ಮುಕ್ತಿ

ನನ್ನ ಜೀವ ಮನ ಹಿಗ್ಗಿ ಹಿಗ್ಗಿ ಆಕಾಶಕಿಂತ ಅಗಲ
ಆವರಣರಹಿತದಾಕಾಲ ಮುಳುಗಿ ಉಂಡಿತ್ತು ಹರ್ಷ ಮಿಗಿಲ
ಮೈಯ ಪಿಂಡ ಉಡುಗಿತ್ತು ಉಳಿದು ಜಲಲಿಪಿಯ ರೇಷೆಯಾಗಿ
ಆತ್ಮದೇಕಾಂತ ಚಿಂತೆಯಲ್ಲಿ ಸ್ಮೃತಿ ಮಾತ್ರ ಶೇಷವಾಗಿ.

ಬಣ್ಣ ಹಾರಿ ಅಡಗಿತ್ತು ವಿಶ್ವ ಸುತ್ತೆಲ್ಲ ಸೆರಗು ಹರಿದು.
ಶುಭ್ರತೆಯ ಏಕಸಾಮ್ರಾಜ್ಯದಲ್ಲಿ ಬೆಳಕೊಂದೆ ಚೆಲ್ಲವರಿದು
ಅಮೃತ ಮೂರ್ತಿ ನಟರಾಜನೊಂದು ಸೌಂದರ್ಯ-ಶಾಲೆಯಾಗಿ
ಅಮಿತದಾನಂದ ಪಡೆದ ವೈಶಾಲ್ಯದೊಡನೇ ವಿಶಾಲನಾಗಿ

ಹರ್ಷಪುಲಕ ಉಬ್ಬುಬ್ಬಿ ಹಬ್ಬಿ ಬ್ರಹ್ಮಾಂಡದುದ್ದ ಠಾವ.
ಬೆಳಕಿನಲ್ಲಿ ಇಂಗಿತ್ತು ಬುದ್ಧಿ, ಹಿರಿಹಿಗ್ಗಿನಲ್ಲಿ ಭಾವ
ನಿರ್ಭ್ರಾಂತೆ ಶಾಂತ ಸುಸ್ತಬ್ಬದಾಂತ ಪರಿಣಾಮ ಆಲಿಸುವದು
ಸನಾತನದ ಆ ಶಾಂತಿ ಶಾಸನವ ತಾನೆ ಪಾಲಿಸುವದು.

ಅನಿರ್ವಾಚ್ಯದಾ ರಾಜ್ಯದಲ್ಲಿ ಬದುಕುವೆನು ಬಾಳಹಬ್ಬ
ಪ್ರಕೃತಿಯಾಟ ಮುಗಿದಿಹುದು ಈಗ ತಾ ಪುರುಷನೊಬ್ಬನೊಬ್ಬ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊರಗುತಿರುವೆದೆಗೆ ಬರೆ
Next post ವಾಗ್ದೇವಿ – ೩೮

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…