ನುಡಿಯದಿದ್ದರೇನು ನೀನು ?

ನುಡಿಯದಿದ್ದರೇನು ನೀನು?
ನಿನ್ನ ಮೌನವನ್ನೆ ನಾನು
ಹೃದಯದಲ್ಲಿ ತುಂಬಿ,
ವಿರಹದಲ್ಲಿ ಬೇಯುತಿರುವೆ
ಅಲುಗದೆಯೇ ಕಾಯುತಿರುವ
ನಿನ್ನನ್ನೇ ನಂಬಿ.

ಚುಕ್ಕಿಗಣ್ಣ ಬಿಚ್ಚಿ ಇರುಳು
ತಲೆ ತಗ್ಗಿಸಿ ತಾಳಿ
ಕಾಯುವಂತೆ ಬಾಳುತಿರುವೆ
ನನ್ನ ನೋವ ಹೂಳಿ

ಬೆಳಗು ಬಂದೆ ಬರುವುದು
ಇರುಳು ಹರಿದೆ ಹರಿವುದು
ನಿನ್ನ ದನಿಯ ಸ್ವರ್ಣವರ್ಷ
ಆಗಸವನ ಭೇದಿಸಿ
ಜುಳು ಜುಳನಯೆ ತಿರೆಗಿಳಿವುದು
ವಿಶ್ವವನ್ನೆ ತೋಯಿಸಿ
ನನ್ನ ಹಕ್ಕಿಗೂಡಿನಿಂದ ಹರಿವ ಹಾಡುಗಳಲಿ
ನಿನ್ನ ನುಡಿಗೆ ರಕ್ಕೆ ಬಂದು ವನದೆಲ್ಲಾ ಗಿಡದಲಿ
ಹಸಿರೇಳಲಿ, ಹೂವರಳಲಿ ಮಧುರಚಿತ್ತ ಮೂಡಲಿ
ಹುಸಿಯ ಬೇಗೆ ತೀರಿ, ನಿಜದ ರಸಬಾಳುವ ತೆರೆಯಲಿ
*****
ರವೀಂದ್ರನಾಥ ಟಾಗೋರರ ಗೀತಾಂಜಲಿಯ ಭಾಗವೊಂದರ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೀಗದ ಕೈ
Next post ಬಿಸಿ ನೀರು

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys