ಒಣ ಪಾಂಡಿತ್ಯ

ಬಹಳವನ್ನು ಅರಿತ ಒಬ್ಬ ಬ್ರಾಹ್ಮಣನಿಗೆ ತಲೆ ನಿಲ್ಲುತಿರಲಿಲ್ಲ. ತನ್ನ ಪ್ರಖರ ಪಾಂಡಿತ್ಯಕ್ಕೆ ಬೆಂಕಿ ಕೂಡ ತನ್ನನ್ನು ಸುಡಲಾರದೆಂದು ಹೆಮ್ಮೆ ಪಡುತ್ತಿದ್ದ. ಪ್ರಖರ ಪಾಂಡಿತ್ಯದ ತೇಜದ ಮುಂದೆ ಬೆಂಕಿ ನಿಸ್ತೇಜವೆನ್ನುತಿದ್ದ. ಒಮ್ಮೆ ಅವನ ಮನೆಗೆ ಒಬ್ಬ ಸನ್ಯಾಸಿ ಬಂದ.

ಇವನ ಒಣ ಪಾಂಡಿತ್ಯಕ್ಕೆ ಬುದ್ಧಿ ಕಲಿಸಬೇಕೆಂದು ಕೊಂಡನು. ಅಡುಗೆಮನೆಯ ಉರಿಯುವ ಒಲೆಯಲ್ಲಿ ತನ್ನ ಕಮಂಡಲವನ್ನು ಎಸೆದು “ಎಲಾ! ಬ್ರಾಹ್ಮಣ ಉರಿಯುತ್ತಿರುವ ನನ್ನ ಕಮಂಡಲ ಕೈಯಿಂದ ತೆಗೆದುಕೊಡು” ಎಂದು ಕೇಳಿದನು.

ಸನ್ಯಾಸಿಯ ಎದಿರು ತನ್ನ ಪಾಂಡಿತ್ಯದ ಪ್ರಾತಾಪ ತೋರಿಸಲು ಕೈ ಹಾಕಿ ಕಮಂಡಲವನ್ನು ತೆಗೆಯಲು ಹೋಗಿ ಕೈ ಸುಟ್ಟು ಕೊಂಡ.

ಬ್ರಾಹ್ಮಣ ಸುಟ್ಟ ಹಸಿ ಘಾಯದಲ್ಲಿ ತನ್ನ ಒಣ ಪಾಂಡಿತ್ಯವನ್ನು ಸುಟ್ಟು ಮರೆತು ಬಿಟ್ಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಗ ಬೇಕಲ್ಲವೇ? ಇಳೆಯ ಕಳೆಯ ಕಾಣಲು
Next post ರಸಿಕ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…