Home / ಬಾಲ ಚಿಲುಮೆ / ಕಥೆ / ಅರಸು ಮಂತ್ರಿಗಳ ಕಥೆ

ಅರಸು ಮಂತ್ರಿಗಳ ಕಥೆ

ನಂದನೆಂಬ ಒಬ್ಬಾನೊಬ್ಬ ರಾಜನು ಇದ್ದನು. ಸಮುದ್ರಗಳವರೆಗಿನ ಭೂಮಿಯೆಲ್ಲವೂ ಆತನದು. ಆತನಿಗೆ ವರರುಚಿಯೆಂಬ ಒಬ್ಬ ಮಂತ್ರಿಯಿದ್ದನು. ಆತನು ಸರ್ವಶಾಸ್ತ್ರಗಳನ್ನೂ ಬಲ್ಲವನು.
ಆ ಮಂತ್ರಿಯು ಒಂದು ದಿನ ಹೆಂಡತಿಯೊಡನೆ ಸರಸವಾಡುತ್ತಾ ಇರುವಾಗ ಅವಳಿಗೆ ಕೋಪ ಬಂತು. ಆತನು ಏನು ಮಾಡಿದರೂ ಅವಳು ಕೋಪವನ್ನು ಬಿಡಲಿಲ್ಲ. ಆಗ ಆತನು “ಏನು ಮಾಡಿದರೆ ನಿನ್ನ ಕೋಪವು ತೀರುವುದು? ಅದನ್ನಾದರೂ ಹೇಳು?” ಎಂದು ಕೇಳಿದನು. ಅವಳು “ನೀನು ತಲೆಯನ್ನು ಇವೊತ್ತೇ ಬೋಳಿಸಿಕೊಂಡು ನನ್ನ ಕಾಲಿಗೆ ಬೀಳಬೇಕು” ಎಂದಳು. ಆ ದಿನ ಅಮಾವಾಸ್ಯೆ. ಅಮಾವಾಸ್ಯೆ, ಹುಣಿಮೆ, ಸಂಕ್ರಮಣ, ಇವು ಪರ್ವಗಳು. ತಿಳಿದವರು ಯಾರೂ ಆ ದಿನಗಳಲ್ಲಿ ತಲೆಯನ್ನು ಬೋಳಿಸಿಕೊಳ್ಳುವುದಿಲ್ಲ. ಆದರೂ ವರರುಚಿಯು ಹೆಂಡತಿಗೆ ಸಂತೋಷವಾಗಲೆಂದು ತಲೆಯನ್ನು ಬೋಳಿಸಿಕೊಂಡು ಬಂದು ಅವಳ ಕಾಲಿಗೆ ಬಿದ್ದನು. ಅವಳಿಗೆ ಸಂತೋಷವಾಯಿತು: ಪ್ರಸನ್ನಳಾದಳು.
ಅತ್ತ ಅರಸನ ಹೆಂಡಿತಿಯೂ ಹೀಗೆಯೇ ಯಾವುದೋ ಕಾರಣಕ್ಕಾಗಿ ಕೋಪ ಮಾಡಿಕೊಂಡಳು. ಅರಸನೂ ಹೆಂಡಿತಿಯನ್ನು “ಏನು ಮಾಡಿದರೆ ಪ್ರಸನ್ನಳಾಗುವೆಯೋ ಹೇಳು” ಎಂದು ಕೇಳಿದನು. ಅವಳು “ನೀನು ಕುದುರೆಯಂತೆ ಬಾಯಿಗೆ ಕಡಿವಾಣ ಹಾಕಿಸಿಕೊಂಡು, ನನ್ನನ್ನು ಬೆನ್ನಿನ ಮೇಲೆ ಕುಳ್ಳರಿಸಿಕೊಂಡು ಕುದುರೆಯಂತೆ ಕೆನೆಯುತ್ತ ಓಡಬೇಕು.” ಎಂದಳು. ಅರಸನೂ ಹಾಗೆಯೇ ಮಾಡಿದನು.
ಮರುದಿನ ದೊರೆಯನ್ನು ಕಾಣುವುದಕ್ಕೆ ಮಂತ್ರಿಯು ಬಂದನು. ಅರಸನು ಮಂತ್ರಿಯು ತಲೆ ಬೋಳಿಸಿಕೊಂಡಿರುವುದನ್ನು ನೋಡಿ ಆಶ್ಚರ್ಯಪಟ್ಟು, “ಏನು ಮಂತ್ರಿಗಳೇ, ಪರ್ವಕಾಲದಲ್ಲಿಯೂ ಮುಂಡನವೇ?” ಎಂದನು. ಆತನು ನಗು ನಗುತ್ತಾ “ಮಹಾಸ್ವಾಮಿ, ಅರಸನು ಕುದರೆಯಂತೆ ಕಡಿವಾಣ ಕಚ್ಚಿಕೊಂಡು ಕೆನೆಯುತ್ತಾ ತಿರುಗಿದ ದಿವಸ ಪರ್ವವಾದರೂ ಮುಂಡನವಾಗಬಹುದು” ಎಂದನು. ಅರಸನು ಸುಮ್ಮನಾದನು.
ಅದರಿಂದ ಎಲೆ ದುಷ್ಟ ಮೊಸಳೆಯೇ, ನೀನೂ ನಂದವರ ರುಚಿಗಳಂತೆ ಸ್ತ್ರೀ ವಶನಾದವನು. ಒಂದು ಉಪಾಯ ಮಾಡಿ ನನ್ನನ್ನು ವಧ ಮಾಡಲು ಕರೆದುಕೊಂಡೂ ಹೋದೆ: ಆದರೆ ನಿನ್ನ ವಾಗ್ದೇಷದಿಂದಲೇ ನಿನ್ನ ಕೆಲಸ ಕೆಟ್ಟಿತು. ಕೇಳಿಲ್ಲವೇ?
ಶುಕ ಸಾರಿಕೆಗಳ ಬಂದಿಪುದೇಕೆ? ನುಡಿವುದರಿಂ ಬಂಧನವವಕೆ ॥ 
ಬಕವನು ಬಂಧಿಸದಿರುವುದದೇಕೆ? ನುಡಿಯದು ಬಂಧನವಿಲ್ಲದಕೆ ॥೨೨॥ 
ಮತ್ತು, 
ಹುಲಿಯಚರ್ಮವ ಹೊದ್ದುಕೊಂಡು | 
ಭೀತಿತೋರುವ ರೂಪುಗೊಂಡು 
ಮೇಯುತಿದ್ದಾ ಕತ್ತೆಗಂದು | 
ಕೂಗಿಕೊಂಡುದೆ ಮೃತ್ಯುವಾಯ್ತು ॥ ೨೩ ॥ 
ಮೊಸಳೆಯು… “ಅದು ಹೇಗೆ?” ಎನ್ನಲು ಕಪಿಯು ಹೇಳಿತು.
*****
ಹುಲಿಯಾಗಿದ್ದ ಕತ್ತೆಯ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...