ತುಂಟ ಪುಟ್ಟ

ಪುಟ್ಟ ಒಬ್ಬ ತುಂಟನು
ಎಂದೂ ಸುಮ್ಮನಿರನು
ತುಂಟಾಟದಲ್ಲಿ ಅವನು ಸದಾ ನಿರತನು
ಅದೊಂದು ದಿನ
ಯಾರೂ ಇಲ್ಲದ ವೇಳೆ
ಅಡಿಗೆ ಮನೆಗೆ ನುಗ್ಗಿ ಬಾಟಲಿಗೆ ಕೈ ಇಟ್ಟನು

ಬೇಸನ್ನ ಉಂಡಿ
ಅವಲಕ್ಕಿ ಹಿಡಿ
ಗಡಿ ಬಿಡಿಯಿಂದ ಮುಕ್ಕಿದನು
ಹುರಿದ ಕಡಲೆ
ಪೆಂಟಿ ಬೆಲ್ಲ
ಗಬ ಗಬ ನುಂಗಿ ತೇಗಿದನು

ಅತ್ತಿತ್ತ ನೋಡಿದ
ಬಿಸ್ಕತ್ ಡಬ್ಬಕೆ ಹಾರಿದ
ಇಳಿಸಲು ಹೋಗಿ ಬೀಳಿಸಿಬಿಟ್ಟ
ಗಾಜಿನ ಬಾಟಲಿ
ಬಿದ್ದು ನೆಲದಲಿ
ಚೂರು ಚೂರಾಗಿ ಹೋಯ್ತು

ತಾಯಿ ಭಯದಲಿ
ಬಳಿಯುತ ಇರಲು
ಕೈಗೆ ಚುಚ್ಚಲು ರಕ್ತವು ಹರಿಯಿತು
ಆದ ಗಾಯ ನೋಡಿ
ಬಜಾಯಿಸಿದ ಬಂಬ್ಡಿ
ತಾಯಿಯು ತದುಕಿ, ಕಟ್ಟಿದಳು ಪಟ್ಟಿ

ತಾಯಿಯ ಹಿತೋಪದೇಶ
ತಂದೆಯ ಬುದ್ಧಿವಾದ
ಪುಟ್ಟುನ ಮನಸಿಗೆ ನಾಟಿದವು
ಅಂದಿನಿಂದ ಪುಟ್ಟು
ತುಂಟಾಟವ ಬಿಟ್ಟು
ಆದನು ಸರಳ ಸಜ್ಜನ ಸಂಘ ಜೀವಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯಿ ಭಿಕ್ಷಾ
Next post ಪ್ರಕೃತಿ ಆರಾಧಕ – ಇ. ಎಂ. ಫಾರ್‍ಸ್ಟರ್

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…