ಅಪವ್ಯಯ

ಕುಲಬಂಧು ಕೆಲದಲ್ಲೇ
ಪರದೇಶಿಯಾಗುವನು
ಬದುಕಿದ್ದು ನಿಷ್ಕ್ರೀಯನು
ಜಡ ದೇಹದೊಡೆಯನು

ಹಗಲಿರುಳು ಮಲಗಿರಲು
ಸಾಧನೆಯು ಹೇಗೆ?
ಗಾಳಿ ಗೋಪುರ ಕಟ್ಟಿ
ಮನಸಲ್ಲೇ ಮೆಲ್ಲೆ

ಗೂಡಂಗಡಿಯ ಕಟ್ಟೆ
ಹಾದಿ ಬೀದಿಯ ಚಿಟ್ಟೆ
ತೊಟ್ಟಿಕ್ಕಿ ಜಿನುಗುತಿದೆ ಸಂಪತ್ತು ರಾಶಿ
ಅರಿತಿದ್ದೊ ಅಪವ್ಯಯ
ದಿನನಿತ್ಯ ಸೋಸಿ

ತರವಲ್ಲ ತಗಿ
ಕುಳಿತು ತಿನ್ನುವ ತವಕ
ಕಲ್ಲಾಗಿ ಕರ್ಮಕ್ಕೆ
ಹೊರೆಯಾಗಿ ಧರ್ಮಕ್ಕೆ
ಹಂಗಿನಾಳಾಗಿ ಜೀವಿತಕ್ಕೆ

ಕಾಯಕದ ಸಹವಾಸ
ಸಮೃದ್ಧಿ ಅವಾಸ
ಏಳು ಎದ್ದೇಳು
ಹೋರಾಟ ಬದುಕು
ಸಂಭ್ರಮದ ಹೊಳೆಯಲಿ ಈಜು ಮಿಂದಾಡು
ಬಂದದ್ದು ಬರಲೆಂಬ ಭಂಡ ಧೈರ್ಯವು ಇರಲಿ
ಸಾಧನೆಯ ಹಾದಿಯಲಿ ಕುಶಲತೆಯು ಬರಲಿ


Previous post ಯುದ್ಧ
Next post ನಾಯಿ ಹಾಗೂ ನಾಯಿಯ ಗೊಂಬೆ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…