Home / ಕವನ / ಕವಿತೆ / ಎರಡು ದಂಡೆಗಳ ನಡುವೆ

ಎರಡು ದಂಡೆಗಳ ನಡುವೆ

ಹೊಳೆಯ ಆ ದಂಡೆಯಲಿ
ಸುಂದರ ಜನ
ಕಣ್ಣ ಕುಕ್ಕುತ್ತಾರೆ

ತುಂಬಿ ಹರಿವ ಹೊಳೆ
ಸಿಹಿ ನೀರು
ಅವರ ಹೊಲಗದ್ದೆಗಳಿಗೆ
ಅಲ್ಲಿ ಮೀಯುವ ಮೀನು
ಅವರ ಗಂಗಾಳಕೆ
ಆ ಹಸಿರು ಕಾಡು
ಅಲ್ಲಿ ಜಿಗಿದಾಡುವ ಜಿಂಕೆ
ಕುಣಿವ ನವಿಲು
ಉಲಿವ ಹಕ್ಕಿಗಳು
ಅವರ ಸಂತೋಷಕೆ

ಕಣ್ಣು ಕುಕ್ಕುತ್ತಾರೆ
ಲಕಲಕ ಅವರು
ಬಿಸಿಲು ಬಿದ್ದ ಕನ್ನಡಿ

ಈ ದಂಡೆಯಲಿ
ನನ್ನಕ್ಕ ತಂಗಿಯರು
ಅಣ್ಣ ತಮ್ಮಗಳು
ಹೊಳೆಯ
ನೀರು ಮುಟ್ಟಲು ದೂರ
ಬಲು ದೂರ
ಕಣ್ಣು ಕಾಣುವವರೆಗೆ ಮುಳ್ಳು
ಕಲ್ಲುಗಳ ನಡುವೆ
ಬಿಸಿಲು ಕುದುರೆಯ ಓಟ
ಕಾಗೆ ಗೂಬೆ ಹದ್ದುಗಳೇ ಇವರ
ಜೀವದ ಗೆಳೆಯರು

ಕಣ್ಣು ಕುಕ್ಕುವುದಿಲ್ಲ ಇವರು
ಎದೆಯ ಮೂಳೆಗಳು
ಹೊಟ್ಟೆಯ ಕರುಳು
ಕಣ್ಣೊಳಗಿನ ಸಾವು
ಅಡ್ಡ ನಿಲ್ಲುತ್ತವೆ

ಆ ದಂಡೆಯ ಜನರಿಂದು
ಕಟ್ಟಬೇಕಿದೆ
ಸುಂದರ
ಶಾಶ್ವತ ಸೇತುವೆಯೊಂದ

ಕೈ ಜೋಡಿಸಬೇಕಿದೆ
ಈ ದಂಡೆಯ ಜನರು
ಬೊಗಸೆಯಲಿ
ತಿಳಿನೀರು ತುಂಬಿ
ಹೊಟ್ಟೆ ತುಂಬಾ ಕುಡಿಯಲು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...