Home / ಲೇಖನ / ವಿಜ್ಞಾನ / ಆಮ್ಲ ಮಳೆ

ಆಮ್ಲ ಮಳೆ

water-464953_960_720ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಮಾರಕವಾದ ಆಮ್ಲ ಮಳೆ ಅತ್ಯಂತ ಅಪಾಯಕಾರಿ.  ಈ ಮಳೆಯಿಂದಾಗುವ ಅನಾಹುತಗಳನ್ನು ಅರಿಯಲು ಜಪಾನ್, ಚೀನಾ ಸೇರಿದಂತೆ ಹತ್ತು ರಾಷ್ಟ್ರಗಳು ಜಪಾನ್‌ನಲ್ಲಿ ಸಭೆ ಸೇರಲಿವೆ.  ಇಲ್ಲಿ ರಚಿಸಲಾಗುವ ಸಂಘಟನೆಯು ಏಷ್ಯಾದಲ್ಲಿ ಸುರಿಯುವ ಆಮ್ಲ ಮಳೆಯ ಪರಿಣಾಮಗಳನ್ನು ಅಧ್ಯಯನ ಮಾಡಲಿದೆ.

ಈ ದಿನಗಳಲ್ಲಿ ದಿನಕ್ಕೊಂದು ಕಾರ್ಖಾನೆ ತಲೆಯೆತ್ತುತ್ತಿದೆ.  ಇವುಗಳ ಜೀವಾಳ ಕಲ್ಲಿದ್ದಲು ಮತ್ತು ತೈಲ ಅನಿಲಗಳು.  ಈ ಉದ್ಯಮಗಳು ಹೊರ ಚೆಲ್ಲುವ ರಾಸಾಯನಿಕ ವಸ್ತುಗಳು, ರಾಸಾಯನಿಕ ಇಂಧನಗಳನ್ನು ಬಳಸುವ ವಾಹನಗಳಿಂದ ಹೊರಚೆಲ್ಲುವ ಹೊಗೆ, ಕೃಷಿಗಾಗಿ ಬಳಸುವ ಗೊಬ್ಬರ  ಕ್ರಿಮಿನಾಶಕಗಳೂ, ಯುದ್ದಕ್ಕಾಗಿಯೇ ಸೃಷ್ಟಿಸಲಾದ ಮಾರಕ ವಿಷಾನಿಲಗಳು ವಾತಾವರಣವನ್ನು ಒಂದೇ ಸಮನೇ ಮಲಿನಗೊಳಿಸುತ್ತಿವೆ.  ಈ ವಿಷಾನಿಲಗಳಲ್ಲಿ ಗಂಧಕದ ಡೈ ಆಕ್ಸೈಡ್ ಅಲ್ಲದೆ ಸಾರಜನಕದ ಆಕ್ಸೈಡ್ ವಾಯುಮಂಡಲದಲ್ಲಿ ಸೇರಿಕೊಂಡ ಮೇಲೆ ಅಲ್ಲಿರುವ ಆಮ್ಲಜನಕ ಹಾಗೂ ನೀರಾವಿಗಳೊಂದಿಗೆ ಬೆರೆತು ಸಲ್ಫ್ಯೂರಿಕ್ ಆಮ್ಲ ಹಾಗೂ ನೈಟ್ರಿಕಾಮ್ಲಗಳಾಗಿ ಪರಿವರ್ತನೆ ಹೊಂದುತ್ತವೆ.  ಇವು ಮಳೆಯೊಂದಿಗೆ ಬೆರೆತು ಭೂಮಿಗೆ ಇಳಿಯುತ್ತವೆ.

ಮಳೆಯ ಸಾಮಾನ್ಯ ಪಿ.ಹೆಚ್. ಅಂಶವು ೫.೬ರಷ್ಟಿರುತ್ತದೆ.  ಆದರೆ ಪಿ.ಹಚ್. ಮಟ್ಟವು ಇದಕ್ಕಿಂತ ಕಡಿಮೆ ಆದಾಗ ಅದು ಆಮ್ಲ ಮಳೆಯಾಗುತ್ತದೆ.  ಪಿ.ಹೆಚ್. ಕಡಿಮೆ ಇರುವ ಮಳೆಯಾದರೆ ಮನುಷ್ಯರ ಮೈಮೇಲೆ ಬೊಬ್ಬೆಗಳು ಏಳಬಹುದು.  ಕೆರೆ, ನದಿ, ಸಮುದ್ರಗಳಲ್ಲಿ ಸೇರಿ ಅಲ್ಲಿಯ ಜಲಚರಗಳ ನಶಿಸುವಿಕೆಗೆ ಕಾರಣವಾಗುತ್ತದೆ.  ಆಮ್ಲದ ಅಂಶ ಮೀನುಗಳ ಶರೀರವನ್ನು ಸೇರಿದಾಗ ಎಲುಬುಗಳಲ್ಲಿರುವ ಕ್ಯಾಲ್ಸಿಯಂ ಅಂಶವನ್ನು ಕರಗುವಂತೆ ಮಾಡಿ ಮೂಳೆಗಳನ್ನು ಮೃದುವನ್ನಾಗಿ ಮಾಡಿ ಅವುಗಳ ಸಾವಿಗೆ ಕಾರಣವಾಗುತ್ತದೆ.

ಈಗಾಗಲೇ ಆಮ್ಲ ಮಳೆ ಯೂರೋಪ್ ಬ್ರಿಟನ್ ಅಮೆರಿಕಾಗಳಲ್ಲಿ ಕಾಣಿಸಿಕೊಂಡು ದುಷ್ಪರಿಣಾಮ ಬೀರಿದೆ.  ಕೆನಡಾದಲ್ಲಿ ಸುಮಾರು ೧೪,೦೦೦ ಕೆರೆ, ಸರೋವರಗಳು ಆಮ್ಲ ಮಳೆಯಿಂದಾಗಿ ಬರಿದಾಗಿವೆ.  ನಲವತ್ತು ಸಾವಿರ ಕೆರೆಗಳು ಆಮ್ಲದಿಂದ ತುಂಬಿವೆ. ಚಿಕ್ಕ ಪುಟ್ಟ ಜಲಚರಗಳಲ್ಲದೆ ಅಸಂಖ್ಯ ಸಾಲ್ಮನ್ ಮೀನುಗಳು ಬಲಿಯಾಗಿವೆ.

ಭಾರತವೂ ಈ ಅಪಾಯದಿಂದ ಹೊರತಿಲ್ಲ.  ಹೈದರಾಬಾದ್‌ನ ವಿವಿಧೆಡೆಗಳಲ್ಲಿ ಆಮ್ಲ ಮಳೆ ಬಿದ್ದ ವರದಿಯಾಗಿದೆ.  ಆದರೆ ಈ ಆಮ್ಲ ಮಳೆ ಹೆಚ್ಚಿನ ಹಾನಿ ಮಾಡುವಷ್ಟು ತೀರ್ವವಾಗಿಲ್ಲ ಹಾಗೂ ಇದು ಮುಂದುವರೆದರೆ ಮುಂದಾಗುವ ಹಾನಿಗಳ ಸೂಚನೆಯನ್ನು ಕೊಟ್ಟಿದೆ.  ಮಥುರಾ ತೈಲ ಶುದ್ಧಿಕರಣ ಕಾರ್ಖಾನೆಯಿಂದ ಹೊರ ಬರುವ ಆಮ್ಲ ಅನಿಲಗಳು, ಆಗ್ರಾದ ತಾಜ್‌ಮಹಲ್‌ನ ಸೌಂದರ್ಯಕ್ಕೆ ಕುತ್ತಾಗಿದೆ.  ಭರತ್‌ಪುರ ಪಕ್ಷಿಧಾಮದ ಸರೋವರವು ಆಮ್ಲಾಂಶ ಹೊಂದಿರುವುದರಿಂದ ನೀರ ಹಕ್ಕಿಗಳು ಭೇಟಿ ಕೊಡುವುದನ್ನು ನಿಲ್ಲಿಸಿವೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...