Home / ಕವನ / ಕವಿತೆ / ದುಕ್ಕ

ದುಕ್ಕ

ಕಯ್ಞಾದ್ ಔಸ್ದಿ ಕುಡದೋನಂಗೆ
ಮೊಕಾನ್ ಯಾಕ್ ಸಿಂಡರ್‍ಸ್ತಿ?
ನಿಂಗೊಂದ್ ದುಕ್ಕ ಬಂದಿದ್ರ್, ಅದನ
ನಂಗಳ್ ಮುಂದ್ ಯಾಕ್ ಇರ್‍ಸ್ತಿ?
ನಮಗ್ಯಾಕ್ ದುಕ್ಕ ತರ್‍ಸ್ತಿ?
ಮುಕದಾಗ್ ಸೋನೆ ಯಿಡಕೊಂಡಂಗೆ
ಗೋಳ್ಯಾಕ್ ಸುಂಕೆ ಸುರ್‍ಸ್ತಿ? ೧

ದುಕ್ಕಾನ್ ಒತ್ಕೊಂಡ್ ಬಂದೋರ್ ನಾವು!
ಒತ್ಕೊಂಡ್ ಓಗೋರ್ ನಾವು!
ಸಿಕ್ದೋರತ್ರ ಯೋಳ್ಕೊಂಡಾಕ್ಸ್ನೆ
ಆರೋಗ್ತೈತ ಕಾವು!
ಸಾಯ್ತದೇನ್ ಈ ಆವು?
ಆರೋಕಿಲ್ಲ! ಸಾಯೋಕಿಲ್ಲ!
ಆರ್‍ಸಿ ಸಾಯ್ಸೋರ್ ನಾವು! ೨

ನಂ ನಂ ದುಕ್ಕ ನಂನಂಗೇನೆ
ವೊರಲಾರದಸ್ಟಸ್ಟ್ ಐತೆ!
ಜತೇಗ್ ನಿಂದೂ ಇರಲಂತಂದ್ರೂ
ಅದರಿಂದ ಏನಾಗ್ತೈತೆ?
ಏನ್ ಬಂದಂಗ್ ಆಯ್ತೈತೆ?
ಅವರಿವರತ್ರ ಅತ್ರೆ ನಿಂಗೆ
ದುಕ್ ಏನ್ ಕಮ್ಯಾಗ್ತೈತೆ? ೩

ನಂ ನಂ ದುಕ್ಕ ಸಿಕ್ದೋರತ್ರ
ಮಾಡ್ತಾನಿದ್ರೆ ಮಾಜರ್
ಕೇಳೋರ್ ಎದರಾಗ್ ಇರೊಗಂಟ್ಲೂನೆ
ದುಕ್ಕಾನೆ ಗೈರಾಜರ್!
ನಾವೆ ದೊರೆಗೊಳ್! ರಾಜರ್!
ಕೇಳೋವ್ರೇನ್ರ ಅಂಗೋಯ್ತಂದ್ರೆ
ತಕ್ಕೊ! ದುಕ್ಕ ಆಜರ್! ೪

ದುಕ್ಕ ಗಿಕ್ಕ ಎಲ್ಲ ನೋಡು
ನಂ ನಂ ಮನಸಿದ್ದಂಗೆ!
ಮನಸಿನ್ ಲಗಾಮ್ ನಂ ಕೈಲಿದ್ರೆ
ಇಲ್ದಿದ್ ಇರೋವಂಗೆ!
ಇರೋದ್ ಇಲ್ದಿದ್ದಂಗೆ!
(ಯೆಂಡ ಕುಡದೋನ್ ಮಾತ್ ಅಂತೇಳಿ
ನಗಬೇಡೋ ಏ ಪೆಂಗೆ!) ೫

ದುಕ್ಕ ಇದ್ರೆ ಇತ್ತಂತೇಳು!
ಸಂತೋಸಾನ ಗಳ್ಸು!
ಮಾರೆ ಮೇಗಿನ್ ಇಸ್ಟೇಜಿಂದ
ದುಕ್ಕಕ್ ಕತ್ತ್ ಇಡದ್ ತಳ್ಸು!
ನೆಗೀನ್ ಪರದೆ ಬಿಳ್ಸು!
ಯಿಂಗೆ ದುಕ್ಕಕ್ ದಪ್ಫನ್ ಮಾಡಿ
ಅದಕ್ಕ್ ಕೊಸೆ ಕೀಳ್ಸು! ೬
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...