Home / ಕವನ / ಕವಿತೆ / ಕಾಲ ಬ್ರಹ್ಮ

ಕಾಲ ಬ್ರಹ್ಮ

ಭೂತ ವರ್‍ತಮಾನ ಭವಿಷ್ಯ
ಅಂದು ಇಂದು ಮುಂದು
ಒಂದೇ ಗರ್‍ಭದಿಂ ಬಂದು
ಸ್ಫೋಟಗೊಂಡು ಅಂತರಿಕ್ಷದಲಿ
ಬೆರೆತು ಆದವೆ ಬೇರೆ?
ಸಹಸ್ರಾರು ತಾರೆಗಳ ಜನನ
ಒಂದನು ನಮಗಾಗಿ ಕಳಿಸಿರುವ
ಮೂಲ “ಸೂಪರ್ ಪ್ರೋಗ್ರಾಮರ್”
ಇತ್ತಿಹನು ಘಟನಾವಳಿ ಪಟ್ಟಿ ಜಗಜಟ್ಟಿ
ನಿನ್ನ ಸುತ್ತ ತಿರುಗುವವರಿಗೆ
ಬೆಳಕಿನ ಬಿಸಿ ಹಾಲು ಕೊಡಬೇಕು
ಜೀವಿಗಳು ಸಿಹಿ ಬೆರೆಸಿ ಮಾಡಲು ಪಾಯಸ
ಸಕಲ ಜೀವಜಾತಕೆ ಗ್ರಾಸ!
ವಿಕಸನದಿ ಹುಟ್ಟಿಕೊಂಡಿತು ಪ್ರಜ್ಞೆ-
ಬೆಳಕಿನ ಹಾಲು ಸುರಿದದ್ದು ಇಂದೋ
ಅಥವಾ ಎಂದೋ
ಅತೀತವೋ ವರ್‍ತಮಾನವೋ
ಭವಿಷ್ಯದ ಛಾಯೆಯೂ ಅಡಗಿದೆಯೊ
ಶುರುವಾಯಿತು ಲೆಕ್ಕ
ಮಾನದಂಡಕೆ ಬೇಕೊಂದು ಗಡಿಯಾರ
ಕೊಡಬೇಕು ಅದಕೊಂದು ಮೂರ್‍ತ ರೂಪ!
ಡವಗುಟ್ಟುವ ಎದೆಯ ತಾಳಕ್ಕೆ
ಅದರ ಟಿಕ್ ಟಿಕ್ ತಳಕು
ಬ್ರಹ್ಮಾಂಡದಲಿ ವಿವಿಧ ವೇಗದ ಬೆಳಕು
ಸಮಯ ಅನಂತ!
ಆದರೂ ಮರ್‍ತ್ಯರಿಗೆ ಇದೆ ಅಂತ
ಅಂತೆ ಕಂತೆಗಳಲಿ
ಸೋರಿಹೋಗುತಿದೆ
ಬಾಳಿನ ಪಾಯಸ
ಸವಿ ಅದನು ಪ್ರತಿ ಗಳಿಗೆ ಸವಿ
ಹಾರಿಹೋದರೂ ಸಮಯ
ದಕ್ಕಿಸಿಕೋ
ಬೊಗಸೆಯಲಿ ಸಿಕ್ಕದ್ದು
ಬಿಡಬೇಡ ಸೋರಲು
*****

Tagged:

Leave a Reply

Your email address will not be published. Required fields are marked *

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...