ನಾವಿಂದು ಮಾತಾಡಬೇಕಾಗಿರುವುದು

ನಾವಿಂದು ಮಾತಾಡಬೇಕಾಗಿರುವುದು
ಮಂದೆಗಳ ಮುಂದೆ ಒಡಿಕುಗಡಿಗೆಗಳ ಕುಡುಕ ಶಬ್ದಗಳನ್ನಲ್ಲ
ಕಪ್ಪು ಮುಖವ ಬಿಳಿ ಮುಖವಾಡದಿಂದ ಮುಚ್ಚುವ
ಕಡ್ಡಿಯನ್ನೂ ಚಲಿಸಲಾಗದ ಸ್ವರ್ಗ ಪುರಾಣವನ್ನಲ್ಲ.
ಮಂಕು ಹಿಡಿದ ಮಂತ್ರಗಳನ್ನಲ್ಲ, ತುಕ್ಕುಹಿಡಿದ ತಂತ್ರಗಳನ್ನಲ್ಲ
ದಂತಗೋಪುರಗಳಲ್ಲಿ ಕುಳಿತು
ಹೂವು-ಜೇನು, ನಾರಿ-ಸೀರೆ, ಇಂದ್ರ-ಚಂದ್ರರ, ಗಾಳಿಬುರುಡೆಯನ್ನಲ್ಲ
ನೆಲಕಿಳಿಯದ ಭೂತ ಬೆಂತರಗಳೊಡನಲ್ಲ
ಮಣ್ಣ ರುಚಿಕಾಣದ ಅಪ್ಸರೆಯರೊಡನಲ್ಲ
ಇಹದಲ್ಲಿಳಿದುಬರದ ಪರದ ಪರದಾಟವನ್ನಲ್ಲ

ಮಾತಾಡಲು ಮಾತೇ ಬೇಕೇನು?

ಬಾಯೆಂಬ ತೂತೇ ಬೇಕೇನು?

ಕರೆವ ಕರಿಭವಿಷ್ಯದೊಡನೆ, ಕಲ್ಲಾದ ಮಣ್ಣಿನೊಡನೆ
ಮಣ್ಣಾದ ಮಾನವತೆಯೊಡನೆ
ಉರಿಬಿಸಿಲು ಮೊರೆಗಾಳಿ ಹರಿನೀರು ಸುರಿಮಳೆ ಬರಿವಾಸ್ತವದೊಡನೆ
ಅಳುಮೊಗ ಕೊಳೆತ ಮತಿ ಎಲುಬುಗೂಡಿನ ಗುಡಿಸಲುಗಳೊಡನೆ
ಬೆವರ ಹನಿ ರಕ್ತ ಬಿಂದುಗಳಿಂದ
ಕೈ ಬೆರಳು, ತೋಳು ಕಾಲುಗಳ ಉಕ್ಕಿನ ಖಂಡಗಳಿಂದ
ಒಡಲ ವೀರ್ಯದಿಂದ ಸಾಹಸದ ತೂರ್ಯದಿಂದ
ಹಾರೆ ಸಲಿಕೆ ಸುತ್ತಿಗೆ ಚಮ್ಮಟಿಗೆಗಳಿಂದ
ಗ್ರಂಥ ದೀಪಗಳಿಂದ ಪ್ರನಾಳ ಭೂತಕನ್ನಡಿಗಳಿಂದ
ಎಲ್ಲಕ್ಕೂ ಒಳಗಿಳಿದು ಮಿದುಳುಬಳ್ಳಿಯಿಂದ ಮನದ ಮಾನದಿಂದ
ಬಿಚ್ಚದೆಯ ಮಿಡಿತದಿಂದ ಮಾನವತೆಯ ಏಕನಾಡಿ ಸೂತ್ರದಿಂದ
ನಾವಿಂದು ಮಾತಾಡಬೇಕು
ಅಂದರೆ ಮಾಡಬೇಕು
ಮಾತು ಮಾಡಿದಂತಿರಬೇಕು
ಮಾಡಿದ್ದೇ ಮಾತಾಗಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊರೆತದ ನಂತರ
Next post ಪಾಪಾಸಿನ ಗಂಡ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys