ಕ್ಷಮೆ ಇರಲಿ ನನಗೆ

ಘಾತಕ್ಕೊಳಗಾಗಿ ಪತರುಗುಟ್ಟುತ್ತಿದ್ದ
ನನ್ನ ನಿರಾಕಾರ ಮಾನಕ್ಕೆ
ಸೊಕ್ಕೆಂಬುದು ನೀವಿಟ್ಟ ಹೆಸರು.

ಎತ್ತೆತ್ತಲಿಂದಲೂ ನೀವೆಷ್ಟೇ ಬೆಂಕಿ ಇಟ್ಟರೂ
‘ಅದು’ ದಹಿಸಿ ಹೋಗದ್ದಕ್ಕೆ
ಕ್ಷಮೆ ಇರಲಿ ನನಗೆ.

ಗವ್ವೆನುವ
ಕತ್ತಲ ಗವಿಯೊಳಗೆ
ನನಗೆಂದೇ ಹಚ್ಚಿಟ್ಟ
ಆ ದೀಪಕ್ಕೆದುರಾದ
ವಿಲಗುಟ್ಟುವ ನನ್ನ ಮಾನ
ಸುಮ್ಮನಿದ್ದರೂ ಇರಲಾಗದೇ
ಮಿಡುಕುತ್ತಾ ಹೊಯ್ದಾಡುತ್ತಿದೆ
ಕಿಚ್ಚಿಗೆ ಬೆಂಕಿಯಾಗಿ

ಉರಿದು ಹೋಗಬಹುದಿತ್ತು….
ನುಡಿಯ ತುಂಬಿ ಬಸಿರಾಗಿ
ಇಳಿಯತೊಡಗಿದೆ ದೀಪದಾಳಕ್ಕೆ
ಮೊದಲು ಎಣ್ಣೆ ಬೋಗುಣಿಗೆ
ನಿಧಾನಕ್ಕೆ ಬತ್ತಿಗೆ
ಕೈ ಬಡಿದು ಈಜುತ್ತಾ
ಬತ್ತಿಯನ್ನೇರಿ ತುತ್ತತುದಿಗೆ
ಉರಿಯುತ್ತಿದ್ದ ಸೊಡರಿನ
ಮಧ್ಯಬಿಂದುವಿಗೆ.

ಉರಿಯಲೇಬೇಕಿದೆ ನನಗೆ
ಬೆಂಕಿಯಾಗಲ್ಲ ದೀಪವಾಗಿ
ರೆಪ್ಪೆ ಅಲುಗದಂತೆ ಉರಿಯಬೇಕಿದೆ
ದೀಪವೇ ಆಗಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವ್ಯಾಧ್ಯಯನ: ಮ್ಯಾಥ್ಯೂ ಅರ್ನಾಲ್ಡ್‌ನ ವಿಚಾರಗಳು
Next post ಮನ ಮಂಥನ ಸಿರಿ – ೬

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…