ಅವಳು ಕಣ್ಣ ತೆರೆದಳು ಮೆಲ್ಲಗೆ
ಮೂಲೆ ಮೂಲೆ ಮೈಮುರಿದೆದ್ದಳು
ಹೊಂಗದಿರ ಪೊರಕೆಯಿಂದ ಸಂದು ಗೊಂದುಗಳ
ಝಾಡಿಸಿ ಕತ್ತಲು ಕಸ ಗುಡಿಸಿದಳು
ಮೂಡಲ ಬಾಗಿಲ ತೆರೆದು ಇರುಳ ಹೊದಿಕೆಯನೋಸರಿಸಿ
ತನ್ನಿನಿಯನ ಮೈತಟ್ಟಿ ಎಬ್ಬಿಸಿದಳು ಕಣ್ಣ ತೆರೆಸಿದಳು
ಗಾಳಿಯೂದಿನಕಡ್ಡಿಯ ಪರಿಮಳವೆಲ್ಲೆಡೆ
ಕುಂಕುಮದೋಕುಳಿಯ ಚಳೆ ಅಂಗಳಕೆ
ಬಣ್ಣ ಬಣ್ಣದ ಗೆರೆ ಮೋಡಿಯಿಂದ ರಂಗೋಲಿ ಹಾಕಿದಳು
ಚಿಕ್ಕೆ ಹೂಗಳನುದುರಿಸಿ ಹಸಿರುಡಿಯಲ್ಲಿ ತುಂಬಿಕೊಂಡಳು
ಪರಚಿಂತನ ಜಲದಿ ಮೈತೊಳೆದು
ನಿತ್ಯನೂತನ ಬಿಳಿ ಮಡಿಯುಟ್ಟು
ಅರಳಿದ ಸುಮನಗಳ ತಲೆಯಲ್ಲಿಟ್ಟುಕೊಂಡಳು
ಸೋರೆಕಾಯ ತಂತಿಗಳ ಮೀಟಿ ಮೀಟಿ
ಝೇಂಕರಿಸಿ ರಸರಂಜನೆಯಲ್ಲಿ ಎದೆದುಂಬಿ
ಕಂಠಕೇಸರ ದಾಟಿ ಜೇನುರಾಗ ಹೊಮ್ಮಿ
ಹೊರಮೊರೆಯುವಂತೆ ಹಾಡಿದಳು
ಗುಡಿಗಂಟೆ ಗಿಡಗಂಟೆಗಳ ಚಿಲಿಪಿಲಿ ಗೆಜ್ಜೆದನಿಗೆ
ಓಹೋ ಏನವಳ ನರ್ತನ
ಎಲ್ಲಿಡೆಯಲಿ ಮಧುರಂ ಮಧುರಂ ಸಂಕೀರ್ತನ
*****
Related Post
ಸಣ್ಣ ಕತೆ
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಒಲವೆ ನಮ್ಮ ಬದುಕು
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ಗಂಗೆ ಅಳೆದ ಗಂಗಮ್ಮ
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…