Home / ಕವನ / ಕವಿತೆ / ಗೇಶಾ ಹುಡುಗಿ

ಗೇಶಾ ಹುಡುಗಿ

ನಿನ್ನ ಮಾತುಗಳೆಲ್ಲ ಈಗ ನನ್ನವು
ಬಾ ನನ್ನ ಕೊಡೆಯೊಳಗೆ, ಮಾತನಾಡಿಸುವೆ
ಅಲ್ಲಿಯೇ ನಿಂತರೆ ಹೇಗೆ?
ಬಾ ಹತ್ತಿರ ಇನ್ನೂ ಹತ್ತಿರ
ನಿನ್ನ ಪ್ರಿಯಬಣ್ಣ ನನ್ನ ಕಿಮೊನೋದಲ್ಲಿ
ಹರಡಿದೆ ನೋಡಿಲ್ಲಿ
ಕೆಂಪು ಹಸಿರು ನೀಲಿ ಹಳದಿ
ಮೇಲೆ ಮೆತ್ತನೆಯ ಹೊಳಪು
ನಿನ್ನ ಉಸಿರು ಕೇಳು ಕೇಳು
ಈ ಬೀಸಣಿಕೆಯಲಿ
ಜೊತೆಗೆ ಆಲಿಸು ನಿನ್ನೆದೆಯದೇ ಬಡಿತ
ಹಾತೊರೆಯುವ ನಿನ್ನ ಪ್ರತಿರೂಪ
ನನ್ನ ಚಿಕ್ಕ ಕಣ್ಣುಗಳಲಿ ಕಾಣು
ನೋಡು ನೋಡಿಲ್ಲಿ ಬೀಸಣಿಕೆ
ಬಿಚ್ಚಿದರೆ ಪ್ರಸನ್ನತೆ
ಮುಚ್ಚಿದರೆ ನಿರಾಶೆ
ಮುದ್ರೆಗಳಿಲ್ಲ ಆದರೆ ಸಂಜ್ಞೆಗಳಿವೆ
ನನ್ನ ನೃತ್ಯಕ್ಕೆ ನೋವು
ನಲಿವುಗಳೂ ಇವೆ
ನನ್ನ ಮುಗುಳ್ನಗೆಗೆ,
ನಿನಗೆ ಮಾತ್ರ ಬಿರಿದ ನಗೆ
ಬೆಡಗಿನ ಮಾತು ಪ್ರೀತಿಯ ಸ್ಪರ್ಶ

ಬಾ ಬೇಗ ಬಾ ಕೈಹಿಡಿ
ಹಾಗೆಯೇ ತಬ್ಬಿಬಿಡು
ಕಳೆದುಬಿಟ್ಟರಾಯ್ತು ಯಾರಿಗೂ ಕಾಣದಂತೆ
ಟೋಕಿಯೋ ನಗರಿಯಲಿ
ಡೊಜೊ ಡೊಜೊ.
*****
ಗೇಶಾಹುಡುಗಿಯರು
ಗೇಶಾ = ಜಪಾನಿ ಭಾಷೆಯಲ್ಲಿ ಕಲಾತ್ಮಕ ಅಥವಾ ಆಕರ್ಷಕ ವ್ಯಕ್ತಿ ಎಂದರ್ಥ. ಗೇಶಾ ಹುಡುಗಿಯರು ಮದುವೆಯಾಗುವಂತಿಲ್ಲ. ಪುರುಷ ಪ್ರವಾಸಿಗಳನ್ನು ಆಕರ್ಷಿಸಿ ಅವರಿಗೆ ಮನರಂಜನೆ ನೀಡುತ್ತಾರೆ. ಬೆಲೆಬಾಳುವ ಬಣ್ಣ ಬಣ್ಣದ ಕಿಮೊನೋ ಉಡುಪುಗಳನ್ನು ಧರಿಸಿ ಕೊಡೆ ತೆರೆದು ಬೀಸಣಿಕೆ ಹಿಡಿದು ಮುಗುಳ್ನಗೆ ಬೀರಿ ಮಾತನಾಡಿದರೆ ಏಕಾಂಗಿ ಪ್ರವಾಸಿಗೆ ಸ್ವರ್ಗವೇ ಇಳಿದು ಬಂದಂತೆ.
ಡೊಜೊ ಡೊಜೊ = ಆಕರ್ಷಕವಾದ ರೀತಿಯಲ್ಲಿ ನೆಲಕ್ಕೆ ಮೊಳಕಾಲನ್ನೂರಿ ಡೊಜೊ ಡೊಜೊ ಎಂದು ಸ್ವಾಗತಿಸುವರು.
ಗೇಶಿಯಾ ಸಂಸ್ಕೃತಿ ಜಪಾನಿ ಸಮಾಜದ ಒಂದು ಭಾಗವಾಗಿ ಬೆಳೆದುಬಂದಿದೆ. ೪೦೦ ವರ್ಷಗಳಷ್ಟು ಹೆಚ್ಚುಕಾಲದ ಇತಿಹಾಸವಿರುವ ಗೇಶಿಯಾವನ್ನು ವೇಶ್ಯಾವೃತ್ತಿಯೆಂದು ತಪ್ಪಾಗಿ ತಿಳಿಯಲಾಗಿದೆ. ಹೆಣ್ಣು ಮಕ್ಕಳಿಗೆ ಕಲೆ ಸಾಹಿತ್ಯ ನೃತ್ಯಗಳಲ್ಲಿ ತರಬೇತಿ ನೀಡುತ್ತಾರೆ. ಅವರು ವಿಶೇಷವಾಗಿ ರೆಸ್ಟೋರಾಗಳಲ್ಲಿ, ಚಹಕೂಟಗಳಲ್ಲಿ ಪುರುಷರಿಗೆ ಮನರಂಜನೆ ನೀಡುವರು.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...