ಶ್ರೀ ದೇವಿ ದಂಡಕ

ಜಯ ಜಯತು ಜಗದಾಂಬೆ ಭಕ್ತರ ಕುಟುಂಬೆ
ಜಯ ಜಯತು ಜಗದಾಂಬೆ ಸಾಂಬೆ
ತ್ರಯ ಜಗವನೆಡಬಿಡದೆ ತುಂಬೆ ನಯ
ವಿನಯಗುಣ ಗಣಕದಂಬೆ
ಭಯ ಭಕ್ತಿಯಿಂ ಬೇಡಿಕೊಂಬೆ ||ಅ.ಪ||

ಏನು ಇಲ್ಲದಲಂದು ಓಂಕಾರ ಪ್ರಣಮದಿ
ನೀನು ಮೂಲದಿ ಬಂದು
ಅ-ಉ-ಮಾಕಾರವೆ ಸಾನುರಾಗದಿ ನಿಂದು ಜ್ಞಾನೌಘಸಿಂಧು
ತಾನೆ ಸ್ಥೂಲತಿಸೂಕ್ಷ್ಮಕಾರಣ
ಬಾನು ಬಹುರುಚಿ ವಿಶ್ವತೈಜಸವ
ಮಾನ ಪ್ರಜ್ಞಾನಿಸುವ ಜನನಿ ಮೌನ
ರಾಜಸ ಸತ್ವ ತಾಮಸ ಏನು ಇಲ್ದಿರಲಾಗ
ಅಜ ವಿಷ್ಣು ರುದ್ರರು ನಿನ್ನ ಸ್ಥುತಿಸಲು ಬೇಗ
ಪದರೇಣುವನು ಕೃಪೆಯಿಂದ ಪಾಲಿಸಿದಾಗ ಆನಂದ ರಾಗ
ಮಾನ ನಿಧಿ ಉತ್ಪತ್ಯ ಸ್ಥಿತಿ ಲಯ
ಮೌನಮುದ್ರಿ ಸಮಾಧಿಭೇದವು
ಭಾನುವಿನ ಓಲ್ ಬೆಳಗು ಮುಸುಗುವ-
ದೇನು ನಿನ್ನಾಧೀನ ತ್ರೈಜಗ
ನೀನೆ ನೀನೆಯು ತತ್ವ ಕಲ್ಪನೆ
ನೀನೆಯೆಂಬೆನು ಗಹನ ನಾನೆನೆ
ನಾನು ರಹಿತ ನಿರಾಳದೇವಿಗೆ ಜಯ ಜಯತು ಜಗದಾಂಬೆ ||೧||

ಓಂಕಾರಿ ಶರ್ವಾಣಿ ಆಖಳಾಂಡ ಜಗಮಯೆ
ಝೇಂಕಾರಿ ಸತ್ರಾಣಿ ಜಡಮೂಢ ಶುಂಭರ
ಹಂಕಾರಿ ನಿರ್ವಾಣಿ ಕಿಂಕರಪ್ರಾಣಿ
ಶಂಕರಿಯು ಶಿವೆ ಶಾಂಭವಿಯೆಂಬೆನಲು
ಭೀಂಕರಿಯು ಮಧುಕೈಟಭ್ರಾಂತಕಿ
ಓಂಕಾರಿಯು ಮಧುಪೀವಿರಕ್ತಬೀ-
ಜಾಂಕ ಮೂಲಕೆ ಕಾಲಭೈರವಿ
ಅಂಕ ವಿಜಯ ಶರಾಳಿ ಪ್ರತಿವೀರ-
ಗಂಕಣ ವಿಮಲ ಹಸ್ತಕರಾಳಿ ಧೀಂಕರವತಾಳಿ
ನೂಂಕಿ ಮಹಿಷನ ದಾಳಿ ಧೀಂಕರವತಾಳಿ
ಠೇಂಕರಿಸಿ ನಿಶಿಂಜಿನಿಧ್ವನಿ
ಭೋಂಕರಿಸಿ ವರಸಿಂಹ ನಾದದಿ
ಕೇಂಕರಿಸಿ ಹರಿ ಹವಕೆ ಹಾರಿದಿ
ಮುಂಕರಿದು ಮೃತವಾದದನುಜರ
ಆ೦ಕಿಲಾಲ ಕಿಲಾಲ ಕಿಲಿಕಿಲಿ
ಓಂ ಕಿಂ ಸೋಹಂ
ಸರ್ವದೇವರ ದೇವಿಗೆ ಜಯ ಜಯತು ಜಗದಾಂಚಿ ||೨||

ಸಕಲ ಲೋಕದ ಮಾತೆ ಪರಬ್ರಹ್ಮ ಮೂಲವೆ
ಪ್ರಕೃತಿ ನಿನ್ನಿಂದಾಯ್ತೆ ಪಂಚಾದಿ ತತ್ವವು
ವಿಕೃತಿ ನಿನ್ನಿಂ ಪೋಯೇ ನೀಂ ಪೃಥ್ವಿ ದೇವತೆ
ಥಕ ಥಕನೆ ಕುಣಿಸಿದೀ ಜಗವಖಿಲ ಸೂತ್ರದ ಬೊಂಬೆ ತೆರದಲಿ
ಸುಖ ವಿಲಾಸಿಯೆ ಬಹಳ ಮಾಯದಿ
ಪ್ರಕಟಿಸಿದೆ ಆಕಾಶ ನಿಮಿಷಕೆ
ಅಖಿಳ ವೇದಗಳನ್ನು ಇಂದ್ರಾ,ದಿ ಸುರಮುನಿ
ನಿಖಿಳರೂಪಗಳನ್ನು ಈರೇಳು ಭುವನದ
ಭಕ್ತವತ್ಸಲೆ ನೀನು ಮಂತ್ರಾದಿ ದೇವತೆ
ಚಕಿತಗುಣ ಗಣ ಚಂಚಢಾಳಿಯೆ
ರಕುತಬೀಜಾಂಶಾಪಹಾರಿಯೆ
ಕಕುಲತಿಲಿ ಮಹಮುಕ್ತಿದಾಯಕಿ
ಪ್ರಕಟ ಗುರುಗೋವಿಂದನಣುಗಗೆ
ಸುಖ ಸಾಯುಜ್ಯ ಕೊಡುವ
ಸಕಲದೇವರ ದೇವಿ ಪಾದಕೆ ಜಯ ಜಯತು ಜಗದಾಂಬೆ ||೩||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಕೃತಿ ಮತ್ತು ವಿಮರ್ಶಕ
Next post ದೀಪದ ಕಂಬ – ೬ (ಜೀವನ ಚಿತ್ರ)

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys