Home / ಕವನ / ಕವಿತೆ / ಬಲೆ ಜಿಪ್ಣ ಮುನಿಯ

ಬಲೆ ಜಿಪ್ಣ ಮುನಿಯ

ಊರಾಚೆ ಪಡಕಾನೆ ಇಟ್ಟೌನೆ ಮುನಿಯ-
ಬಲ್ ಜಿಪ್ಣ ಪಡಕಾನೆ ಯೆಜಮಾನ ಮುನಿಯ.
ಮನೇ ತಾಕ್ ಯಾರೋದ್ರು ಬೆದರ್‍ತಾನಾ ಮುನಿಯ-
ಯಾರ್ ಬಿಕ್ಸೆ ಬೇಡ್ತಾರ್‌ ಅಂತ್ ಎದರ್‍ತಾನಾ ಮುನಿಯ-
ಊರಾಚೆ ಪಡಕಾನೆ ಯೆಜಮಾನ ಮುನಿಯ-
ನಂ ಮುನಿಯ! ನಂ ಮುನಿಯ! ಜಿಪ್ಣ ನಂ ಮುನಿಯ! ೧

ಮನೇ ತಾಕ್ ಯಾರ್ ಬರ್‍ಲಿ ಕೂಗ್ತಾನ್ ಔನ್ ಕಿರ್‍ಲಿ-
ಬಂದೋರ್‍ಗೆ ಕೇಳೋಹಂಗ್ ಕೂಗ್ತಾನ್ ಆ ಮುನಿಯ
ಮನೆಯೋರ್‍ನ ಬೊಯ್ಯೋ ಹಂಗ್ ಕೂಗ್ತಾನ್ ಆ ಮುನಿಯ:
‘ಬೋರಯ್ಯ ತಂದ್ ಕೊಟ್ಟ ತಕೊಂಡೋದ್ ನೂರ?
ಮನೇಗ್ ಬೇರ್ ಆಕ್ಬೇಕಿನ್ ಮಂಗ್ಳೂರೆಂಚ್ ಸೂರ!
ತಕ್ಕೊಂಡೋದ್ ಮಕ್ಳಿನ್ನಾ ಬಡ್ಡಿ ಕೊಡ್ದಿರ್‍ಲಿ-
ಉಪ್ಗೂನೆ ವುಳಿಗೂನೆ ಕಾಸ್ ಎಲ್ಲಿಂದ್ ತರ್‍ಲಿ?
ಪರಪಂಚ ಕೆಟ್ಟೋಯ್ತು -ಬಲ್ ಪೂರ ಓಯ್ತು-
ಇಂಗಿದ್ರೆ ನಾವೆಲ್ಲ ಬಾಳ್ ಬದಕಿದಂಗಾಯ್ತು!
ತಕ್ಕೊಂಡೋರ್ ತಕ್ಕೊಂಡಂಗ್ ತಿನ್ಕಂಡ್ ಓಗ್ತಿರ್‍ಲಿ-
ಗಂಟ್ಟೆಲ್ಲ ಕಟ್ಟೋಯ್ತು ಇವ್ರತ್ರ ವೊರ್‍ಲಿ!
ಕಟ್ಬೇಕ್ ಇನ್ ಮಂಡೀಗೆ ಸಾವರದೆಂಟ್ ನೂರು!
ಮತ್ಬೇರೆ ಬ್ಯಾಂಕ್ಗಿನ್ನು ಎರಡ್ಸಾವರದ್ ನೂರು!

ಎಲ್ಲಿಂದ ತರಬೇಕೋ ದೇವರ್‍ಗೇ ಬೆಳಕು!
ಮಿಕ್ಕೋರೀಗ್ ಏನ್ ಗೊತ್ತು ಈ ಚೋಳಿನ್ ಚಳಕು!
ಕೇಳ್ದೋರಿಗ್ ಕೊಟ್ತಂದ್ರೆ ಅಸಲೇನೆ ಸ್ವಾಆ!
ಇನ್ನಾರನ್ ಕೇಳ್ಬೇಕೊ ಬಡ್ಡಿ? ಹ್ಹ್! ಹ್ಹ್! ಹ್ಹ್!
ತಕ್ಕೊಂಡೋರ್ ತೆರದಿರ್‍ಲಿ ಬೇಗ್ಬೇಗ ತಂದು
ಸತ್ತಾರ ವೋಯ್ತೀನಿ ವಿಸಗಿಸ ತಿಂದು! ೨

ಯೆಂಡದಂಗಡಿ ಮುನ್ಯಣ್ಣ! ಪಡಕಾನೆ ಮುನ್ಯ!
ಏನ್ ಏಳ್ಲಿ ನೀ ಕೊಡ್ಸೋ ಬಲ್ಬಲೆ ಪುನ್ಯ!
ಬೇಡಿದೋರ್‍ಗೆ ನೀಡ್ದಿದ್ರೆ ಪಾಪಾಂತ್ ಅಂದ್ರೆ
ಬೇಡೋಕ್ಕೂ ಮುಂಚೇನೆ ಬಾಕ್ಲ್ ಇಕ್ತ ಬಂದ್ರೆ
ಏನ್ ಏಳ್ಲಿ ಮುನ್ಯಣ್ಣ ನೀ ಕೊಡ್ಸೊ ಪುನ್ಯ!
ಜಿಪುಣಾಂದ್ರೆ ನಿನ್ ಬಿಟ್ರೆ ಬೇರಿಲ್ಲ ಮುನ್ಯ! ೩
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...