Home / ಕವನ / ಕೋಲಾಟ / ರಂಗನ ಕಿನ್ನುರಿ

ರಂಗನ ಕಿನ್ನುರಿ

ಕೋಲೆ ಕೋಲೆ ಕೋಲು ಕೋಲೇನ್ನ ಕೋಲೇ
ಕೋಲು ಕೋಲೆನ್ನ ಕೋಲು ರನ್ನದಾ ಕೋಲು ಕೋಲೇ || ಪ ||

ಕೆನ್ನುರಿ ಕೇನ್ನುರಿಯೇಲೂ ಬಿದುರೂ ಬಾಬುಲು ಕೇನ್ನೂರಿಯಾ
ರಂಗ ಕೊಟ್ಟೆ ಬಿಶುಲಿಗೆ ವಣಿಶಿಯಾರೋ ಕೋಲೇ || ೧ ||

ರಂಗ ಕೊಟ್ಟೆ ಬಿಶುಲಿಗೆ ವಣಿಶೀರೊ ಕೇನ್ನುರಿಲೊ ರಂಗಾ
ರಂಗನೊಂದೇ ತಂಗೀ ಬರುವಾಳೋ ಕೋಲೇ || ೨ ||

ರಂಗನೊಂದೇ ತಂಗೀ ಬರುವಾಳೋ ಕೆನ್ನುರೀ ರಂಗಾ
ಬಂದೀ ರಾಜಂಗಳದಲ್ಲಿ ನಿಲೂತಾಳೋ ಕೋಲೇ || ೩ ||

ಬಂದೀ ರಾಜಂಗಳದಲ್ಲಿ ನಿಲೂತಾಳೋ ರಂಗನಾ ತಂಗೀ
ಕಿನ್ನುರಿ ಕಾಂಬುತಲೈದೋಲೋ ಕೋಲೇ || ೪ ||

ಕಿನ್ನುರಿ ಕಾಂಬುತೆಲೋ ಲೈದಾಲೋ ರಂಗನ ತಂಗೀ
ಕಿನ್ನುರಿ ತಡವುತೇ ಲೈದೊಲೋ ಕೋಲೋ || ೫ ||

ಕೆನ್ನೂರಿ ತಡವುತೆಲೋ ತಡಿದಾಳೊರಂಗನ ತಂಗೀ
ಕಿನ್ನುರಿ ಮೇನೆ ಕೈಯಾಡೀ ಹೊಡೀದಳೋ ಕೋಲೇ || ೬ ||

ಕಿನ್ನುರಿ ಮೇನೆ ಕಯ್ಯೋಲೇ ಹೊಡಿದಾಳೆ ರಂಗನಾ ತಂಗೀ
ಕೆನ್ನುರಿ ಮೇನೇಲೇ ನುಡುದಿಲವೋ ಕೋಲೇ || ೭ ||

ಕಿನ್ನುರಿಮೇನೇಲೇ ನುಡೂದಿಲ್ಲ ರಂಗನಾ ತಂಗೀ
ಏನಾರೇ ಹೇಳೂತೈದಾಳೋ ಕೋಲೇ || ೮ ||

ಯೇನನಾರೆ ಹೇಳುತೇ ಲೈದಾಳೋ ರಂಗನ ತಂಗೀ
“ನನ್ನ ಕಯ್ಯಾಲ್ಲೇನೇ ನೀನೂ ನುಡಿದಿಲವೋ ಕೋಲೇ || ೯ ||

ನನ್ನ ಕಯ್ಯಲ್ಲೇನೋ ನುಡೂದಿಲ್ಲ ಕೀನ್ನುರಿಯೇ ಕೇಳೇ”
“ನಿನ್ನ ನಲ್ಲನ ಕಯ್ಯಲೇ ನೀನೇ ನುಡೂವ್ಯಲ್ಲೇ ಕೋಲೇ” || ೧೦ ||

ಅಟ್ಟೊಂದು ಹೇಳುತೇಲೇ ಲೈದಾಳು ರಂಗನ ತಂಗೀ
ತಂಗೀವಂದು ಮಾತೇಲೇ ಕೇಳಿಯಾನೋ ಕೋಲೇ
ಆಗೇಲೋ ರಂಗಾನೂ ಬಾಳೆ ಬಂದೇ ಶಿಟ್ಟೇ ಬಂದೊ|| ೧೧ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...