ಆಧ್ಯಾತ್ಮಿಕ ಬಾಳು

ದೇವಾ ನಿನಗೆ ನಿಚ್ಚ ಮೊರೆ ಇಡುವೆ
ಎನಗೆ ಸ್ವಚ್ಛ ಮನವ ನೀಡು ನೀನು
ನಿನ್ನ ಕೃಪೆ ಸಾಗರ ಬತ್ತಿ ಹೋದರೆ
ಈ ನನ್ನ ಜನುಮ ಸಾರ್‍ಥಕವೇನು!

ಮಾಯೆ ಇದು ಭೀಕರ ಕರಾಳ
ಇದರ ಬಾಹುನಲ್ಲಿ ನಲಗುತ್ತಿರುವೆ ನಾ
ನೀನು ನನ್ನ ಮಾಯಾ ಸೆರೆ ಬಿಡಿಸದೆ
ಶಾಂತಿ ಎಲ್ಲಿಯದು ಹಲಬುತ್ತಿರುವೆ ನಾ

ಎತ್ತೆತ್ತ ನೋಡಲು ಇಂದ್ರಿಯಗಳೇ
ಮತ್ತು ಮನದ ಅಟ್ಟ ಹಾಸಗಿವು
ಎನ್ನೊಳಗಿನವನನ್ನು ಕೇಳದೆ ಹೇಳದೆ
ಮಾಡುತ್ತಿವೆ ತೋಚಿದಂತೆ ಸಾಹಸವು

ಜನುಮ ಜನುಮಗಳಿಗೂ ಮನಸು
ಸಂಗಾತಿಯಾಗಿ ತಂದಿದೆ ನರಕ
ನಿನ್ನದಯೆ ನನ್ನ ಮೇಲೆ ಇರದಿರೆ
ನನಗೆ ಹೇಗೆ ಲಭಿಸಿತು ನಾಕ

ನಾನು ನಿನ್ನದುರಿನಲಿ ಅತ್ತು ಅತ್ತು
ಬೇಡುತ್ತಿರುವೆ ನನ್ನನ್ನು ಕಾಪಾಡು
ಈ ಮೋಹ ಮಾಯೆಗಳಿಂದ ಬಿಡಿಸೆನ್ನ
ಮಾಣಿಕ್ಯ ವಿಠಲನಾಗಿ ಮಾರ್‍ಪಾಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೭
Next post ಮಲ್ಲಿ – ೫

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…