Home / ಕವನ / ಕವಿತೆ / ಶ್ರೀ ದೇವಿ ದಂಡಕ

ಶ್ರೀ ದೇವಿ ದಂಡಕ

ಜಯ ಜಯತು ಜಗದಾಂಬೆ ಭಕ್ತರ ಕುಟುಂಬೆ
ಜಯ ಜಯತು ಜಗದಾಂಬೆ ಸಾಂಬೆ
ತ್ರಯ ಜಗವನೆಡಬಿಡದೆ ತುಂಬೆ ನಯ
ವಿನಯಗುಣ ಗಣಕದಂಬೆ
ಭಯ ಭಕ್ತಿಯಿಂ ಬೇಡಿಕೊಂಬೆ ||ಅ.ಪ||

ಏನು ಇಲ್ಲದಲಂದು ಓಂಕಾರ ಪ್ರಣಮದಿ
ನೀನು ಮೂಲದಿ ಬಂದು
ಅ-ಉ-ಮಾಕಾರವೆ ಸಾನುರಾಗದಿ ನಿಂದು ಜ್ಞಾನೌಘಸಿಂಧು
ತಾನೆ ಸ್ಥೂಲತಿಸೂಕ್ಷ್ಮಕಾರಣ
ಬಾನು ಬಹುರುಚಿ ವಿಶ್ವತೈಜಸವ
ಮಾನ ಪ್ರಜ್ಞಾನಿಸುವ ಜನನಿ ಮೌನ
ರಾಜಸ ಸತ್ವ ತಾಮಸ ಏನು ಇಲ್ದಿರಲಾಗ
ಅಜ ವಿಷ್ಣು ರುದ್ರರು ನಿನ್ನ ಸ್ಥುತಿಸಲು ಬೇಗ
ಪದರೇಣುವನು ಕೃಪೆಯಿಂದ ಪಾಲಿಸಿದಾಗ ಆನಂದ ರಾಗ
ಮಾನ ನಿಧಿ ಉತ್ಪತ್ಯ ಸ್ಥಿತಿ ಲಯ
ಮೌನಮುದ್ರಿ ಸಮಾಧಿಭೇದವು
ಭಾನುವಿನ ಓಲ್ ಬೆಳಗು ಮುಸುಗುವ-
ದೇನು ನಿನ್ನಾಧೀನ ತ್ರೈಜಗ
ನೀನೆ ನೀನೆಯು ತತ್ವ ಕಲ್ಪನೆ
ನೀನೆಯೆಂಬೆನು ಗಹನ ನಾನೆನೆ
ನಾನು ರಹಿತ ನಿರಾಳದೇವಿಗೆ ಜಯ ಜಯತು ಜಗದಾಂಬೆ ||೧||

ಓಂಕಾರಿ ಶರ್ವಾಣಿ ಆಖಳಾಂಡ ಜಗಮಯೆ
ಝೇಂಕಾರಿ ಸತ್ರಾಣಿ ಜಡಮೂಢ ಶುಂಭರ
ಹಂಕಾರಿ ನಿರ್ವಾಣಿ ಕಿಂಕರಪ್ರಾಣಿ
ಶಂಕರಿಯು ಶಿವೆ ಶಾಂಭವಿಯೆಂಬೆನಲು
ಭೀಂಕರಿಯು ಮಧುಕೈಟಭ್ರಾಂತಕಿ
ಓಂಕಾರಿಯು ಮಧುಪೀವಿರಕ್ತಬೀ-
ಜಾಂಕ ಮೂಲಕೆ ಕಾಲಭೈರವಿ
ಅಂಕ ವಿಜಯ ಶರಾಳಿ ಪ್ರತಿವೀರ-
ಗಂಕಣ ವಿಮಲ ಹಸ್ತಕರಾಳಿ ಧೀಂಕರವತಾಳಿ
ನೂಂಕಿ ಮಹಿಷನ ದಾಳಿ ಧೀಂಕರವತಾಳಿ
ಠೇಂಕರಿಸಿ ನಿಶಿಂಜಿನಿಧ್ವನಿ
ಭೋಂಕರಿಸಿ ವರಸಿಂಹ ನಾದದಿ
ಕೇಂಕರಿಸಿ ಹರಿ ಹವಕೆ ಹಾರಿದಿ
ಮುಂಕರಿದು ಮೃತವಾದದನುಜರ
ಆ೦ಕಿಲಾಲ ಕಿಲಾಲ ಕಿಲಿಕಿಲಿ
ಓಂ ಕಿಂ ಸೋಹಂ
ಸರ್ವದೇವರ ದೇವಿಗೆ ಜಯ ಜಯತು ಜಗದಾಂಚಿ ||೨||

ಸಕಲ ಲೋಕದ ಮಾತೆ ಪರಬ್ರಹ್ಮ ಮೂಲವೆ
ಪ್ರಕೃತಿ ನಿನ್ನಿಂದಾಯ್ತೆ ಪಂಚಾದಿ ತತ್ವವು
ವಿಕೃತಿ ನಿನ್ನಿಂ ಪೋಯೇ ನೀಂ ಪೃಥ್ವಿ ದೇವತೆ
ಥಕ ಥಕನೆ ಕುಣಿಸಿದೀ ಜಗವಖಿಲ ಸೂತ್ರದ ಬೊಂಬೆ ತೆರದಲಿ
ಸುಖ ವಿಲಾಸಿಯೆ ಬಹಳ ಮಾಯದಿ
ಪ್ರಕಟಿಸಿದೆ ಆಕಾಶ ನಿಮಿಷಕೆ
ಅಖಿಳ ವೇದಗಳನ್ನು ಇಂದ್ರಾ,ದಿ ಸುರಮುನಿ
ನಿಖಿಳರೂಪಗಳನ್ನು ಈರೇಳು ಭುವನದ
ಭಕ್ತವತ್ಸಲೆ ನೀನು ಮಂತ್ರಾದಿ ದೇವತೆ
ಚಕಿತಗುಣ ಗಣ ಚಂಚಢಾಳಿಯೆ
ರಕುತಬೀಜಾಂಶಾಪಹಾರಿಯೆ
ಕಕುಲತಿಲಿ ಮಹಮುಕ್ತಿದಾಯಕಿ
ಪ್ರಕಟ ಗುರುಗೋವಿಂದನಣುಗಗೆ
ಸುಖ ಸಾಯುಜ್ಯ ಕೊಡುವ
ಸಕಲದೇವರ ದೇವಿ ಪಾದಕೆ ಜಯ ಜಯತು ಜಗದಾಂಬೆ ||೩||
*****

 

Tagged:

One Comment

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...