ಇಳಿಹೊತ್ತು

ಸಂಜೆ… ಇಳಿ ಹೊತ್ತಿನಲಿ
ಏಕಾಂಗಿತನದಿ… ನಾ ಬೆಟ್ಟವೇರುತಿರಲು
ಬೆಳ್ಳಿಯಾಗಸವ ಭೇದಿಸುತ
ನಿಸರ್ಗದ ನೈರ್ಮಲ್ಯ ಆಲಿಸುತ
ನಿರ್ಲಿಪ್ತತೆಯ ನಿಷೆ ಆವರಿಸಿತ್ತು

ಆ ಬಿಳಿಯಾಗಸದಿ ಭೇದವನೆಣಿಸದೆ
ಬರಸೆಳೆದು ಮುತ್ತಿಡುತ…
ಜೋಡಿಯಲಿ – ಹತ್ತಿರವಾಗಿ…
ಬಾನಲಿ ಹಕ್ಕಿಗಳು ಹಾರುತಿರಲು
ಹಕ್ಕಿಗಳ ರಾಜ, ಎಲ್ಲಿ… ನಿನ್ನಾಕೆ
ಬರಸೆಳೆದು ಮುತ್ತಿಡು…
ಕುಳುತಿರುವಿ ಏಕೆ… ನಿರ್ಲಿಪ್ತದಿ…?
ಎನ್ನುತ ಆಗಸದಿ ಮರೆಯಾದವು

ಮನಸ್ಸು ಮರು ಮಾತಾಡದೆ
ಮೇಲೆ ಗಗನ ನೋಡುತ
ಬೆಳೆದ ಮರಗಳ ತಂಗಾಳಿಯಲಿ
ಜುಳು-ಜುಳು-ವೆನ್ನುತ ಸಾಗಿದ
ನೀರಿನ ಝರಿಯ ಆ ನಾದದಲಿ
ಕೋಮಲದ ಆ ಮಧುರ ಸ್ವರದಿ
ಎಲ್ಲಿ… ನಿನ್ನಾ… ಮಾಧುರಿ…?
ಗುನುಗು… ಮನ ಗರಬಡಿಸಿತು.

ಅಲ್ಲಾಡುವಾ ಪ್ರಶ್ನೆಗಳಿಗುತ್ತರಿಸಲೆ…
ಎನ್ನುತಲಿ, ಕತ್ತಲೆ ಮೃಗವು…
ಬೆನ್ನಟ್ಟಿ ನನಗರಿವಿಲ್ಲದೆ ಕಾಲುಗಳು
ಬೆಟ್ಟವಿಳಿಸುತ ಮನೆಯೆಡೆ ಓಡುತ್ತಾ
ತಳ್ಳುತಲಿ… ಕೊಂಡೊಯ್ದವು..

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಡ್ವಾಣಿ ಒಬ್ಬರೇ ಅಲ್ಲ ಟೋಟಲಿ ರಾಜಕಾರಣಿಗಳ ಗ್ರಹಗತಿನೇ ನೆಟ್ಟಗಿಲ್ರಿ
Next post ಪಯಣ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys