ನೇತಾಜಿ

ಆರ್‍ಯಭೂಮಿಯ ಕಾಂತಿ ಮಾಸುತಿರೆ ದಿನ ದಿನಕೆ,
ಶತಮಾನ ಹಲವಾರು ಕಂಗೆಟ್ಟು ದಾಸ್ಯದಲಿ
ಕೊಳೆಯುತಿರೆ ಜನವೆಲ್ಲ ತಮ್ಮೊಂದು ಆತ್ಮಾಭಿ-
ಮಾನವನು ಘನತೆಯನು ವೀರ್ಯವನು ಶಕ್ತಿಯನು
ಕಳೆದುಳಿದು ಮೋಸದಾ ದ್ರೋಹದಾ ಉದರದಾ
ಹೇಡಿತನದಾ ಒಂದು ಕ್ಷುದ್ರಬಾಳನು ಕಳೆಯೆ,-
ಭಾರತಿಯೆ ಈ ಸ್ಥಿತಿಗೆ ನಾಚಿದಳು, ಬಾಗಿದಳು;
ಅಸಹಾಯಳಾದಳೀ ಕೋಟಿ ಮಕ್ಕಳು ಸಹಿತ!

ಸಿಡಿದುರಿದು ಹಾರಿದನು ವಂಗದೇಶದ ವೀರ
ಜನ್ಮಭೂಮಿಯ ಬದುಕ ಬವಣೆಯನು ನೋಡುತಲಿ!
ಸಾಮ್ರಾಜ್ಯವಾದಗಳ ಉಕ್ಕುಗೋಟೆಯ ಮುರಿದು
ಸರ್ವಮತಸೇನೆಯನು ‘ಜೈ ಹಿಂದ್’ ಮಂತ್ರವನು
ಆಸೇತುವಿಂದೊಗೆದ ದೇಶದಲಿ ಬಿತ್ತಿದನು.
ಅದೃಶ್ಯನಾದನಾ ಸಿಂಹ! ಸುಭಾಷ್ ಧನ್ಯನು ಹೌದು!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೧೬
Next post ಸೀತೆಯ ಭಾಗ್ಯ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

cheap jordans|wholesale air max|wholesale jordans|wholesale jewelry|wholesale jerseys