ಜಂಬ

ಸುಂಸುಂಕೇನೆ ನಂಗ್ ಅಂತೀಯ
ಜಂಬದ ಕೋಳಿ ಅಂತ;
ಮನ್ಸನ್ ಮನಸನ್ ನೋಡ್ದೆ ಸುಂಕೆ
ಸಿಕ್ದಂಗ್ ಅಂದ್ರೆ-ಬಂತ! ೧

ತಿಳದೋರ್ ಇತರೋರ್ ಒಗಳೋದ್ಕೆಲ್ಲ
ಕುಣದಾಡ್ತಾರ ಬಿದ್ದಿ?
ತಿಳದೋರ್ ಎಕಡ ಮಂಡೇಲ್ ಮಡಗಿ
ಕಲ್ತೀನ್ ಒಸಿ ಬುದ್ದಿ! ೨

ಕುಡಿಯೋನ್ ನಾನು! ಆಡೋನ್ ನಾನಾ
ಮೂಳೆ ಮಾಂಸದ್ ಕಂಬ?
ಯೆಂಡ ಕುಂತ್ಕೊಂಡ್ ಆಡಿಸ್ತಿದ್ರೆ
ನಂಗ್ ಯಾಕಣ್ಣ ಜಂಬ! ೩

ಸೂತ್ರದ ಗೊಂಬೆ ಇದ್ದಂಗ್ ಇವ್ನಿ
ಯೆಂಡದ್ ಕೈಲಿ ನಾನು;
ಯೆಂಗ್ ಆಡಂದ್ರೆ ಅಂಗ್ ಆಡ್ಬೇಕು!
ನಂಗೀ ಜಂಬದಿಂದ್ ಏನು! ೪

ಮೈಯಿನ್ ತುಂಬ ತುಂಬ್ಕೊಂಡೈತೆ
ಆಡ್ಸೋ ಯೆಂಡದ್ ಮತ್ತು;
ಜಂಬ ಗಿಂಬ ಅನ್ನೋದ್ಕೆಲ್ಲ
ಜಾಗ ಎಲ್ಲಿಂದ್ ಬತ್ತು? ೫

ಲೋಕಕ್ ಕುಂತ್ಕೊಂಡಂಗೇ ಕುಂತಿ
ಸಿಕ್ದಂಗ್ ಆಡೋಕ್ ಗೊತ್ತು;
ಕಣ್ ಬಿಟ್ಕೊಂಡಿ ಅತ್ತಿರ್‍ಕೋಗಿ
ತಿಳಿಯೋ ಬುದ್ ಎಲ್ಬತ್ತು? ೬

ಲೋಕದ ಚಾಲೇ ಇಂಗೈತೇಂತ
ಕಂಡೇ ಅದೆ ಅದು;
ಆದ್ರೂ ಏನೋ ಕುಡದೋನ್ ಚಪಲ-
ಯೋಳಾದ್ ಯೋಳ್ಬಿಡಾದು! ೭

ಯೆಂಡ ಕುಡದೋನ್ ಕಂತೇಂತೇಳಿ
ಮೂಲೇಗ್ ಇದನ್‌ ಆಕ್ಬಾರ್‍ದು;
ಮನ್ಸನ್ ಜೀವ ತಿಳಕೊಳ್ದೇನೆ
ಸುಂಕೆ ನೋಯಿಸ್ಬಾರ್‍ದು. ೮
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...