Home / ಕವನ / ಕವಿತೆ / ಸೃಷ್ಟಿ

ಸೃಷ್ಟಿ

ಸೆರೆನಿಶೆಯ ಗುಂಗಿನ ಗುಳ್ಳೆಗಳ ಹೂಟ್ಟೆಯುಬ್ಬರತನವಲ್ಲ ಇದು
ಈ ಕೈಯಿಂದಾ ಕೈಗೆ ಮಾಯವಾಗಿ ಬರುವ ಪೈಶಾಚೀ ಪೇಚಲ್ಲ
ಯಾರದೋ ಜೇಬು ಖಾಲಿಯಾಗಿ ಯಾರದೋ ಬೊಜ್ಜು ಭರ್ತಿಯಾಗಿ
ಒಮ್ಮೆಲೇ ಮೇಲೆದ್ದ ಅರ್ ಸಿ ಸಿ ಮಹಲಲ್ಲ

ಕೋಳಿ ಕೆದರಿ, ಊರಹಂದಿ ಗೂರಿ
ಮೈಗಳ್ಳೆಮೈ ಗಮ್ಮೆಂಬ ಕೊಳಚೆ ಹೊಂಡದಲ್ಲಿ ಬಿದ್ದಲ್ಲಿ
ಹರಿದಾಡಿಯಾವು ಬರೀ ಹುಳ
ಮರ್ಯಾದೆ ಪಾಚಿಗಟ್ಟಿ ಹಾಕೀತು ಹೊಸ ಸೋಗು
ಹೊಟ್ಟೆಯಲ್ಲೇ ಕೈಕಾಲಾಡಿಸಿ ಭಂಡಗೆಟ್ಟ ಬಸಿರ ಹೊಸೆದರೆ ಬರೀ ನರಳಾಟ
ಬೆಳಕಿಗೆದೆತೆರೆಯುವ ಮನ ತಿಪ್ಪೆಯಲ್ಲಿ ಹೂಳಿಹೋಗಬಹುದಷ್ಟೆ

ಹೊಗೆಯುಗುಳುಗುಳಿ ಇಲ್ಲಣಗಟ್ಟಿದ ಗೂಡಿನಲ್ಲುಲಿಯದು ಪಾಡುವಕ್ಕಿ.
ಕದಡೆಲ್ಲ ಇಳಿದು ತಳಕೆ ಹದವಾಗಿ ತಿಳಿಹೊಳೆ ಹರಿಯ ಹತ್ತಿದರೆ
ಮೇಲೆ ಕೆಳಗೀಜಾಡಿಯಾವು ಮೀನು
ಬೀಜ ಮೊಳಕೆ ಚಿಗುರಾಗಿ ಕಸದಿಂದ ರಸವೊಸರಿ
ಹಸಿರೆತ್ತೀತು ಛತ್ತರಿತಲೆ ನಳ ನಳಿಸಿ ಚಿಮ್ಮಿ ಚೈತನ್ಯಚಿಲುಮೆ
ಸತ್ಯದ ಬೇರಿಂದ ಸತ್ವ ಹೀರಿ ನಿತ್ಯನೂತನ ಸೊಬಗು
ಮುಗಿಲ ಮಾತಾಡಿಸುತ್ತದೆ

ಸೃಷ್ಟಿಯೆಂದರೆ ಬೆವರ ಹನಿಹನಿ ಪೋಣಿಸಿ ಹೆಣೆದ ಹೂಮಾಲೆ
ಬಿಂದು ಸಿಂಧುವಾಗುವ ಕಣವು ಕೂಸಾಗುವ ಸಾಧನ
ಒಂದೊಂದೇ ಕಡ್ಡಿಕೂಡಿಸಿ ಜೋಡಿಸಿ ಹೆಣೆದ ಗುಬ್ಬಚ್ಚಿಗೂಡು
ಎಲೆ ಎಲೆ ಕಟ್ಟಿದ ಪರ್ಣಶಾಲೆ ಮಳೆ ಗಾಳಿ ಚಳಿಬಿಸಿಲುಗಳಲ್ಲಿ
ಸೃಷ್ಟಿಯೊಡನೆ ಸಂದಿಲ್ಲಿದೆ ಹೊಂದಿಕೊಂಡ ಸಹಜ ಕೃತಿಯಯ್ಯ ಸೃಷ್ಟಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...