Home / ಕವನ / ಕವಿತೆ / ಒಂದು ಆಲದ ಮರ

ಒಂದು ಆಲದ ಮರ


ಈ ಆಲದ ಮರವನ್ನು ನೋಡಿ: ಇದರ ಕೆಳಗೆ ಯಾವ ಮಕ್ಕಳೂ
ಆಡಲಿಲ್ಲ, ಇದರ ಎಲೆಗಳು ಗಾಳಿಯ ಓಟಕ್ಕೆ ಗಲಗಲಿಸಲಿಲ್ಲ,
ಇದರ ಕೊಂಬೆಗಳಿಂದ ಯಾರೂ ನೇಣುಹಾಕಿಕೊಳ್ಳಲಿಲ್ಲ-
ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೆ?
ಅತ್ಯಂತ ನೀರಸವಾದ ಈ ಮರದ ಕಾಂಡದ ಮೇಲೆ
ಚುನಾವಣಾಪತ್ರಗಳನ್ನು ಅಂಟಿಸುವುದಿತ್ತು.  ಈ ದಾರಿಯಾಗಿ ಹೋಗುವ
ಕೆಲಸದ ಹೆಂಗಸರು ಮರೆಯಲ್ಲಿ ಕೂತು ಉಚ್ಚೆ
ಹೊಯ್ಯುವುದಿತ್ತು.  ಒಮ್ಮೆ ಕೆಲವು ಪಡ್ಡೆಹುಡುಗರು ಇದರ ಮೇಲೆ
ಏನೇನೋ ಹೆಸರುಗಳನ್ನು ಕೊರೆಯಲು ಪ್ರಯತ್ನಿಸಿದ್ದರು.


ಈ ಆಲದ ಮರವನ್ನು ಗಮನಿಸಿ:  ಇದರ ತೊಗಟೆಗಳು
ಒಬ್ಬ ವೃದ್ಧನ ಮೈಯಂತೆ ಸುಕ್ಕುಗಟ್ಟಿವೆ ಎಂದರೆ
ಏನನ್ನೂ ಹೇಳಿದಂತಾಗಲಿಲ್ಲ-ಯಾಕೆಂದರೆ ನಿಜವಾಗಿ ಹೇಳುವುದಿದ್ದರೆ
ಇವು ಮರಗಟ್ಟಿವೆ.  ಮತ್ತು ಇದರ ಬಳಲುಗಳು ಬೆರಳಿಲ್ಲದ
ತೋಳುಗಳಂತೆ ಇಳಿಬಿದ್ದಿವೆ ಎಂದರೆ ಈ ಆಲದಮರವನ್ನು
ಬಣ್ಣಿಸಿದಂತಾಗಲಿಲ್ಲ.  ಯಾಕೆಂದರೆ ಅದು ಮನಸ್ಸಿಗೆ ತರುವುದು
ಶನಿವಾರ-ರವಿವಾರವೆಂದಿಲ್ಲದೆ ಈ ಪೇಟೆಯ ಬೀದಿಗಳಲ್ಲಿ
ಕೈಚಾಚುವ ಭಿಕ್ಷುಕರನ್ನು.


ಹೀಗೆ ನಾವು ಹೋಲಿಕೆಗಳನ್ನು ಕೊಡುವಾಗ ಕೆಲವು ಸಂದರ್ಭಗಳಲ್ಲಿ
ಮರವು ಮನುಷ್ಯನನ್ನೂ ಮನುಷ್ಯನು ಮರವನ್ನೂ
ಸೂಚಿಸುವ ಕಾರಣ
ಹೋಲಿಸದಿರೋಣ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...