ಯಾರೋ ತಾಪಸಿ ನೀನು?
ರಂಭೆಯೆ ಕರೆದರು ತೆಪ್ಪಗೆ ಕೂತಿಹೆ
ಎಂಥಾ ಮರುಳನೊ ನೀನು?
ಅಮೃತವ ಹೀರಿ ಮುಪ್ಪನು ತೂರಿ
ಅಪ್ಸರೆಶಯ್ಯೆಯ ಸೇರಿ
ಸುಖಿಸಲು ತಾನೇ ಈ ತಪವೆಲ್ಲಾ
ಭೋಗದ ಎಲ್ಲೆಯ ಮೀರಿ
ಗೀತದಿ ಅರಳಿಸಿ ನೃತ್ಯದಿ ಕೆರಳಿಸಿ
ಅಮಲಿನ ಅಂಚಿಗೆ ಸಲಿಸಿ
ಮಾದಕ ರೂಪದ ಮೈಯಲಿ ಮೀಯಿಸಿ
ಜೇನು ಉಣಿಸುವಳು ನಾನು.
ಆಸೆಯ ಕೊಂದು, ಒಳಗೇ ಬೆಂದು
ಬಾಳನು ಕೊಳೆಸುವರೇನೋ?
ಇಂದ್ರಭೋಗಕೂ ಇಂದ್ರಿಯ ಬೇಕು
ಅದನೇ ಹಳಿಯುವರೇನೋ?
* ಊರ್ವಶಿ ನಾಟಕದ ಒಂದು ಗೀತೆ
****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಕೃಷ್ಣಭಕ್ತರ ಕುಣಿತ - April 15, 2021
- ಸೀನಿಯರ್ ಕ್ರಿಕೆಟಿಗನ ಸಂಜೆ - April 8, 2021
- ಅರ್ಧಸತ್ಯದ ಪ್ರಾಪ್ತಿ - April 1, 2021