ಪ್ರತಿಬಿಂಬ

ಅಪ್ಪ ಪ್ರತಿ ಬಿಂಬ
ಅಮ್ಮ ಗತಿ ಬಿಂಬ
ಮಕ್ಕಳು ‘ಕರಿ’ ಬಿಂಬ!


‘ಹೌದು! ಅಂದವರ್‍ಯಾರು?
ನಮ್ಮನ್ನು ತಬ್ಬಲಿಗಳೆಂದು?
ಅಪ್ಪ, ಅಮ್ಮರಿಲ್ಲದಾ ಅನಾಥರೆಂದು?!’


ಅಕ್ಕನ ನೋಡು:
ಅಪ್ಪನ ಹೋಲಿಕೆ!
ಮಾತು, ಕಥೆ, ವ್ಯಥೆ…
ಎಲ್ಲ ಟಂಕಸಾಲೆಯಂತೆ!
ನೋಟುಗಳ ಮುದ್ರಣದಂತೆ!
ಅಪ್ಪಟ ಝೆರಾಕ್ಸ್ ಪ್ರತಿಗಳಂತೆ!!


ಇನ್ನು ಅಮ್ಮ-ತಮ್ಮನಂತೆ!
ಮೂಗು ಅಳ್ಳಿ ಮೂಗು,
ಮುಶಿಣಿ ಹಂದಿಯಂತೆ,
ಹಲ್ಲುಗಳು ಕೊಪ್ಪೆ ಪಾಸಿನಂತೆ!
ಕೈಕಾಲುಗಳು:
ಕಾಗೆ, ಕೋಳಿ, ಗುಬ್ಬಿಯಂತೆ!


‘ಅಂದವರ್‍ಯಾರು?
ನಾವು ಬೇರೆ ಬೇರೆಂದು??’…
ಮಕ್ಕಳು, ಮರಿಮೊಮ್ಮಕ್ಕಳು…
ಅಪ್ಪ ಅಮ್ಮರ ಪಡಿಯಚ್ಚಿನಂತೆ!


ಚರಿತ್ರೆಯೆಂದರೆ… ನಮ್ಮದು!
ಈ ಜಗವ ಸೃಷ್ಟಿಸಿದಾ… ತಾತ, ಮುತ್ತಾರದು!
ಇತಿಹಾಸ ಸೃಷ್ಠಿಸಲು,
ಹೊಸತು ರಚಿಸಲು
ಸಾಧ್ಯ ಸಾಧ್ಯ…
ಈ ನಮ್ಮ ಮನೆ, ಮನಗಳ, ವ್ಯಥೆ, ಕಥೆಯಿಂದ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೈಕಮಾಂಡ್
Next post ಗಂಗಜ್ಜಿ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys