Home / ಬಾಲ ಚಿಲುಮೆ / ಕಥೆ / ಅರಸು ಮಂತ್ರಿಗಳ ಕಥೆ

ಅರಸು ಮಂತ್ರಿಗಳ ಕಥೆ

ನಂದನೆಂಬ ಒಬ್ಬಾನೊಬ್ಬ ರಾಜನು ಇದ್ದನು. ಸಮುದ್ರಗಳವರೆಗಿನ ಭೂಮಿಯೆಲ್ಲವೂ ಆತನದು. ಆತನಿಗೆ ವರರುಚಿಯೆಂಬ ಒಬ್ಬ ಮಂತ್ರಿಯಿದ್ದನು. ಆತನು ಸರ್ವಶಾಸ್ತ್ರಗಳನ್ನೂ ಬಲ್ಲವನು.
ಆ ಮಂತ್ರಿಯು ಒಂದು ದಿನ ಹೆಂಡತಿಯೊಡನೆ ಸರಸವಾಡುತ್ತಾ ಇರುವಾಗ ಅವಳಿಗೆ ಕೋಪ ಬಂತು. ಆತನು ಏನು ಮಾಡಿದರೂ ಅವಳು ಕೋಪವನ್ನು ಬಿಡಲಿಲ್ಲ. ಆಗ ಆತನು “ಏನು ಮಾಡಿದರೆ ನಿನ್ನ ಕೋಪವು ತೀರುವುದು? ಅದನ್ನಾದರೂ ಹೇಳು?” ಎಂದು ಕೇಳಿದನು. ಅವಳು “ನೀನು ತಲೆಯನ್ನು ಇವೊತ್ತೇ ಬೋಳಿಸಿಕೊಂಡು ನನ್ನ ಕಾಲಿಗೆ ಬೀಳಬೇಕು” ಎಂದಳು. ಆ ದಿನ ಅಮಾವಾಸ್ಯೆ. ಅಮಾವಾಸ್ಯೆ, ಹುಣಿಮೆ, ಸಂಕ್ರಮಣ, ಇವು ಪರ್ವಗಳು. ತಿಳಿದವರು ಯಾರೂ ಆ ದಿನಗಳಲ್ಲಿ ತಲೆಯನ್ನು ಬೋಳಿಸಿಕೊಳ್ಳುವುದಿಲ್ಲ. ಆದರೂ ವರರುಚಿಯು ಹೆಂಡತಿಗೆ ಸಂತೋಷವಾಗಲೆಂದು ತಲೆಯನ್ನು ಬೋಳಿಸಿಕೊಂಡು ಬಂದು ಅವಳ ಕಾಲಿಗೆ ಬಿದ್ದನು. ಅವಳಿಗೆ ಸಂತೋಷವಾಯಿತು: ಪ್ರಸನ್ನಳಾದಳು.
ಅತ್ತ ಅರಸನ ಹೆಂಡಿತಿಯೂ ಹೀಗೆಯೇ ಯಾವುದೋ ಕಾರಣಕ್ಕಾಗಿ ಕೋಪ ಮಾಡಿಕೊಂಡಳು. ಅರಸನೂ ಹೆಂಡಿತಿಯನ್ನು “ಏನು ಮಾಡಿದರೆ ಪ್ರಸನ್ನಳಾಗುವೆಯೋ ಹೇಳು” ಎಂದು ಕೇಳಿದನು. ಅವಳು “ನೀನು ಕುದುರೆಯಂತೆ ಬಾಯಿಗೆ ಕಡಿವಾಣ ಹಾಕಿಸಿಕೊಂಡು, ನನ್ನನ್ನು ಬೆನ್ನಿನ ಮೇಲೆ ಕುಳ್ಳರಿಸಿಕೊಂಡು ಕುದುರೆಯಂತೆ ಕೆನೆಯುತ್ತ ಓಡಬೇಕು.” ಎಂದಳು. ಅರಸನೂ ಹಾಗೆಯೇ ಮಾಡಿದನು.
ಮರುದಿನ ದೊರೆಯನ್ನು ಕಾಣುವುದಕ್ಕೆ ಮಂತ್ರಿಯು ಬಂದನು. ಅರಸನು ಮಂತ್ರಿಯು ತಲೆ ಬೋಳಿಸಿಕೊಂಡಿರುವುದನ್ನು ನೋಡಿ ಆಶ್ಚರ್ಯಪಟ್ಟು, “ಏನು ಮಂತ್ರಿಗಳೇ, ಪರ್ವಕಾಲದಲ್ಲಿಯೂ ಮುಂಡನವೇ?” ಎಂದನು. ಆತನು ನಗು ನಗುತ್ತಾ “ಮಹಾಸ್ವಾಮಿ, ಅರಸನು ಕುದರೆಯಂತೆ ಕಡಿವಾಣ ಕಚ್ಚಿಕೊಂಡು ಕೆನೆಯುತ್ತಾ ತಿರುಗಿದ ದಿವಸ ಪರ್ವವಾದರೂ ಮುಂಡನವಾಗಬಹುದು” ಎಂದನು. ಅರಸನು ಸುಮ್ಮನಾದನು.
ಅದರಿಂದ ಎಲೆ ದುಷ್ಟ ಮೊಸಳೆಯೇ, ನೀನೂ ನಂದವರ ರುಚಿಗಳಂತೆ ಸ್ತ್ರೀ ವಶನಾದವನು. ಒಂದು ಉಪಾಯ ಮಾಡಿ ನನ್ನನ್ನು ವಧ ಮಾಡಲು ಕರೆದುಕೊಂಡೂ ಹೋದೆ: ಆದರೆ ನಿನ್ನ ವಾಗ್ದೇಷದಿಂದಲೇ ನಿನ್ನ ಕೆಲಸ ಕೆಟ್ಟಿತು. ಕೇಳಿಲ್ಲವೇ?
ಶುಕ ಸಾರಿಕೆಗಳ ಬಂದಿಪುದೇಕೆ? ನುಡಿವುದರಿಂ ಬಂಧನವವಕೆ ॥ 
ಬಕವನು ಬಂಧಿಸದಿರುವುದದೇಕೆ? ನುಡಿಯದು ಬಂಧನವಿಲ್ಲದಕೆ ॥೨೨॥ 
ಮತ್ತು, 
ಹುಲಿಯಚರ್ಮವ ಹೊದ್ದುಕೊಂಡು | 
ಭೀತಿತೋರುವ ರೂಪುಗೊಂಡು 
ಮೇಯುತಿದ್ದಾ ಕತ್ತೆಗಂದು | 
ಕೂಗಿಕೊಂಡುದೆ ಮೃತ್ಯುವಾಯ್ತು ॥ ೨೩ ॥ 
ಮೊಸಳೆಯು… “ಅದು ಹೇಗೆ?” ಎನ್ನಲು ಕಪಿಯು ಹೇಳಿತು.
*****
ಹುಲಿಯಾಗಿದ್ದ ಕತ್ತೆಯ ಕಥೆ ಓದಿ
Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...