ಮಾಯಾವಿ

ಅಫಜಲ್‌ಗಂಜಿನಲ್ಲೊಂದು ದಿನ
ಅಲ್ಬುಕರ್ಕೆಂಬವನು ತನ್ನ
ಆಫೀಸಿನಿಂದ ಮರಳುತ್ತಿದ್ದವನು
ಮಾಯವಾದನು ಇದ್ಡಕ್ಕಿದ್ದ ಹಾಗೆ
ಚಾವಣಿಯಿಂದ ಹೊಗೆ
ನೆಲದಿಂದ ಧಗೆ
ಎದ್ದು ಹೋದ ಹಾಗೆ
(ಸಿನಿಮಾ ಕತೆಗಳ ಮಾದರಿ)
ಆದರಿದು ಮಾತ್ರ ಖಾತರಿ)

ಎಲ್ಲಿ ಹೋದನಲಲ್ಬುಕರ್ಕ
ಪರಿಪೂರ್ಣ ಕ್ಲರ್ಕ
ಏನಾಯಿತಿವನಿಗೊಳ್ಳೆ
ಕಟ್ಟುಮಸ್ತಾಗಿದ್ದಾತ
ಒಂದು ಹೆಣ್ಣೊಂದು ಗಂಡು
ಆದರ್ಶ ನಾರಿಯ ಕೈಹಿಡಿದ
ಸುಖ ಸಂಸಾರಿ!
ಅತ್ತಲೊಂದು ಹುಣಸೆಮರ
ಇತ್ತಲೊಂದು ಸರೋವರ
ರೈಲು ಹತ್ತಿದರಿನ್ನು ಸೋಲಾಪುರ

ಎಲ್ಲ ತಿಳಿದವನು ಒಬ್ಬನೇ ಒಬ್ಬ
ಮೋಯಿನುದ್ದೀನನೆಂಬ ಬಾಬ
ದಾಡಿಯೇ ಎರಡು ಮೊಳ
ಕಂಡವರಿಲ್ಲ ಕಣ್ಣುಗಳ ಆಳ
ಮಹಾ ಮೌನಿ-ವರ್ಷಕ್ಕೊಮ್ಮೆ ಮಾತ್ರ
ಮಾತನಾಡುವ ಜ್ಞಾನಿ
ಇದ್ದಾನೆ ಗೋಲ್ಕೊಂಡದ ಗವಿಯೊಳಗೆ
ಕಾಣಿಸದೆ ಕಣ್ಣಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ ಗೋಪಾಲ
Next post ಮರುಜನ್ಮ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…