Home / ಕವನ / ಕವಿತೆ / ಸೃಷ್ಟಿ

ಸೃಷ್ಟಿ

ಸೆರೆನಿಶೆಯ ಗುಂಗಿನ ಗುಳ್ಳೆಗಳ ಹೂಟ್ಟೆಯುಬ್ಬರತನವಲ್ಲ ಇದು
ಈ ಕೈಯಿಂದಾ ಕೈಗೆ ಮಾಯವಾಗಿ ಬರುವ ಪೈಶಾಚೀ ಪೇಚಲ್ಲ
ಯಾರದೋ ಜೇಬು ಖಾಲಿಯಾಗಿ ಯಾರದೋ ಬೊಜ್ಜು ಭರ್ತಿಯಾಗಿ
ಒಮ್ಮೆಲೇ ಮೇಲೆದ್ದ ಅರ್ ಸಿ ಸಿ ಮಹಲಲ್ಲ

ಕೋಳಿ ಕೆದರಿ, ಊರಹಂದಿ ಗೂರಿ
ಮೈಗಳ್ಳೆಮೈ ಗಮ್ಮೆಂಬ ಕೊಳಚೆ ಹೊಂಡದಲ್ಲಿ ಬಿದ್ದಲ್ಲಿ
ಹರಿದಾಡಿಯಾವು ಬರೀ ಹುಳ
ಮರ್ಯಾದೆ ಪಾಚಿಗಟ್ಟಿ ಹಾಕೀತು ಹೊಸ ಸೋಗು
ಹೊಟ್ಟೆಯಲ್ಲೇ ಕೈಕಾಲಾಡಿಸಿ ಭಂಡಗೆಟ್ಟ ಬಸಿರ ಹೊಸೆದರೆ ಬರೀ ನರಳಾಟ
ಬೆಳಕಿಗೆದೆತೆರೆಯುವ ಮನ ತಿಪ್ಪೆಯಲ್ಲಿ ಹೂಳಿಹೋಗಬಹುದಷ್ಟೆ

ಹೊಗೆಯುಗುಳುಗುಳಿ ಇಲ್ಲಣಗಟ್ಟಿದ ಗೂಡಿನಲ್ಲುಲಿಯದು ಪಾಡುವಕ್ಕಿ.
ಕದಡೆಲ್ಲ ಇಳಿದು ತಳಕೆ ಹದವಾಗಿ ತಿಳಿಹೊಳೆ ಹರಿಯ ಹತ್ತಿದರೆ
ಮೇಲೆ ಕೆಳಗೀಜಾಡಿಯಾವು ಮೀನು
ಬೀಜ ಮೊಳಕೆ ಚಿಗುರಾಗಿ ಕಸದಿಂದ ರಸವೊಸರಿ
ಹಸಿರೆತ್ತೀತು ಛತ್ತರಿತಲೆ ನಳ ನಳಿಸಿ ಚಿಮ್ಮಿ ಚೈತನ್ಯಚಿಲುಮೆ
ಸತ್ಯದ ಬೇರಿಂದ ಸತ್ವ ಹೀರಿ ನಿತ್ಯನೂತನ ಸೊಬಗು
ಮುಗಿಲ ಮಾತಾಡಿಸುತ್ತದೆ

ಸೃಷ್ಟಿಯೆಂದರೆ ಬೆವರ ಹನಿಹನಿ ಪೋಣಿಸಿ ಹೆಣೆದ ಹೂಮಾಲೆ
ಬಿಂದು ಸಿಂಧುವಾಗುವ ಕಣವು ಕೂಸಾಗುವ ಸಾಧನ
ಒಂದೊಂದೇ ಕಡ್ಡಿಕೂಡಿಸಿ ಜೋಡಿಸಿ ಹೆಣೆದ ಗುಬ್ಬಚ್ಚಿಗೂಡು
ಎಲೆ ಎಲೆ ಕಟ್ಟಿದ ಪರ್ಣಶಾಲೆ ಮಳೆ ಗಾಳಿ ಚಳಿಬಿಸಿಲುಗಳಲ್ಲಿ
ಸೃಷ್ಟಿಯೊಡನೆ ಸಂದಿಲ್ಲಿದೆ ಹೊಂದಿಕೊಂಡ ಸಹಜ ಕೃತಿಯಯ್ಯ ಸೃಷ್ಟಿ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...