ಆಧ್ಯಾತ್ಮಿಕ ಬಾಳು

ದೇವಾ ನಿನಗೆ ನಿಚ್ಚ ಮೊರೆ ಇಡುವೆ
ಎನಗೆ ಸ್ವಚ್ಛ ಮನವ ನೀಡು ನೀನು
ನಿನ್ನ ಕೃಪೆ ಸಾಗರ ಬತ್ತಿ ಹೋದರೆ
ಈ ನನ್ನ ಜನುಮ ಸಾರ್‍ಥಕವೇನು!

ಮಾಯೆ ಇದು ಭೀಕರ ಕರಾಳ
ಇದರ ಬಾಹುನಲ್ಲಿ ನಲಗುತ್ತಿರುವೆ ನಾ
ನೀನು ನನ್ನ ಮಾಯಾ ಸೆರೆ ಬಿಡಿಸದೆ
ಶಾಂತಿ ಎಲ್ಲಿಯದು ಹಲಬುತ್ತಿರುವೆ ನಾ

ಎತ್ತೆತ್ತ ನೋಡಲು ಇಂದ್ರಿಯಗಳೇ
ಮತ್ತು ಮನದ ಅಟ್ಟ ಹಾಸಗಿವು
ಎನ್ನೊಳಗಿನವನನ್ನು ಕೇಳದೆ ಹೇಳದೆ
ಮಾಡುತ್ತಿವೆ ತೋಚಿದಂತೆ ಸಾಹಸವು

ಜನುಮ ಜನುಮಗಳಿಗೂ ಮನಸು
ಸಂಗಾತಿಯಾಗಿ ತಂದಿದೆ ನರಕ
ನಿನ್ನದಯೆ ನನ್ನ ಮೇಲೆ ಇರದಿರೆ
ನನಗೆ ಹೇಗೆ ಲಭಿಸಿತು ನಾಕ

ನಾನು ನಿನ್ನದುರಿನಲಿ ಅತ್ತು ಅತ್ತು
ಬೇಡುತ್ತಿರುವೆ ನನ್ನನ್ನು ಕಾಪಾಡು
ಈ ಮೋಹ ಮಾಯೆಗಳಿಂದ ಬಿಡಿಸೆನ್ನ
ಮಾಣಿಕ್ಯ ವಿಠಲನಾಗಿ ಮಾರ್‍ಪಾಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೭
Next post ಮಲ್ಲಿ – ೫

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…