Home / ಕವನ / ಕವಿತೆ / ಓಂ ಶಾಂತಿ ಶಾಂತಿ ಓಂ

ಓಂ ಶಾಂತಿ ಶಾಂತಿ ಓಂ

ಕಲಿಯಲಿಲ್ಲ ನಾವು
ಕೃಷ್ಣ, ಕ್ರೈಸ್ತ, ಪೈಗಂಬರ,
ಬುದ್ಧ, ಮಹಾವೀರ, ಸಂತರೆಲ್
ಬೋಧಿಸಿರುವ ಶಾಂತಿ ಮಂತ್ರ,
ಕಲಿಯಲಿಲ್ಲ ನಾವು
ಗೀತೆ ಬೈಬಲ್ ಕುರಾನಿನಿಂದ
ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ,
ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ!
ಮಾರಿಕೊಂಡೆವು ನಾವು
ನಮ್ಮ ಮನದ ಶಾಂತಿ
ಮರುಳಾಗಿ ಹತ್ತು ಹಲವು ಆಮಿಷಗಳಿಗೆ.
ಯಾರು ಕೊಟ್ಟರು ನಮಗೆ
ಒಬ್ಬರನ್ನೊಬ್ಬರು ಕೊಲ್ಲುವ
ಮಕ್ಕಳ ತಬ್ಬಲಿಯಾಗಿಸುವ ಹಕ್ಕು?
ಎಲ್ಲ ಕಡೆ ಬೆಂಕಿ ಹಚ್ಚುವ
ಮನೆಮನೆಯ ಶಾಂತಿ ಕೆಡಿಸುವ ಸೊಕ್ಕು?
ಶಾಂತಿ ಇಲ್ಲದ ಕ್ರಾಂತಿ ಬರೆ ಭ್ರಾಂತಿ!
ಶಾಂತವಾಗಿರೆ ಮನ ಸಾಧನೆಗಿಲ್ಲ ಇತಿಮಿತಿ.
ಹರಡಬಹುದೆಲ್ಲೆಲ್ಲೂ ಬೆಳದಿಂಗಳ ತಂಪು;
ಸೂರ್ಯಾಸ್ತದ ಮುಗಿಲ ರಂಗಿನ ಸೊಂಪು!
ಯಾರು ತಡೆಯಬೇಕೀಗ
ಮಾನವೀಯತೆಯ ನಿರಂತರ ಹೋಮ;
ಮನಮನಕೆ ತಾಗಿರುವ ವಿಕೃತಕಾಮ;
ಶಾಂತಿಯ ಕೆಡಿಸುವ ಮಾರಣ ಹೋಮ
ತುಂಬಲಾರೆವೆ ನಾವು
ಮನಮನದಲ್ಲಿ ಶುದ್ದಭಾವ ತನ್ಮಯತೆ
ಜಾತಿ ಮತ ಭೇದಗಳ ಮರೆತು
ಜಗವ ಪ್ರೀತಿಸುವ ಜೀವಂತಿಕೆ?
ನೆಲೆಸಬೇಕೀಗ
ನಮ್ಮಲ್ಲಿ ನಿಮ್ಮಲ್ಲಿ ಅವರಲ್ಲಿ ಎಲ್ಲರಲಿ
ಉಕ್ಕಿ ಉಕ್ಕಿ ಭೋರ್ಗರೆವ ತೆರೆಗಳು
ಕಡಲತಡಿಯ ಸೋಂಕಿ
ಹಿಂದೆ ಸರಿದು ಸಮುದ್ರ ಸೇರುವಾಗಿನ
ಒಂದು ಕ್ಷಣದ ಪ್ರಶಾಂತ ಸ್ಥಿತಿ.
ಅದೇ ಸಂತರನೇಕರು ಕಂಡ ಸ್ಥಿತ ಪ್ರಜ್ಞಸ್ಥಿತಿ.
ಓಂ ಶಾಂತಿ ಓಂ ಶಾಂತಿ ಓಂ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...