-
ಜಾಂಕ ಮೂಲಕೆ ಕಾಲಭೈರವಿ
ಅಂಕ ವಿಜಯ ಶರಾಳಿ ಪ್ರತಿವೀರ-
ಗಂಕಣ ವಿಮಲ ಹಸ್ತಕರಾಳಿ ಧೀಂಕರವತಾಳಿ
ನೂಂಕಿ ಮಹಿಷನ ದಾಳಿ ಧೀಂಕರವತಾಳಿ
ಠೇಂಕರಿಸಿ ನಿಶಿಂಜಿನಿಧ್ವನಿ
ಭೋಂಕರಿಸಿ ವರಸಿಂಹ ನಾದದಿ
ಕೇಂಕರಿಸಿ ಹರಿ ಹವಕೆ ಹಾರಿದಿ
ಮುಂಕರಿದು ಮೃತವಾದದನುಜರ
ಆ೦ಕಿಲಾಲ ಕಿಲಾಲ ಕಿಲಿಕಿಲಿ
ಓಂ ಕಿಂ ಸೋಹಂ
ಸರ್ವದೇವರ ದೇವಿಗೆ ಜಯ ಜಯತು ಜಗದಾಂಚಿ ||೨||

ಸಕಲ ಲೋಕದ ಮಾತೆ ಪರಬ್ರಹ್ಮ ಮೂಲವೆ
ಪ್ರಕೃತಿ ನಿನ್ನಿಂದಾಯ್ತೆ ಪಂಚಾದಿ ತತ್ವವು
ವಿಕೃತಿ ನಿನ್ನಿಂ ಪೋಯೇ ನೀಂ ಪೃಥ್ವಿ ದೇವತೆ
ಥಕ ಥಕನೆ ಕುಣಿಸಿದೀ ಜಗವಖಿಲ ಸೂತ್ರದ ಬೊಂಬೆ ತೆರದಲಿ
ಸುಖ ವಿಲಾಸಿಯೆ ಬಹಳ ಮಾಯದಿ
ಪ್ರಕಟಿಸಿದೆ ಆಕಾಶ ನಿಮಿಷಕೆ
ಅಖಿಳ ವೇದಗಳನ್ನು ಇಂದ್ರಾ,ದಿ ಸುರಮುನಿ
ನಿಖಿಳರೂಪಗಳನ್ನು ಈರೇಳು ಭುವನದ
ಭಕ್ತವತ್ಸಲೆ ನೀನು ಮಂತ್ರಾದಿ ದೇವತೆ
ಚಕಿತಗುಣ ಗಣ ಚಂಚಢಾಳಿಯೆ
ರಕುತಬೀಜಾಂಶಾಪಹಾರಿಯೆ
ಕಕುಲತಿಲಿ ಮಹಮುಕ್ತಿದಾಯಕಿ
ಪ್ರಕಟ ಗುರುಗೋವಿಂದನಣುಗಗೆ
ಸುಖ ಸಾಯುಜ್ಯ ಕೊಡುವ
ಸಕಲದೇವರ ದೇವಿ ಪಾದಕೆ ಜಯ ಜಯತು ಜಗದಾಂಬೆ ||೩||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಕೃತಿ ಮತ್ತು ವಿಮರ್ಶಕ
Next post ದೀಪದ ಕಂಬ – ೬ (ಜೀವನ ಚಿತ್ರ)

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…