Home / ಲೇಖನ / ವಿಜ್ಞಾನ / ಉರುಬುವ ಹವ್ಯಾಸ ಬಿಡಿ

ಉರುಬುವ ಹವ್ಯಾಸ ಬಿಡಿ

ಚಿತ್ರ: ಮ್ಯಾಗೀ ಮೋರಿಲ್

ತಿಂಡಿ, ಕಾಫಿ, ಊಟ, ಮುಂತಾದ ಬಿಸಿ ಪದಾರ್ಥಗಳನ್ನು ತಣ್ಣಗಾಗಿಸಲು ಬಾಯಿಂದ ಉಸಿರು ಊದುವ ಹವ್ಯಾಸ ಬಹಳ ಜನರಲ್ಲಿದೆ. ಹಾಗೆ ಉರುಬುವುದು ತೀರ ತಪ್ಪು. ಅನಾವಶ್ಯಕ ಕೂಡ; ಪ್ರತಿಯೊಬ್ಬರ ಬಾಯಲ್ಲಿನ ಗಾಳಿ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ ಮತ್ತು ಜೊಲ್ಲಿನ ತುಂತುರಿನಿಂದೊಡಗೂಡಿ ತೇವವಾಗಿರುತ್ತದೆ. ಹೀಗೆ ಉರುಬಿದಾಗ ಬಾಯಿಯಿಂದ ಹೊರಟ ಗಾಳಿ ಆಹಾರ ಪಾನೀಯಗಳ ಮೇಲೆ ಜೊಲ್ಲಿನ ತುಂತುರು ಬೀಳುತ್ತದೆ. ತಮ್ಮದೇ ಆಹಾರವನ್ನು ತಾವು ಉರುಬಿಕೊಂಡರೆ ಪರವಾಗಿಲ್ಲ. ಆದರೆ ಎಷ್ಟೋ ವೇಳೆ ಇತರರು [ಮಕ್ಕಳಿಗೆ ತಿನ್ನಿಸುವಾಗ, ಕುಡಿಸುವಾಗ] ಉರುಬುವುದೇ ಹೆಚ್ಚು. ಹೊಟೇಲುಗಳಲ್ಲಿ ಹಾಲಿನ ಕೆನೆ ತೆಗೆಯಲು ಉರುಬಿ ತಮ್ಮ ಎಂಜಲನ್ನು ಎಷ್ಟೋ ಮಂದಿಗೆ ಹಂಚುತ್ತಾರೆ. ತಮಗೆ ಅರಿವಿಲ್ಲದೆ ಮನೆಯಲ್ಲೂ ಕೂಡ ಅಡಿಗೆ ಮಾಡುವ ಗೃಹಿಣಿಯರು ಅಥವಾ ಅಡಿಗೆಯವನು ಹೀಗೆ ಇತರರಿಗೆ ತನ್ನ ಎಂಜಲನ್ನು ಹಂಚುವುದುಂಟು.

ಹೀಗೆ ಮಾಡುವಾಗ ಉರುಲಿದವರ ಬಾಯಲ್ಲಿ ಇರಬಹುದಾದ ರೋಗ ಕ್ರಿಮಿಗಳು ಮತ್ತು ದುರ್ಗಂಧ ಇತರರಿಗೂ ಹಂಚಿಕೆಯಾಗುತ್ತದೆ. ಇದರಿಂದ ಹಲವು ರೋಗ ಹರಡಲು ಸಹಕಾರಿಯಾಗುತ್ತದೆ. ಶ್ವಾಸಕೋಶ [ತೊಳ್ಳೆ]ದಲ್ಲಿನ ಕ್ಷಯ ನಾಯಿಕೆಮ್ಮು ದಡಾರ ಸಿತಾಳ ಸಿಡುಬು ಮುಂತಾದ ಹಲವು ಬಗೆಯ ಕಾಯಿಲೆಗಳು ಹರಡುವ ಸಾಧ್ಯತೆಯಿದೆ. ಹೀಗಾಗಿ ಜನತೆಯ ಹಿತಕ್ಕೆ ಧಕ್ಕೆ ತರುವ ಈ ಅಭ್ಯಾಸ ಏಕೆ ಬೇಕು? ಬಿಸಿ ಆರಿಸಿಕೊಳ್ಳಬೇಕಾದಾಗ ರಟ್ಟು, ಮಂದವಾದ ಕಾಗದ ಅಥವಾ ಬೀಸಣಿಗೆಯನ್ನು ಬಳಸಬಹುದು.

ಅಪಾಯ:

ಬಸಿಯಲ್ಲಿ ಚಹ ಕುಡಿಯುವುದು ಅಸಭ್ಯ ಲಕ್ಷಣವೆಂದು ಭಾವಿಸುವ ಜನರೆಷ್ಟೋ ಉಂಟು. ಅಸಭ್ಯ ಲಕ್ಷಣವೆನಿಸಿದರೂ ಹೀಗೆ ಕುಡಿಯುವುದು ಆರೋಗ್ಯ ದೃಷ್ಠಿಯಿಂದ ಬಹಳ ಒಳ್ಳೆಯದು. ಇದರಿಂದ ಬಹಳ ಬಿಸಿಯಾದ ಚಹ ಹೊಟ್ಟೆಗೆ ಹೋಗುವುದಿಲ್ಲ. ಬಹಳ ಬಿಸಿಯಾದ ಚಹ ಉದರ ಕೋಶದ ಗೋಡೆಗಳಿಗೆ ಅಪಾಯವುಂಟುಮಾಡುವುದು. ಆದ್ದರಿಂದ ಚಹ, ಹಾಲು ಏನೇ ಕುಡಿಯುವಾಗ ಬಸಿಯಲ್ಲೇ ಕುಡಿಯಿರಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...