ಕುಲಬಂಧು ಕೆಲದಲ್ಲೇ
ಪರದೇಶಿಯಾಗುವನು
ಬದುಕಿದ್ದು ನಿಷ್ಕ್ರೀಯನು
ಜಡ ದೇಹದೊಡೆಯನು
ಹಗಲಿರುಳು ಮಲಗಿರಲು
ಸಾಧನೆಯು ಹೇಗೆ?
ಗಾಳಿ ಗೋಪುರ ಕಟ್ಟಿ
ಮನಸಲ್ಲೇ ಮೆಲ್ಲೆ
ಗೂಡಂಗಡಿಯ ಕಟ್ಟೆ
ಹಾದಿ ಬೀದಿಯ ಚಿಟ್ಟೆ
ತೊಟ್ಟಿಕ್ಕಿ ಜಿನುಗುತಿದೆ ಸಂಪತ್ತು ರಾಶಿ
ಅರಿತಿದ್ದೊ ಅಪವ್ಯಯ
ದಿನನಿತ್ಯ ಸೋಸಿ
ತರವಲ್ಲ ತಗಿ
ಕುಳಿತು ತಿನ್ನುವ ತವಕ
ಕಲ್ಲಾಗಿ ಕರ್ಮಕ್ಕೆ
ಹೊರೆಯಾಗಿ ಧರ್ಮಕ್ಕೆ
ಹಂಗಿನಾಳಾಗಿ ಜೀವಿತಕ್ಕೆ
ಕಾಯಕದ ಸಹವಾಸ
ಸಮೃದ್ಧಿ ಅವಾಸ
ಏಳು ಎದ್ದೇಳು
ಹೋರಾಟ ಬದುಕು
ಸಂಭ್ರಮದ ಹೊಳೆಯಲಿ ಈಜು ಮಿಂದಾಡು
ಬಂದದ್ದು ಬರಲೆಂಬ ಭಂಡ ಧೈರ್ಯವು ಇರಲಿ
ಸಾಧನೆಯ ಹಾದಿಯಲಿ ಕುಶಲತೆಯು ಬರಲಿ
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.