ಎರಡು ದಂಡೆಗಳ ನಡುವೆ

ಹೊಳೆಯ ಆ ದಂಡೆಯಲಿ
ಸುಂದರ ಜನ
ಕಣ್ಣ ಕುಕ್ಕುತ್ತಾರೆ

ತುಂಬಿ ಹರಿವ ಹೊಳೆ
ಸಿಹಿ ನೀರು
ಅವರ ಹೊಲಗದ್ದೆಗಳಿಗೆ
ಅಲ್ಲಿ ಮೀಯುವ ಮೀನು
ಅವರ ಗಂಗಾಳಕೆ
ಆ ಹಸಿರು ಕಾಡು
ಅಲ್ಲಿ ಜಿಗಿದಾಡುವ ಜಿಂಕೆ
ಕುಣಿವ ನವಿಲು
ಉಲಿವ ಹಕ್ಕಿಗಳು
ಅವರ ಸಂತೋಷಕೆ

ಕಣ್ಣು ಕುಕ್ಕುತ್ತಾರೆ
ಲಕಲಕ ಅವರು
ಬಿಸಿಲು ಬಿದ್ದ ಕನ್ನಡಿ

ಈ ದಂಡೆಯಲಿ
ನನ್ನಕ್ಕ ತಂಗಿಯರು
ಅಣ್ಣ ತಮ್ಮಗಳು
ಹೊಳೆಯ
ನೀರು ಮುಟ್ಟಲು ದೂರ
ಬಲು ದೂರ
ಕಣ್ಣು ಕಾಣುವವರೆಗೆ ಮುಳ್ಳು
ಕಲ್ಲುಗಳ ನಡುವೆ
ಬಿಸಿಲು ಕುದುರೆಯ ಓಟ
ಕಾಗೆ ಗೂಬೆ ಹದ್ದುಗಳೇ ಇವರ
ಜೀವದ ಗೆಳೆಯರು

ಕಣ್ಣು ಕುಕ್ಕುವುದಿಲ್ಲ ಇವರು
ಎದೆಯ ಮೂಳೆಗಳು
ಹೊಟ್ಟೆಯ ಕರುಳು
ಕಣ್ಣೊಳಗಿನ ಸಾವು
ಅಡ್ಡ ನಿಲ್ಲುತ್ತವೆ

ಆ ದಂಡೆಯ ಜನರಿಂದು
ಕಟ್ಟಬೇಕಿದೆ
ಸುಂದರ
ಶಾಶ್ವತ ಸೇತುವೆಯೊಂದ

ಕೈ ಜೋಡಿಸಬೇಕಿದೆ
ಈ ದಂಡೆಯ ಜನರು
ಬೊಗಸೆಯಲಿ
ತಿಳಿನೀರು ತುಂಬಿ
ಹೊಟ್ಟೆ ತುಂಬಾ ಕುಡಿಯಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿಯುವ ಹೊಳೆಗೂ
Next post ಗಗನ ಸಖಿಯರು ೧

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys