Home / ಕವನ / ಕವಿತೆ / ವ್ಯಾಪಾರ

ವ್ಯಾಪಾರ

ಇಲ್ಲಿ ನಿತ್ಯಸಂತೆ
ಅನುಕ್ಷಣವೂ ಬಿರುಸಿನ ಮಾರಾಟ
ಎಲ್ಲ ಎಲ್ಲವೂ ವ್ಯಾಪಾರದಾಟ!

ಹೂವು – ಹಣ್ಣು
ಹಸಿರು – ಮೀನು
ನಾನು – ನೀನು – ಅವನು
ಎಲ್ಲ ಇಲ್ಲಿ ಬಿಕರಿಗಿಟ್ಟ ಸರಕು!

ಭರಾಟೆ ಮಾರಾಟದಲಿ
ಯಾರಿಗೆ ಬೇಕು
ಹೃದಯದ
ಕೂಡಬಲ್ಲ ಕಳೆಯಬಲ್ಲ ತಲೆಯಿದ್ದರೆ
ಸಾಕು!

ಕೊಡುವುದೆಷ್ಟು? ಕೊಳುವುದೆಷ್ಟು?
ಲಾಭವೆಷ್ಟು? ನಷ್ಟವೆಷ್ಟು
ಎಲ್ಲ ಬರಿಯ ಲೆಕ್ಕ
ತಕ್ಕಡಿಯೇ ಇಲ್ಲಿ ಮುಖ್ಯ!

ಸಂತೆಯೊಳಗೆಲ್ಲಾ
ಅರ್ಥವಾಗುವುದೊಂದೇ ಭಾಷೆ
ವಿಕ್ರಯವೇ ಗುರಿಯು
ಅದಕೆ ಎಷ್ಟೊಂದು ವೇಷ!

ಗದ್ದಲದೀ ಸಂತೆಯಲಿ
ಮತ್ತೆ ಯಾವುದೇನು ನುಡಿದರೇನು?
ಮಿಡಿವರೇನು?
ಮಾತಿಗೆಲ್ಲಿದೆ ಅರ್ಥ?

ನಮ್ಮ ಕನಸು – ಬಣ್ಣ
ಭಾವ – ಮೌನ
ಎಲ್ಲ ಇಲ್ಲಿ ವ್ಯರ್ಥ!

ಕೊಡು ಕೊಳುವವರ
ಮೆಟ್ಟುಗಳಡಿಯಲಿ
ತಕ್ಕಡಿಯ ಭಾರದ
ಬೊಟ್ಟುಗಳಡಿಯಲಿ
ನಿತ್ಯವೂ ನಲುಗುವ
ಸೂಕ್ಷ್ಮ ನೈಜತೆಗಳ ಲೆಕ್ಕ
ಇಟ್ಟವರಾರು ಪಕ್ಕಾ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...