Home / ಲೇಖನ / ವಿಜ್ಞಾನ / ಮಾಲಿನ್ಯ ರಹಿತ ಪ್ಲಾಸ್ಟಿಕ್

ಮಾಲಿನ್ಯ ರಹಿತ ಪ್ಲಾಸ್ಟಿಕ್

ಈಗಿರುವ ಪ್ಲಾಸ್ಟಿಕ್ ವಾಯುಮಾಲಿನ್ಯ, ಜಲಮಾಲಿನ್ಯ, ಮಾಡುತ್ತ ಮನುಕುಲಕ್ಕೆ ಮಾರಕವಾಗಬಲ್ಲದೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಎಷ್ಟು ವರ್ಷಗಳಾದರೂ ಮಣ್ಣಿನಲ್ಲಿ ಕರಗದ ಈ ಪ್ಲಾಸ್ಟಿಕ್ ಅಸಂಖ್ಯಾತ ಮೂಕ ಪ್ರಾಣಿಗಳ ಬಲಿ ತೆಗೆದುಕೊಂಡಿದ್ದರೆ, ಭೂಮಿಯನ್ನು ಶುಷ್ಕಗೊಳಿಸುವಲ್ಲಿ ಅತಂಕಗೊಳಿಸಿ ಸಸ್ಯಗಳ ಬೆಳವಣಿಗೆ- ಯಾದಂತೆ ಮಾಡುತ್ತಿರುವುದೊಂದು ದುರಂತ. ಈ ಕಾರಣವಾಗಿ ಪರಿಸರಕ್ಕೆ ಮಾರಕವಾಗದೇ ಇರುವ ಮತ್ತು ಈಗಿನ ಪ್ಲಾಸ್ಟಿಕ್‌ನಂತೆ ಪಾರದರ್ಶಕವಾಗಿರುವ ಹೊಸ ಆವಿಷ್ಕಾರದ ಶೋಧನೆಯನ್ನು ವಿಜ್ಞಾನಿಗಳು ಮಾಡುತ್ತಲೇ
ಬರುತ್ತಿದ್ದಾರೆ.

ಕ್ರಿ.ಶ. 1879ರಲ್ಲಿಯೇ ಮಣ್ಣಿನಲ್ಲಿ ಕರಗಿ ಹೋಗುವ ಸಕ್ಕರೆಯ ಕಣಗಳಿಂದ ತಯಾರಿಸಿದ ಪ್ಲಾಸ್ಟಿಕ್ ಅನ್ನು ಅಮೇರಿಕದ ಮುದ್ರಕರೊಬ್ಬರು ಮೊಟ್ಟ ಮೊದಲ ಬಾರಿಗೆ ತಯಾರಿಸಿದ್ದರು. ಇದು ಬೆಳವಣಿಗೆ ಹೊಂದುವುದರಲ್ಲಿಯೇ 1909ರಲ್ಲಿ ಪೆಟ್ರೋಲಿಯಂ ಆಧಾರಿತ ಕೃತಕ ಪ್ಲಾಸ್ಟಿಕ್ ಬಂದ ನಂತರ ಮೊದಲಿನ ಪ್ಲಾಸ್ಟಿಕ್ ಮೂಲೆ ಗುಂಪಾಗಿ ಹೋಯಿತು.
ನಂತರ ಇದೇ ಒಂದು ಪರಿಸರಕ್ಕೆ ಮಾರಕವಾಗಿ ಕಾಡತೊಡಗಿತು.

ಸರಳವಾದ ಕ್ರಾಂತಿಕಾರಿ ತಂತ್ರ ಬಳಸಿ ಪ್ಲಾಸ್ಟಿಕ್ ತಯಾರಿಸಿದಲ್ಲಿ ಈ ಭೂಖಂಡ ಬಚಾವಾಗುವುದೆಂದು ಅರಿತ ವಿಜ್ಞಾನಿಗಳು “ಅಲ್ಕಾನಿಗೇನಿಸ್” ಒಂದು ಜಾತಿಯ ಬ್ಯಾಕ್ಟೀರಿಯಾದ ದೇಹದಲ್ಲಿ ಪ್ಲಾಸ್ಟಿಕ್‌ನಂತಹ ವಸ್ತುಸಂಗ್ರಹ- ವಾಗುತ್ತದೆಂದು ತಿಳಿಯಿತು. ಈ ಏಕಕೋಶ ಜೀವಿಗಳಲ್ಲಿ ತಮ್ಮ ತೂಕದ ಶೇಕಡ 99 ಭಾಗ ಪ್ಲಾಸ್ಟಿಕ್ ಜಿಗುಟು ದ್ರವ ಇದೆ ಎಂದು ವರ್ಜಿನಿಯಾದ ವಿಜ್ಞಾನಿಗಳು ಕಂಡುಹಿಡಿದರು. ಈ ಬ್ಯಾಕ್ಟೀರಿಯಾಗಳ ವಂಶವಾಹಿನಿಯನ್ನು ಅಭಿವೃದ್ಧಿ ಪಡಿಸಿ ಅಗತ್ಯವಿರುವಷ್ಟು ಪ್ಲಾಸ್ಟಿಕ್ ತಯಾರಿಸಬಹುದು. ಈ ತಂತ್ರವನ್ನು ಅಮೇರಿಕಾದಂತಹ ದೇಶವು ಹಿಂದುಳಿದ ರಾಷ್ಟ್ರಗಳಿಗ ಬಿಟ್ಟು ತೊಡದೇ ತಮ್ಮ ಹಳೆ ತಂತ್ರಜ್ಞಾನವನ್ನೇ ಸಾಗುಹಾಕುತ್ತದಾದ್ದರಿಂದ ಈಗಿನ ಪ್ಲಾಸ್ಟಿಕ್ ಸುಗ್ಗಿ ಹೆಚ್ಚಿ ಪರಿಸರ ನಾಶವಾಗುತ್ತಿರುವುದು. ಮುಂದೊಂದು ದಿನ ಈ ಹೊಸ ಫಲಶೃತಿಯನ್ನು ಅನುಭವಿಸುವ
ಕಾಲವೂ ಬರಬಹುದು.

ಇನ್ನೊಂದು ಸಂತೋಷದ ಸುದ್ದಿ ಎಂದರೆ ಜೋಳದ ತೆನೆಯಿಂದ ಹಾಗೂ ಕಾಳುಗಳಿಂದ ಮಣ್ಣಿನಲ್ಲಿ ಒಂದಾಗುವ ಪ್ಲಾಸ್ಟಿಕ್ ಅನ್ನು ತಯಾರಿಸಿಬುದೆಂದು ಇನ್ನೊಂದೆಡೆ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಮೇರಿಕಾದ ರಾಷ್ಟ್ರೀಯ ಪ್ರಯೋಗ ಶಾಲೆಯಲ್ಲಿ ಅಲೂಗಡ್ಡೆ ಸಿಪ್ಪೆಯಿಂದ ಪ್ಲಾಸ್ಟಿಕ್‌ನ್ನು ಈಗಾಗಲೇ ತಯಾರಿಸುತ್ತಿದ್ಧಾರೆ. ಉತ್ತರ ಭೂಭಾಗದಲ್ಲಿ ವಾಸಿಸುವ ಜನರು ರಾಶಿ ರಾಶಿ ಆಲೂಗಡ್ಡೆಯನ್ನು ತಿನ್ನುತ್ತಾರೆ ಮತ್ತು ಬಹುತೇಕ ಕಡೆ ಆಲೂಗಡ್ಡೆ- ಯನ್ನು ಯತೇಚ್ಚವಾಗಿ ಬೆಳೆಯಲಾಗುತ್ತದೆ. ಈ ಸಿಪ್ಪೆಯನ್ನೆಲ್ಲ ಪ್ಲಾಸ್ಟಿಕ್ ತಯಾರಿಸಲು ಬಳಸಿದರೆ ಇಂದಿನ ಪರಿಸರ
ಮಾಲಿನ್ಯದ ಸಮಸ್ಯೆಗ ಉತ್ತರ ಸಿಗಬಹುದು. ಇದು ಜೈವಿಕ ಪ್ಲಾಸ್ಟಿಕ್ ತಯಾರಿಸುವ ತಂತ್ರವಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...