Home / ಲೇಖನ / ವಿಜ್ಞಾನ / ಉರುಬುವ ಹವ್ಯಾಸ ಬಿಡಿ

ಉರುಬುವ ಹವ್ಯಾಸ ಬಿಡಿ

ಚಿತ್ರ: ಮ್ಯಾಗೀ ಮೋರಿಲ್

ತಿಂಡಿ, ಕಾಫಿ, ಊಟ, ಮುಂತಾದ ಬಿಸಿ ಪದಾರ್ಥಗಳನ್ನು ತಣ್ಣಗಾಗಿಸಲು ಬಾಯಿಂದ ಉಸಿರು ಊದುವ ಹವ್ಯಾಸ ಬಹಳ ಜನರಲ್ಲಿದೆ. ಹಾಗೆ ಉರುಬುವುದು ತೀರ ತಪ್ಪು. ಅನಾವಶ್ಯಕ ಕೂಡ; ಪ್ರತಿಯೊಬ್ಬರ ಬಾಯಲ್ಲಿನ ಗಾಳಿ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ ಮತ್ತು ಜೊಲ್ಲಿನ ತುಂತುರಿನಿಂದೊಡಗೂಡಿ ತೇವವಾಗಿರುತ್ತದೆ. ಹೀಗೆ ಉರುಬಿದಾಗ ಬಾಯಿಯಿಂದ ಹೊರಟ ಗಾಳಿ ಆಹಾರ ಪಾನೀಯಗಳ ಮೇಲೆ ಜೊಲ್ಲಿನ ತುಂತುರು ಬೀಳುತ್ತದೆ. ತಮ್ಮದೇ ಆಹಾರವನ್ನು ತಾವು ಉರುಬಿಕೊಂಡರೆ ಪರವಾಗಿಲ್ಲ. ಆದರೆ ಎಷ್ಟೋ ವೇಳೆ ಇತರರು [ಮಕ್ಕಳಿಗೆ ತಿನ್ನಿಸುವಾಗ, ಕುಡಿಸುವಾಗ] ಉರುಬುವುದೇ ಹೆಚ್ಚು. ಹೊಟೇಲುಗಳಲ್ಲಿ ಹಾಲಿನ ಕೆನೆ ತೆಗೆಯಲು ಉರುಬಿ ತಮ್ಮ ಎಂಜಲನ್ನು ಎಷ್ಟೋ ಮಂದಿಗೆ ಹಂಚುತ್ತಾರೆ. ತಮಗೆ ಅರಿವಿಲ್ಲದೆ ಮನೆಯಲ್ಲೂ ಕೂಡ ಅಡಿಗೆ ಮಾಡುವ ಗೃಹಿಣಿಯರು ಅಥವಾ ಅಡಿಗೆಯವನು ಹೀಗೆ ಇತರರಿಗೆ ತನ್ನ ಎಂಜಲನ್ನು ಹಂಚುವುದುಂಟು.

ಹೀಗೆ ಮಾಡುವಾಗ ಉರುಲಿದವರ ಬಾಯಲ್ಲಿ ಇರಬಹುದಾದ ರೋಗ ಕ್ರಿಮಿಗಳು ಮತ್ತು ದುರ್ಗಂಧ ಇತರರಿಗೂ ಹಂಚಿಕೆಯಾಗುತ್ತದೆ. ಇದರಿಂದ ಹಲವು ರೋಗ ಹರಡಲು ಸಹಕಾರಿಯಾಗುತ್ತದೆ. ಶ್ವಾಸಕೋಶ [ತೊಳ್ಳೆ]ದಲ್ಲಿನ ಕ್ಷಯ ನಾಯಿಕೆಮ್ಮು ದಡಾರ ಸಿತಾಳ ಸಿಡುಬು ಮುಂತಾದ ಹಲವು ಬಗೆಯ ಕಾಯಿಲೆಗಳು ಹರಡುವ ಸಾಧ್ಯತೆಯಿದೆ. ಹೀಗಾಗಿ ಜನತೆಯ ಹಿತಕ್ಕೆ ಧಕ್ಕೆ ತರುವ ಈ ಅಭ್ಯಾಸ ಏಕೆ ಬೇಕು? ಬಿಸಿ ಆರಿಸಿಕೊಳ್ಳಬೇಕಾದಾಗ ರಟ್ಟು, ಮಂದವಾದ ಕಾಗದ ಅಥವಾ ಬೀಸಣಿಗೆಯನ್ನು ಬಳಸಬಹುದು.

ಅಪಾಯ:

ಬಸಿಯಲ್ಲಿ ಚಹ ಕುಡಿಯುವುದು ಅಸಭ್ಯ ಲಕ್ಷಣವೆಂದು ಭಾವಿಸುವ ಜನರೆಷ್ಟೋ ಉಂಟು. ಅಸಭ್ಯ ಲಕ್ಷಣವೆನಿಸಿದರೂ ಹೀಗೆ ಕುಡಿಯುವುದು ಆರೋಗ್ಯ ದೃಷ್ಠಿಯಿಂದ ಬಹಳ ಒಳ್ಳೆಯದು. ಇದರಿಂದ ಬಹಳ ಬಿಸಿಯಾದ ಚಹ ಹೊಟ್ಟೆಗೆ ಹೋಗುವುದಿಲ್ಲ. ಬಹಳ ಬಿಸಿಯಾದ ಚಹ ಉದರ ಕೋಶದ ಗೋಡೆಗಳಿಗೆ ಅಪಾಯವುಂಟುಮಾಡುವುದು. ಆದ್ದರಿಂದ ಚಹ, ಹಾಲು ಏನೇ ಕುಡಿಯುವಾಗ ಬಸಿಯಲ್ಲೇ ಕುಡಿಯಿರಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...