ಶಿವ ಬೆಳಕು

ಮೂಡಣ ನಾಡಿನಿಂದ ತೂರಿತು ಬೆಳಕು
ಎತ್ತೆತ್ತ ಹರಿಯಿತು ಹೊಳೆಯೊಯ್ತು ಬೆಳಕು
ಕತ್ತಲೆಯ ಓಡಿಸಿ ಬೆಳಗಿತ್ತು ಬೆಳಕು
ಹೃದಯ ತುಂಬೆಲ್ಲ ಹರಿಸಿತ್ತು ಬೆಳಕು

ಬಡವನ ಹೃದಯದಲಿ ಸಿರಿಯಾಯ್ತು ಬೆಳಕು
ಮುಳ್ಳುಕಂಟೆ ಗಿಡಕ್ಕೆ ಹೂವಾಯ್ತು ಬೆಳಕು
ಬರಡು ಭೂಮಿಗೆ ಮಳೆಯಾಯ್ತು ಬೆಳಕು
ಅಪಿಯೇ ಅರಿಯದವಗೆ ಅಕ್ಕರವಾಯ್ತು ಬೆಳಕು

ಸಂಗೀತ ಪ್ರೇಮಿಗೆ ಸರಿಗಮವಾಯ್ತು ಬೆಳಕು
ಮೂಕನಾದವಗೆ ಮಾತಾಯ್ತು ಬೆಳಕು
ವಿದ್ಯೆ‌ಅರಿದವಗೆ ಜ್ಞಾನವಾಯ್ತು ಬೆಳಕು
ಪ್ರಾಣ ಹೋಗುವವಗೆ ಉಸಿರಾಯ್ತು ಬೆಳಕು

ಆಚಾರಗೆಟ್ಟವಗೆ ನೀತಿಯ್ತು ಬೆಳಕು
ಅಭಿಮಾನಿ ವ್ಯಕ್ತಿಗೆ ಮಾನಯ್ತು ಬೆಳಕು
ಅಮಿತಗಳಿಸುವವಗೆ ಆಸೆಯಾಯ್ತು ಬೆಳಕು
ತಬ್ಬಲಿಯಾದವಗೆ ಗತಿಯಾಯ್ತು ಬೆಳಕು

ಹಬ್ಬಗಳಿಗೆ ದೀಪಾವಳಿವಾಯ್ತು ಬೆಳಕು
ಹೀನಗುಣಗಳಿಗಾಯ್ತು ಉದಾರತೆ ಬೆಳಕು
ಪಾಪಿ ಹೃದಯದಲಿ ಭಕ್ತಿಯಾಯ್ತು ಬೆಳಕು
ಮಾಣಿಕ್ಯ ವಿಠಲನೇ ಶಿವವಾಯ್ತು ಬೆಳಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩೮

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…