Home / ಕವನ / ಕವಿತೆ / ಕೊಳದಾಗ್ ತೇಲ್ತಿದ್ ಬೆಂಡು

ಕೊಳದಾಗ್ ತೇಲ್ತಿದ್ ಬೆಂಡು

ಬೂಮೀಗ್ ಗೋಂದ್ ಆಕ್ ಅಂಟೀಸ್ದಂಗೆ
ಅತ್ತಾಗ್ ಇತ್ತಾಗ್ ಅಳ್ಳಾಡ್ದಂಗೆ |
ಕೋಳದಾಗ್ ನಿಂತಿತ್ ನೀರು.
ಗಂಡನ್ ತುಟೀಗ್ ಯೆಡ್ತಿ ಮುತ್ತು
ಕುಂತಂಗ್ ಕೊಳದಾಗ್ ಕುಂತ್ಕೊಂಡಿತ್ತು
ಒಂದ್ ಚಿಕ್ ಬೆಂಡಿನ್ ಚೂರು. ೧

ಪಡಕಾನೇಗೆ ತಗದ್ ಗೇಟಿಂದ
ಕುಡಕರ್ ನುಗ್ದಂಗ್ ಅತ್ತಾಗಿಂದ
ಕೊಳಕ್ಕ್ ಒಂದ್ ಒಳೆ ನುಗ್ತು !
ತನ್ ಪಾಡ್ ತಂಗ್ ಅಂತ್ ಕುಂತಿದ್ದ್ ಬೆಂಡು
ನುಗ್ಗಿದ್ ನೀರಿಗ್ ಕೈ ಮುಕ್ಕೊಂಡು
ಅದರ್ ದಾರೀಗೆ ಬಗ್ತು ! ೨

ಸಮಯಕ್ಕ್ ದುಮುಕಿದ್ ಸಾಲ್ಗಾರ್ರಂಗೆ
ಅತ್ತೂ ದಿಕ್ಕಿಂದ್ ದೆಯ್ಗೋಳಂಗೆ |
ಕೊಳಕೆ ನೀರ್ ನುಗ್ಗೊಯ್ತು !
ತೇಲ್ತಿದ್ ಬೆಂಡು ಕೊಳದ್ ಒಳೀಕೆ
ಗಿರ್ರಂತ್ ತಿರಗೋ ಆಳ್ ಸುಳಿಗೆ
ಸಿಕ್ಕೊಂಡ್ ಪಡಚಾಗೋಯ್ತು ! ೩

ಅದನ ಕಂಡೋರ್ ಎಲ್ರು ಬೆರತು
‘ಅಯ್ಯೋ ಪಾಪ’ ಅಂದ್ರೆ ವೊರತು
ಮುಳಗೋದ್ ತಪ್ಪೀಸ್ನಿಲ್ಲ !
ಕೊಳಕೊಂದ್ ಚಿಕ್ದಾಗ್ ಕಟ್ಟೆ ಕಟ್ಟಿ
ಬೆಂಡಿನ್ ಬದಸೋಕ್ ನೀರ್ ತಡದಿಟ್ಟಿ
ಉಳಸ್ಬೌದಾಗಿತ್ತಲ್ಲ ! ೪
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...