ನಿನ್ನೊಡನೆ ಮಾಡುವ ಹೃದಯಾಲಾಪವು
ಪ್ರೇಯಸಿಯ ಪಿಸುಮಾತಿಗಿಂತಲೂ ಮಧುರ
ನಿನ್ನ ಸಂತೈಕೆ ಯಾವುದೇ ಪ್ರವಾದಿಯ ಬೋಧೆಗಿಂತ ಶಾಂತಿದಾಯಕ
ನೀನು ಮುನಿದು ಮೌನವಾಗಿ ಬಯ್ಯುವುದು
ಯಾವ ತಾಯಿಯ ಮುನಿಸಿಗಿಂತಲೂ ತಾಪದಾಯಕ
ನಿನ್ನ ಸರಳ ಸುಂದರ ವಾಣಿ ಯಾವುದೇ ಕಾವ್ಯಧ್ವನಿಗಿಂತ ರಸಮಯ
ನಿನ್ನ ದನಿ ಕೇಳಿಸದಷ್ಟು ಅಂತರಾಳದಲ್ಲಿ ಒಳನುಡಿಯುತ್ತಿದ್ದರೂ
ಯಾವುದೇ ಭೀಷಣ ಭಾಷಣದಂತೆ ಕಿವಿಗಪ್ಪಳಿಸುತ್ತದೆ
ನಿನ್ನ ನುಡಿಸಿಡಿಲು ಯಾವುದೇ ಕ್ರಾಂತಿಕಾರಿಗಿಂತಲೂ
ಹೆಚ್ಚು ಪರಿಣಾಮಕಾರಿಯಾಗಿ ನನ್ನಸ್ತಿತ್ವವನ್ನೇ ಅಲ್ಲಾಡಿಸಿಬಿಡುತ್ತದೆ
ನನ್ನ ನೂರು ತಪ್ಪು ಹೆಜ್ಜೆಗಳಲ್ಲೊಂದು ಒಪ್ಪು ಹೆಜ್ಜೆಯಿಂದ ಹರ್ಷಿತಳಾಗಿ
ನೀನು ನನ್ನ ಭುಜತಟ್ಟಿ ಹುರಿದುಂಬಿಸುವುದು
ಯಾವುದೇ ವಿಶ್ವ ಸನ್ಮಾನ-ಪದಕ-ಪ್ರಶಸ್ತಿಗಿಂತಲೂ ಹೆಚ್ಚು ಸ್ಪೂರ್ತಿದಾಯಕ
ಆಗೊಂದೀಗೊಂದು ಸೆಳೆಮಿಂಚಿನಂತೆ ನೀನು ತೋರುವ ನವಕಿರಣ
ಯಾವುದೇ ಋಷಿಯ ಕಾಣ್ಕೆಯಂತೆ ವಿಜ್ಞಾನಿಯ ನವ ಶೋಧದಂತೆ
ಜೀವಿತವ ಸಾರ್ಥಕಗೊಳಿಸುತ್ತದೆ
ಇಷ್ಟಾದರೂ ನಿನ್ನ ನನ್ನ ಮುಖಭೆಟ್ಟಿ ಆಗಿಲ್ಲ
ನೀನಾರೆಂದು ನನಗೆ ತಿಳಿದಿಲ್ಲ.
Related Post
ಸಣ್ಣ ಕತೆ
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ಅಹಮ್ ಬ್ರಹ್ಮಾಸ್ಮಿ
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
-
ವ್ಯವಸ್ಥೆ
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…
-
ನಿರಾಳ
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…