ಜಂಬ

ಸುಂಸುಂಕೇನೆ ನಂಗ್ ಅಂತೀಯ
ಜಂಬದ ಕೋಳಿ ಅಂತ;
ಮನ್ಸನ್ ಮನಸನ್ ನೋಡ್ದೆ ಸುಂಕೆ
ಸಿಕ್ದಂಗ್ ಅಂದ್ರೆ-ಬಂತ! ೧

ತಿಳದೋರ್ ಇತರೋರ್ ಒಗಳೋದ್ಕೆಲ್ಲ
ಕುಣದಾಡ್ತಾರ ಬಿದ್ದಿ?
ತಿಳದೋರ್ ಎಕಡ ಮಂಡೇಲ್ ಮಡಗಿ
ಕಲ್ತೀನ್ ಒಸಿ ಬುದ್ದಿ! ೨

ಕುಡಿಯೋನ್ ನಾನು! ಆಡೋನ್ ನಾನಾ
ಮೂಳೆ ಮಾಂಸದ್ ಕಂಬ?
ಯೆಂಡ ಕುಂತ್ಕೊಂಡ್ ಆಡಿಸ್ತಿದ್ರೆ
ನಂಗ್ ಯಾಕಣ್ಣ ಜಂಬ! ೩

ಸೂತ್ರದ ಗೊಂಬೆ ಇದ್ದಂಗ್ ಇವ್ನಿ
ಯೆಂಡದ್ ಕೈಲಿ ನಾನು;
ಯೆಂಗ್ ಆಡಂದ್ರೆ ಅಂಗ್ ಆಡ್ಬೇಕು!
ನಂಗೀ ಜಂಬದಿಂದ್ ಏನು! ೪

ಮೈಯಿನ್ ತುಂಬ ತುಂಬ್ಕೊಂಡೈತೆ
ಆಡ್ಸೋ ಯೆಂಡದ್ ಮತ್ತು;
ಜಂಬ ಗಿಂಬ ಅನ್ನೋದ್ಕೆಲ್ಲ
ಜಾಗ ಎಲ್ಲಿಂದ್ ಬತ್ತು? ೫

ಲೋಕಕ್ ಕುಂತ್ಕೊಂಡಂಗೇ ಕುಂತಿ
ಸಿಕ್ದಂಗ್ ಆಡೋಕ್ ಗೊತ್ತು;
ಕಣ್ ಬಿಟ್ಕೊಂಡಿ ಅತ್ತಿರ್‍ಕೋಗಿ
ತಿಳಿಯೋ ಬುದ್ ಎಲ್ಬತ್ತು? ೬

ಲೋಕದ ಚಾಲೇ ಇಂಗೈತೇಂತ
ಕಂಡೇ ಅದೆ ಅದು;
ಆದ್ರೂ ಏನೋ ಕುಡದೋನ್ ಚಪಲ-
ಯೋಳಾದ್ ಯೋಳ್ಬಿಡಾದು! ೭

ಯೆಂಡ ಕುಡದೋನ್ ಕಂತೇಂತೇಳಿ
ಮೂಲೇಗ್ ಇದನ್‌ ಆಕ್ಬಾರ್‍ದು;
ಮನ್ಸನ್ ಜೀವ ತಿಳಕೊಳ್ದೇನೆ
ಸುಂಕೆ ನೋಯಿಸ್ಬಾರ್‍ದು. ೮
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...