ಸರತಿಯಲಿ ನಿಂತವರು

ಸಾವು ಮಾರಾಟಕ್ಕಿದೆ ಇಲ್ಲಿ
ಜಗದ ಮಾರುಕಟ್ಟೆಯಲ್ಲಿ
ತಕ್ಕಡಿಯ ಒಂದು ಬದಿ
ಹಸಿವು
ಕಲ್ಲಾಗಿದೆ
ಇನ್ನೊಂದು ಬದಿ
ಗ್ರೆನೇಡುಗಳು ಹಿಟ್ಟಿನ
ಮುದ್ದೆ!

ಹೊಟ್ಟೆಯೊಳಗಿಂದಲೇ ಬೆನ್ನು ಕಾಣುವ
ಸಣ್ಣ ಕಂದಮ್ಮಗಳ ಎದೆಯ
ಗೂಡಲ್ಲಿ
ಇನ್ನೂ ಜೀವವಿದೆ
ತೂರಿ
ಆಟವಾಡುತ್ತಿವೆ ಕೈ
ಬಾಂಬುಗಳನ್ನೇ ಚೆಂಡೆಂದು

ಬತ್ತಿದ ಮೊಲೆಯ ತಾಯಂದಿರು
ಬಂದೂಕುಗಳ ಹಿಡಿದು
ಒಲೆ ಹಚ್ಚಿದರೆ
ಅನ್ನದ ಡಬರಿಯಲಿ ತಮ್ಮದೇ
ಕೂಸುಗಳು
ಕುದಿಯುತ್ತಿವೆ ಕೊತ ಕೊತ
ಸಣ್ಣ ಕರುಳು, ಬೋಟಿ, ಖಲೀಜ

ಅಂಗಳದಿ ಅಪ್ಪಂದಿರು ರಾತ್ರಿ
ಯ ಚಳಿ ಕಾಯಿಸಲು
ಹುಡುಕಬೇಕಿಲ್ಲ
ಯಾವ ಹುಲ್ಲಿನ ಬಣವೆಯನ್ನೂ
ಹಾರುವ ವಿಮಾನಗಳು ಖಂಡಿತ
ಉದುರಿಸುತ್ತವೆ ಮಿಸೈಲು
ಬಾಂಬು
ಬೆಂಕಿ ಸಹಿತ

ರಕ್ತದ ರುಚಿ ಹೊತ್ತ
ಸಾವು
ತೂಗುವ ತಕ್ಕಡಿಗೆ
ಗೆದ್ದಲು ಹಿಡಿಯುವ ದಿನ
ದೂರವಿಲ್ಲ
ಸರತಿಯಲಿ ನಿಂತವರು
ನಾವೇ
ಕೊನೆಯಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರದು ಯಾರದು ಯಾರದು?
Next post ಮ್ಯಾಟಿನಿ ಶೋ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…