ಅಪವ್ಯಯ

ಕುಲಬಂಧು ಕೆಲದಲ್ಲೇ
ಪರದೇಶಿಯಾಗುವನು
ಬದುಕಿದ್ದು ನಿಷ್ಕ್ರೀಯನು
ಜಡ ದೇಹದೊಡೆಯನು

ಹಗಲಿರುಳು ಮಲಗಿರಲು
ಸಾಧನೆಯು ಹೇಗೆ?
ಗಾಳಿ ಗೋಪುರ ಕಟ್ಟಿ
ಮನಸಲ್ಲೇ ಮೆಲ್ಲೆ

ಗೂಡಂಗಡಿಯ ಕಟ್ಟೆ
ಹಾದಿ ಬೀದಿಯ ಚಿಟ್ಟೆ
ತೊಟ್ಟಿಕ್ಕಿ ಜಿನುಗುತಿದೆ ಸಂಪತ್ತು ರಾಶಿ
ಅರಿತಿದ್ದೊ ಅಪವ್ಯಯ
ದಿನನಿತ್ಯ ಸೋಸಿ

ತರವಲ್ಲ ತಗಿ
ಕುಳಿತು ತಿನ್ನುವ ತವಕ
ಕಲ್ಲಾಗಿ ಕರ್ಮಕ್ಕೆ
ಹೊರೆಯಾಗಿ ಧರ್ಮಕ್ಕೆ
ಹಂಗಿನಾಳಾಗಿ ಜೀವಿತಕ್ಕೆ

ಕಾಯಕದ ಸಹವಾಸ
ಸಮೃದ್ಧಿ ಅವಾಸ
ಏಳು ಎದ್ದೇಳು
ಹೋರಾಟ ಬದುಕು
ಸಂಭ್ರಮದ ಹೊಳೆಯಲಿ ಈಜು ಮಿಂದಾಡು
ಬಂದದ್ದು ಬರಲೆಂಬ ಭಂಡ ಧೈರ್ಯವು ಇರಲಿ
ಸಾಧನೆಯ ಹಾದಿಯಲಿ ಕುಶಲತೆಯು ಬರಲಿ


Previous post ಯುದ್ಧ
Next post ನಾಯಿ ಹಾಗೂ ನಾಯಿಯ ಗೊಂಬೆ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…