ಯುದ್ಧ

ನಾನು ನನ್ನ ದೇಶದ ಗಡಿಯನ್ನು
ಕೊಳೆಯದ ಹೆಣಕ್ಕೆ ಹೋಲಿಸುತ್ತೇನೆ.
ನಿತ್ಯ ಕಾವಲು ಕಾಯುವ ನೂರು
ಕಣ್ಣುಗಳಿಗಾಗಿ ದುಃಖಿಸುತ್ತೇನೆ.

ಹಸಿರು ಉಸಿರಾಡದ ಮರಗಳಿಗಾಗಿ
ಗೂಡು ಕಟ್ಟದ ಹಕ್ಕಿಗಳಿಗಾಗಿ
ಬೇವನ್ನೆ ನೆಚ್ಚಿ ಸಾಯುವ ಕೋಗಿಲೆಗಳಿಗಾಗಿ
ದುಃಖಿಸುತ್ತೇನೆ.

ನೀರವತೆಯಲ್ಲಿ ನರ್ತಿಸುವ
ಸದ್ದುಗಳ-ಆಕ್ರಂದನಗಳ
ಜುಗಲಬಂದಿ
ನನ್ನನ್ನು ಕಂಗೆಡಿಸುತ್ತದೆ.

ಕೆಂಪು ಸೂರ್ಯನನ್ನು ಹಣೆಗಿರಿಸಿಕೊಂಡು
ಹಳದಿ ಸೇವಂತಿಗೆಯನ್ನು ಮುಡಿಗಿರಿಸಿಕೊಂಡು
ನರೀಕ್ಷೆಯಲ್ಲೆ ನಲುಗಿಹೋಗುವ
ನೂರು ಹೆಣ್ಣುಗಳಿಗಾಗಿ ದುಃಖಿಸುತ್ತೇನೆ.

ಬೆಳದಿಂಗಳ ರಾತ್ರಿಗಳನ್ನು
ಮಲ್ಲಿಗೆ ಹಗಲುಗಳನ್ನು
ಮುದ್ದಿಸಬೇಕಾದ ಕಣ್ಣುಗಳು
ಯಮನ ಕಣ್ಣುಗಳಲ್ಲಿ
ಮುಗುಳು ನಗುವುದು
ನನ್ನನ್ನು ಕಂಗೆಡಿಸುತ್ತದೆ.

ಯುದ್ಧ ನನ್ನನ್ನು ಕಂಗೆಡಿಸುತ್ತದೆ.
ಬುದ್ಧ ನನ್ನನ್ನು ಸಂತೈಸುತ್ತಾನೆ.


Previous post ದೂರ ಹತ್ತಿರ
Next post ಅಪವ್ಯಯ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys