Home / ಲೇಖನ / ವಿಜ್ಞಾನ / ಉರುಬುವ ಹವ್ಯಾಸ ಬಿಡಿ

ಉರುಬುವ ಹವ್ಯಾಸ ಬಿಡಿ

ಚಿತ್ರ: ಮ್ಯಾಗೀ ಮೋರಿಲ್

ತಿಂಡಿ, ಕಾಫಿ, ಊಟ, ಮುಂತಾದ ಬಿಸಿ ಪದಾರ್ಥಗಳನ್ನು ತಣ್ಣಗಾಗಿಸಲು ಬಾಯಿಂದ ಉಸಿರು ಊದುವ ಹವ್ಯಾಸ ಬಹಳ ಜನರಲ್ಲಿದೆ. ಹಾಗೆ ಉರುಬುವುದು ತೀರ ತಪ್ಪು. ಅನಾವಶ್ಯಕ ಕೂಡ; ಪ್ರತಿಯೊಬ್ಬರ ಬಾಯಲ್ಲಿನ ಗಾಳಿ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ ಮತ್ತು ಜೊಲ್ಲಿನ ತುಂತುರಿನಿಂದೊಡಗೂಡಿ ತೇವವಾಗಿರುತ್ತದೆ. ಹೀಗೆ ಉರುಬಿದಾಗ ಬಾಯಿಯಿಂದ ಹೊರಟ ಗಾಳಿ ಆಹಾರ ಪಾನೀಯಗಳ ಮೇಲೆ ಜೊಲ್ಲಿನ ತುಂತುರು ಬೀಳುತ್ತದೆ. ತಮ್ಮದೇ ಆಹಾರವನ್ನು ತಾವು ಉರುಬಿಕೊಂಡರೆ ಪರವಾಗಿಲ್ಲ. ಆದರೆ ಎಷ್ಟೋ ವೇಳೆ ಇತರರು [ಮಕ್ಕಳಿಗೆ ತಿನ್ನಿಸುವಾಗ, ಕುಡಿಸುವಾಗ] ಉರುಬುವುದೇ ಹೆಚ್ಚು. ಹೊಟೇಲುಗಳಲ್ಲಿ ಹಾಲಿನ ಕೆನೆ ತೆಗೆಯಲು ಉರುಬಿ ತಮ್ಮ ಎಂಜಲನ್ನು ಎಷ್ಟೋ ಮಂದಿಗೆ ಹಂಚುತ್ತಾರೆ. ತಮಗೆ ಅರಿವಿಲ್ಲದೆ ಮನೆಯಲ್ಲೂ ಕೂಡ ಅಡಿಗೆ ಮಾಡುವ ಗೃಹಿಣಿಯರು ಅಥವಾ ಅಡಿಗೆಯವನು ಹೀಗೆ ಇತರರಿಗೆ ತನ್ನ ಎಂಜಲನ್ನು ಹಂಚುವುದುಂಟು.

ಹೀಗೆ ಮಾಡುವಾಗ ಉರುಲಿದವರ ಬಾಯಲ್ಲಿ ಇರಬಹುದಾದ ರೋಗ ಕ್ರಿಮಿಗಳು ಮತ್ತು ದುರ್ಗಂಧ ಇತರರಿಗೂ ಹಂಚಿಕೆಯಾಗುತ್ತದೆ. ಇದರಿಂದ ಹಲವು ರೋಗ ಹರಡಲು ಸಹಕಾರಿಯಾಗುತ್ತದೆ. ಶ್ವಾಸಕೋಶ [ತೊಳ್ಳೆ]ದಲ್ಲಿನ ಕ್ಷಯ ನಾಯಿಕೆಮ್ಮು ದಡಾರ ಸಿತಾಳ ಸಿಡುಬು ಮುಂತಾದ ಹಲವು ಬಗೆಯ ಕಾಯಿಲೆಗಳು ಹರಡುವ ಸಾಧ್ಯತೆಯಿದೆ. ಹೀಗಾಗಿ ಜನತೆಯ ಹಿತಕ್ಕೆ ಧಕ್ಕೆ ತರುವ ಈ ಅಭ್ಯಾಸ ಏಕೆ ಬೇಕು? ಬಿಸಿ ಆರಿಸಿಕೊಳ್ಳಬೇಕಾದಾಗ ರಟ್ಟು, ಮಂದವಾದ ಕಾಗದ ಅಥವಾ ಬೀಸಣಿಗೆಯನ್ನು ಬಳಸಬಹುದು.

ಅಪಾಯ:

ಬಸಿಯಲ್ಲಿ ಚಹ ಕುಡಿಯುವುದು ಅಸಭ್ಯ ಲಕ್ಷಣವೆಂದು ಭಾವಿಸುವ ಜನರೆಷ್ಟೋ ಉಂಟು. ಅಸಭ್ಯ ಲಕ್ಷಣವೆನಿಸಿದರೂ ಹೀಗೆ ಕುಡಿಯುವುದು ಆರೋಗ್ಯ ದೃಷ್ಠಿಯಿಂದ ಬಹಳ ಒಳ್ಳೆಯದು. ಇದರಿಂದ ಬಹಳ ಬಿಸಿಯಾದ ಚಹ ಹೊಟ್ಟೆಗೆ ಹೋಗುವುದಿಲ್ಲ. ಬಹಳ ಬಿಸಿಯಾದ ಚಹ ಉದರ ಕೋಶದ ಗೋಡೆಗಳಿಗೆ ಅಪಾಯವುಂಟುಮಾಡುವುದು. ಆದ್ದರಿಂದ ಚಹ, ಹಾಲು ಏನೇ ಕುಡಿಯುವಾಗ ಬಸಿಯಲ್ಲೇ ಕುಡಿಯಿರಿ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ