Home / ಲೇಖನ / ವಿಜ್ಞಾನ / ‘ಕುಂಭಕರ್ಣ’ ಹಮ್ಮಿಂಗ್ ಬರ್ಡ್

‘ಕುಂಭಕರ್ಣ’ ಹಮ್ಮಿಂಗ್ ಬರ್ಡ್

ಚಿತ್ರ: ಮಿಕೆ ಎಸ್ಟೆಸ್

ಜಗತ್ತಿನಲ್ಲಿ ಅತಿ ಬಲಾಢ್ಯವಾದ ಜೀವಗಳ ಮಾತು ಬಂದಾಗ ನಮ್ಮ ಕಣ್ಮುಂದೆ ಆನೆ ಸಿಂಹಗಳ ಚಿತ್ರ ಮೂಡುತ್ತದೆ. ಆದರೆ ಹಕ್ಕಿಗಳಲ್ಲಿ ಅತಿ ಬಲಾಢ್ಯ ‘ಹಮ್ಮಿಂಗ್ ಬರ್ಡ್’. ಮಧ್ಯ ಅಮೇರಿಕದಲ್ಲಿ ಮಾತ್ರ ವಾಸಿಸುವ ಈ ಹಕ್ಕಿಗಳಲ್ಲಿ ಸುಮಾರು ೭೫೦ ಜಾತಿಗಳಿವೆ.

ಹಮ್ಮಿಂಗ್ ಬರ್ಡ್ ನಿತ್ಯ ತನ್ನ ತೂಕದ ಮೂರುಪಟ್ಟು ಆಹಾರವನ್ನು ಸೇವಿಸುತ್ತದೆ! ಇದರ ನಾಲಿಗೆ ಇಡೀ ದೇಹದಷ್ಟೇ ಉದ್ದವಾಗಿದೆ! ಈ ನಾಲಿಗೆಯೆಂದರೆ ಪೊಳ್ಳಾದ ಎರಡು ಕೊಳವೆಗಳೇ ಎನ್ನಬಹುದು. ಈ ಕೊಳವೆಗಳ ಮೂಲಕ ಇದು ತನ್ನ ಮುಖ್ಯ ಆಹಾರವಾದ ಹೂಗಳ ಮಕರಂಧ ಮತ್ತು ಕ್ರಿಮೀಕೀಟಗಳನ್ನು ಎಳೆದುಕೊಳ್ಳುತ್ತದೆ. ಇದು ಸಕ್ಕರೆಯಿಂದ ಅಪರಿಮಿತ ಶಕ್ತಿಯನ್ನು ಪಡೆಯುತ್ತದೆ. ನಿದ್ರೆಯ ಮಟ್ಟಿಗೆ ಇದು ಕುಂಭಕರ್ಣನಂತೆ. ರಾತ್ರಿಯಿಡೀ ನಿದ್ದೆಯಲ್ಲಿ ಕಳೆಯುತ್ತದೆ. ನಿದ್ದೆಯಲ್ಲಿದ್ದಾಗ ಹೆಚ್ಚು ಕಡಿಮೆ ಸತ್ತಂತೆಯೇ ಇರುವ ಈ ಹಕ್ಕಿಯನ್ನು ಕೈಹಾಕಿ ಸುಲಭವಾಗಿ ಎತ್ತಿಕೊಂಡು ಬರಬಹುದು. ಮನುಷ್ಯನ ಸ್ಪರ್ಶದ ಅರಿವು ಕೂಡ ಆಗ ಇದಕ್ಕಾಗುವುದಿಲ್ಲ!

ಅಗಾಧ ಶಕ್ತಿ
ಇದು ಆಕಾಶದಲ್ಲಿ ಒಂದೆಡೆ ಸ್ಥಿರವಾಗಿ ನಿಲ್ಲಬಲ್ಲದು. ಮುಂದೆ ಸಾಗಿದಂತೆ ಹಿಂದಕ್ಕೂ ಸಾಗಬಲ್ಲದು. ಅಡ್ಡವಾಗಿ ಹಾರಬಲ್ಲದು. ನೇರವಾಗಿ ಮೇಲಕ್ಕೂ ಏರಬಲ್ಲದು. ಇದರ ರೆಕ್ಕೆಗಳು ಪ್ರತಿ ಸೆಕೆಂಡಿಗೆ ೫೫ ಸಲ ಬಡಿಯುತ್ತಿರುತ್ತವೆ. ಇದು ತಾಸಿಗೆ ೬೦ ಮೈಲು ವೇಗದಲ್ಲಿ ಹಾರಬಲ್ಲದು. ಈ ವೇಗದಲ್ಲಿ ಹಾರುತ್ತಿರುವಾಗ ಇದರ ರೆಕ್ಕೆಗಳು ಸೆಕೆಂಡಿಗೆ ೨೦೦ ಸಲ ಚಲಿಸುತ್ತವೆ! ಚಳಿಗಾಲವನ್ನು ಪನಾಮಾದಲ್ಲಿ ಕಳೆಯಲು ಇದು ೫೦೦ ಮೈಲು ಹಾರಿ ಮೆಕ್ಸಿಕೊ ದಾಟಿ ಪನಾಮವನ್ನು ತಲಪುತ್ತದೆ. ೧೨ ತಾಸುಗಳ ಈ ಪ್ರವಾಸದಲ್ಲಿ ಅದು ಮಧ್ಯದಲ್ಲೆಲ್ಲಿಯೂ ನಿಲ್ಲದು. ಇದು ಶೇಖರಿಸಿಕೊಳ್ಳುವ ಕೊಬ್ಬು ೬೦೦ ಮೈಲು ದೂರದವರೆಗೆ ಹಾರಲು ಅದಕ್ಕೆ ಸಾಲುವಷ್ಟಿರುತ್ತದೆ.

ಈ ಹಕ್ಕಿಗೆ ಭಯವೆಂಬ ಶಬ್ಧವೇ ಗೊತ್ತಿಲ್ಲ. ೬೦ ಮೈಲು ವೇಗದಲ್ಲಿ ಹಾರುವ ಅದರ ಚುಂಚು ಬಲು ಭೀಕರವಾದ ಅಸ್ತ್ರವಾಗಿರುವುದರಿಂದ ಅದು ಯಾವ ಹಕ್ಕಿಯನ್ನೂ ಕಾಗೆ-ಗಿಡುಗ-ಹದ್ದುಗಳನ್ನು ಕೂಡ ನಿರ್ಭಯದಿಂದ ಎದುರಿಸುವುದು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...