ನೇತಾಜಿ

ಆರ್‍ಯಭೂಮಿಯ ಕಾಂತಿ ಮಾಸುತಿರೆ ದಿನ ದಿನಕೆ,
ಶತಮಾನ ಹಲವಾರು ಕಂಗೆಟ್ಟು ದಾಸ್ಯದಲಿ
ಕೊಳೆಯುತಿರೆ ಜನವೆಲ್ಲ ತಮ್ಮೊಂದು ಆತ್ಮಾಭಿ-
ಮಾನವನು ಘನತೆಯನು ವೀರ್ಯವನು ಶಕ್ತಿಯನು
ಕಳೆದುಳಿದು ಮೋಸದಾ ದ್ರೋಹದಾ ಉದರದಾ
ಹೇಡಿತನದಾ ಒಂದು ಕ್ಷುದ್ರಬಾಳನು ಕಳೆಯೆ,-
ಭಾರತಿಯೆ ಈ ಸ್ಥಿತಿಗೆ ನಾಚಿದಳು, ಬಾಗಿದಳು;
ಅಸಹಾಯಳಾದಳೀ ಕೋಟಿ ಮಕ್ಕಳು ಸಹಿತ!

ಸಿಡಿದುರಿದು ಹಾರಿದನು ವಂಗದೇಶದ ವೀರ
ಜನ್ಮಭೂಮಿಯ ಬದುಕ ಬವಣೆಯನು ನೋಡುತಲಿ!
ಸಾಮ್ರಾಜ್ಯವಾದಗಳ ಉಕ್ಕುಗೋಟೆಯ ಮುರಿದು
ಸರ್ವಮತಸೇನೆಯನು ‘ಜೈ ಹಿಂದ್’ ಮಂತ್ರವನು
ಆಸೇತುವಿಂದೊಗೆದ ದೇಶದಲಿ ಬಿತ್ತಿದನು.
ಅದೃಶ್ಯನಾದನಾ ಸಿಂಹ! ಸುಭಾಷ್ ಧನ್ಯನು ಹೌದು!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೬
Next post ಸೀತೆಯ ಭಾಗ್ಯ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…