ಓಂ ಶಾಂತಿ ಶಾಂತಿ ಓಂ

ಕಲಿಯಲಿಲ್ಲ ನಾವು
ಕೃಷ್ಣ, ಕ್ರೈಸ್ತ, ಪೈಗಂಬರ,
ಬುದ್ಧ, ಮಹಾವೀರ, ಸಂತರೆಲ್
ಬೋಧಿಸಿರುವ ಶಾಂತಿ ಮಂತ್ರ,
ಕಲಿಯಲಿಲ್ಲ ನಾವು
ಗೀತೆ ಬೈಬಲ್ ಕುರಾನಿನಿಂದ
ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ,
ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ!
ಮಾರಿಕೊಂಡೆವು ನಾವು
ನಮ್ಮ ಮನದ ಶಾಂತಿ
ಮರುಳಾಗಿ ಹತ್ತು ಹಲವು ಆಮಿಷಗಳಿಗೆ.
ಯಾರು ಕೊಟ್ಟರು ನಮಗೆ
ಒಬ್ಬರನ್ನೊಬ್ಬರು ಕೊಲ್ಲುವ
ಮಕ್ಕಳ ತಬ್ಬಲಿಯಾಗಿಸುವ ಹಕ್ಕು?
ಎಲ್ಲ ಕಡೆ ಬೆಂಕಿ ಹಚ್ಚುವ
ಮನೆಮನೆಯ ಶಾಂತಿ ಕೆಡಿಸುವ ಸೊಕ್ಕು?
ಶಾಂತಿ ಇಲ್ಲದ ಕ್ರಾಂತಿ ಬರೆ ಭ್ರಾಂತಿ!
ಶಾಂತವಾಗಿರೆ ಮನ ಸಾಧನೆಗಿಲ್ಲ ಇತಿಮಿತಿ.
ಹರಡಬಹುದೆಲ್ಲೆಲ್ಲೂ ಬೆಳದಿಂಗಳ ತಂಪು;
ಸೂರ್ಯಾಸ್ತದ ಮುಗಿಲ ರಂಗಿನ ಸೊಂಪು!
ಯಾರು ತಡೆಯಬೇಕೀಗ
ಮಾನವೀಯತೆಯ ನಿರಂತರ ಹೋಮ;
ಮನಮನಕೆ ತಾಗಿರುವ ವಿಕೃತಕಾಮ;
ಶಾಂತಿಯ ಕೆಡಿಸುವ ಮಾರಣ ಹೋಮ
ತುಂಬಲಾರೆವೆ ನಾವು
ಮನಮನದಲ್ಲಿ ಶುದ್ದಭಾವ ತನ್ಮಯತೆ
ಜಾತಿ ಮತ ಭೇದಗಳ ಮರೆತು
ಜಗವ ಪ್ರೀತಿಸುವ ಜೀವಂತಿಕೆ?
ನೆಲೆಸಬೇಕೀಗ
ನಮ್ಮಲ್ಲಿ ನಿಮ್ಮಲ್ಲಿ ಅವರಲ್ಲಿ ಎಲ್ಲರಲಿ
ಉಕ್ಕಿ ಉಕ್ಕಿ ಭೋರ್ಗರೆವ ತೆರೆಗಳು
ಕಡಲತಡಿಯ ಸೋಂಕಿ
ಹಿಂದೆ ಸರಿದು ಸಮುದ್ರ ಸೇರುವಾಗಿನ
ಒಂದು ಕ್ಷಣದ ಪ್ರಶಾಂತ ಸ್ಥಿತಿ.
ಅದೇ ಸಂತರನೇಕರು ಕಂಡ ಸ್ಥಿತ ಪ್ರಜ್ಞಸ್ಥಿತಿ.
ಓಂ ಶಾಂತಿ ಓಂ ಶಾಂತಿ ಓಂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ
Next post ಚಿಲುಮೆ @ ೧೩

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

cheap jordans|wholesale air max|wholesale jordans|wholesale jewelry|wholesale jerseys