Home / ಕವನ / ಕವಿತೆ / ಬಲೆ ಜಿಪ್ಣ ಮುನಿಯ

ಬಲೆ ಜಿಪ್ಣ ಮುನಿಯ

ಊರಾಚೆ ಪಡಕಾನೆ ಇಟ್ಟೌನೆ ಮುನಿಯ-
ಬಲ್ ಜಿಪ್ಣ ಪಡಕಾನೆ ಯೆಜಮಾನ ಮುನಿಯ.
ಮನೇ ತಾಕ್ ಯಾರೋದ್ರು ಬೆದರ್‍ತಾನಾ ಮುನಿಯ-
ಯಾರ್ ಬಿಕ್ಸೆ ಬೇಡ್ತಾರ್‌ ಅಂತ್ ಎದರ್‍ತಾನಾ ಮುನಿಯ-
ಊರಾಚೆ ಪಡಕಾನೆ ಯೆಜಮಾನ ಮುನಿಯ-
ನಂ ಮುನಿಯ! ನಂ ಮುನಿಯ! ಜಿಪ್ಣ ನಂ ಮುನಿಯ! ೧

ಮನೇ ತಾಕ್ ಯಾರ್ ಬರ್‍ಲಿ ಕೂಗ್ತಾನ್ ಔನ್ ಕಿರ್‍ಲಿ-
ಬಂದೋರ್‍ಗೆ ಕೇಳೋಹಂಗ್ ಕೂಗ್ತಾನ್ ಆ ಮುನಿಯ
ಮನೆಯೋರ್‍ನ ಬೊಯ್ಯೋ ಹಂಗ್ ಕೂಗ್ತಾನ್ ಆ ಮುನಿಯ:
‘ಬೋರಯ್ಯ ತಂದ್ ಕೊಟ್ಟ ತಕೊಂಡೋದ್ ನೂರ?
ಮನೇಗ್ ಬೇರ್ ಆಕ್ಬೇಕಿನ್ ಮಂಗ್ಳೂರೆಂಚ್ ಸೂರ!
ತಕ್ಕೊಂಡೋದ್ ಮಕ್ಳಿನ್ನಾ ಬಡ್ಡಿ ಕೊಡ್ದಿರ್‍ಲಿ-
ಉಪ್ಗೂನೆ ವುಳಿಗೂನೆ ಕಾಸ್ ಎಲ್ಲಿಂದ್ ತರ್‍ಲಿ?
ಪರಪಂಚ ಕೆಟ್ಟೋಯ್ತು -ಬಲ್ ಪೂರ ಓಯ್ತು-
ಇಂಗಿದ್ರೆ ನಾವೆಲ್ಲ ಬಾಳ್ ಬದಕಿದಂಗಾಯ್ತು!
ತಕ್ಕೊಂಡೋರ್ ತಕ್ಕೊಂಡಂಗ್ ತಿನ್ಕಂಡ್ ಓಗ್ತಿರ್‍ಲಿ-
ಗಂಟ್ಟೆಲ್ಲ ಕಟ್ಟೋಯ್ತು ಇವ್ರತ್ರ ವೊರ್‍ಲಿ!
ಕಟ್ಬೇಕ್ ಇನ್ ಮಂಡೀಗೆ ಸಾವರದೆಂಟ್ ನೂರು!
ಮತ್ಬೇರೆ ಬ್ಯಾಂಕ್ಗಿನ್ನು ಎರಡ್ಸಾವರದ್ ನೂರು!

ಎಲ್ಲಿಂದ ತರಬೇಕೋ ದೇವರ್‍ಗೇ ಬೆಳಕು!
ಮಿಕ್ಕೋರೀಗ್ ಏನ್ ಗೊತ್ತು ಈ ಚೋಳಿನ್ ಚಳಕು!
ಕೇಳ್ದೋರಿಗ್ ಕೊಟ್ತಂದ್ರೆ ಅಸಲೇನೆ ಸ್ವಾಆ!
ಇನ್ನಾರನ್ ಕೇಳ್ಬೇಕೊ ಬಡ್ಡಿ? ಹ್ಹ್! ಹ್ಹ್! ಹ್ಹ್!
ತಕ್ಕೊಂಡೋರ್ ತೆರದಿರ್‍ಲಿ ಬೇಗ್ಬೇಗ ತಂದು
ಸತ್ತಾರ ವೋಯ್ತೀನಿ ವಿಸಗಿಸ ತಿಂದು! ೨

ಯೆಂಡದಂಗಡಿ ಮುನ್ಯಣ್ಣ! ಪಡಕಾನೆ ಮುನ್ಯ!
ಏನ್ ಏಳ್ಲಿ ನೀ ಕೊಡ್ಸೋ ಬಲ್ಬಲೆ ಪುನ್ಯ!
ಬೇಡಿದೋರ್‍ಗೆ ನೀಡ್ದಿದ್ರೆ ಪಾಪಾಂತ್ ಅಂದ್ರೆ
ಬೇಡೋಕ್ಕೂ ಮುಂಚೇನೆ ಬಾಕ್ಲ್ ಇಕ್ತ ಬಂದ್ರೆ
ಏನ್ ಏಳ್ಲಿ ಮುನ್ಯಣ್ಣ ನೀ ಕೊಡ್ಸೊ ಪುನ್ಯ!
ಜಿಪುಣಾಂದ್ರೆ ನಿನ್ ಬಿಟ್ರೆ ಬೇರಿಲ್ಲ ಮುನ್ಯ! ೩
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...