ಕ್ಷಮೆ ಇರಲಿ ನನಗೆ

ಘಾತಕ್ಕೊಳಗಾಗಿ ಪತರುಗುಟ್ಟುತ್ತಿದ್ದ
ನನ್ನ ನಿರಾಕಾರ ಮಾನಕ್ಕೆ
ಸೊಕ್ಕೆಂಬುದು ನೀವಿಟ್ಟ ಹೆಸರು.

ಎತ್ತೆತ್ತಲಿಂದಲೂ ನೀವೆಷ್ಟೇ ಬೆಂಕಿ ಇಟ್ಟರೂ
‘ಅದು’ ದಹಿಸಿ ಹೋಗದ್ದಕ್ಕೆ
ಕ್ಷಮೆ ಇರಲಿ ನನಗೆ.

ಗವ್ವೆನುವ
ಕತ್ತಲ ಗವಿಯೊಳಗೆ
ನನಗೆಂದೇ ಹಚ್ಚಿಟ್ಟ
ಆ ದೀಪಕ್ಕೆದುರಾದ
ವಿಲಗುಟ್ಟುವ ನನ್ನ ಮಾನ
ಸುಮ್ಮನಿದ್ದರೂ ಇರಲಾಗದೇ
ಮಿಡುಕುತ್ತಾ ಹೊಯ್ದಾಡುತ್ತಿದೆ
ಕಿಚ್ಚಿಗೆ ಬೆಂಕಿಯಾಗಿ

ಉರಿದು ಹೋಗಬಹುದಿತ್ತು….
ನುಡಿಯ ತುಂಬಿ ಬಸಿರಾಗಿ
ಇಳಿಯತೊಡಗಿದೆ ದೀಪದಾಳಕ್ಕೆ
ಮೊದಲು ಎಣ್ಣೆ ಬೋಗುಣಿಗೆ
ನಿಧಾನಕ್ಕೆ ಬತ್ತಿಗೆ
ಕೈ ಬಡಿದು ಈಜುತ್ತಾ
ಬತ್ತಿಯನ್ನೇರಿ ತುತ್ತತುದಿಗೆ
ಉರಿಯುತ್ತಿದ್ದ ಸೊಡರಿನ
ಮಧ್ಯಬಿಂದುವಿಗೆ.

ಉರಿಯಲೇಬೇಕಿದೆ ನನಗೆ
ಬೆಂಕಿಯಾಗಲ್ಲ ದೀಪವಾಗಿ
ರೆಪ್ಪೆ ಅಲುಗದಂತೆ ಉರಿಯಬೇಕಿದೆ
ದೀಪವೇ ಆಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವ್ಯಾಧ್ಯಯನ: ಮ್ಯಾಥ್ಯೂ ಅರ್ನಾಲ್ಡ್‌ನ ವಿಚಾರಗಳು
Next post ಮನ ಮಂಥನ ಸಿರಿ – ೬

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

cheap jordans|wholesale air max|wholesale jordans|wholesale jewelry|wholesale jerseys