ಯೌವನ

ಜಿಟಿಜಿಟಿ ಮಳೆಯ ಮುಂಜಾವು
ಚಿಟ್ಟೆಗಳಿಗೆ ಬಿಚ್ಚಿಕೊಳ್ಳುವ ಚಡಪಡಿಕೆ
ಎಷ್ಟು ಚೆಂದ ಎಷ್ಟು ಮೃದು ಎಷ್ಟು ಚಳಿ!

ಮಳೆಯೊಳಗೆ ನೆನೆದ ಪೇಪರ ಹುಡುಗ
ಹಾಡುತ್ತ ನಗುತ್ತ
ತೊಯ್ದ ಪೇಪರ ಎಸೆದು ಸೈಕಲ್ ಹತ್ತಿದ

ದೇಹಕಂಟಿದ ದುಪಟ್ಟ ಚೂಡಿದಾರ ತೊಯ್ದ
ಕೆಲಸದ ಹುಡುಗಿಗೆ ಸಂಕೋಚ

ಯಾರಿಗೂ ಟವಲ್ ಬೆಚ್ಚನೆಯ ಬಟ್ಟೆ
ಬೇಡವಂತೆ, ಕಾಫಿ ಎಂದರೆ ನಗು-

ಬಿಸಿ ಬಿಸಿ ಸುದ್ದಿ ಕೊಡುವ
ಪೇಪರ ಕೂಡಾ ಆರಿ ಬಿಗಿದಿತ್ತು

ಹೊದ್ದ ಶಾಲು ತೆಗೆದೊಗೆದು
ಕಾಫಿ ಸುರುವಿ
ಬರಿಗಾಲಿನಲಿ ಹೊರನಡೆದು
ಮಳೆಯಲಿ ನಿಂತದ್ದೇನು ಮಜ.

ಹಸಿರು ಹುಲ್ಲು ಕಾಲಿಗೆ
ಮಳೆರಾಜನ ಮುದ್ದುಗಳು ಮೈತುಂಬಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೯೫
Next post ಕಳವು

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…