ಉಸಿರು

ಬಲೆಯಲಿ ಸಿಕ್ಕ ಮೀನಿನಂತೆ ನಾನೀಗ
ಒದ್ದಾಡುತ್ತಿರುವೆ ನಿನ್ನ ಪ್ರೇಮದ ಸೆಳತದಲಿ.

ಸರಳುಗಳಾಚೆಯ ಬೆಳಕು ಗೋಡೆಯ
ಮೇಲೆ ಹರಡಿ ಹಾಸಿವೆ ನೆರಳುಗಳು ಬಿತ್ತಿಯಲಿ.

ನನ್ನ ಈ ಪ್ರೇಮದ ಅಲಾಪ ಗೀತೆಗಳ
ಪ್ರೀತಿ ಸಂಜೆ ಬೆಳ್ಳಕ್ಕಿಗಳು ನಿನ್ನ ನೆತ್ತಿಗೆ
ಸವರುತ್ತವೆ.

ನಿರುತ್ತರದ ಗಾಳಿ ಮೆಲ್ಲಗೆ ನನ್ನ ಕೋಣೆಯೊಳಗೆ
ನುಸುಳಿ ನೆನಪುಗಳ ಚಾದರ ಹೊದಿಸುತ್ತದೆ.

ಬಯಲಲಿ ಹಾಡುವ ಹಕ್ಕಿಗಳು ಒಡಲಾಳದ
ನೋವಿನ ಧ್ವನಿಯನ್ನು ಬೆಟ್ಟ ಕಣಿವೆಗಳಲಿ
ರಿಂಗಣಿಸುತ್ತವೆ.

ನೀಲಿ ರೆಕ್ಕೆಯ ಹಕ್ಕಿ ದಿನಾಲೂ ನನ್ನ ಮನೆಯ
ಪಾಗಾರದ ಮೇಲೆ ಕುಳಿತು ಕಂಪನದ ಹಾಡು
ಹಾಡುತ್ತದೆ.

ಕತ್ತಲೆಯಲಿ ಬದುಕು ಗಾಯಗಳು ನಡೆಯುತ್ತವೆ
ಯಾರದೋ ದಪದಪ ಹೆಜ್ಜೆಗಳು ಹಿತ್ತಲಲ್ಲಿ ಕೇಳಿವೆ.

ಹೊಟ್ಟೆಯಲ್ಲಿ ಸಂಕಟ ತುಂಬಿ, ತುತ್ತು ಗಂಟಲಲಿ
ಇಳಿಯದ ಹೊತ್ತಿನಲಿ ಸಂಜೆ ಕರಗುತ್ತಿದೆ.

ನೊರೆಹಾಲ ಕಡಲಿಗೆ ಯಾರಿಲ್ಲದ ಮೌನ
ಗಾಳಿ ನಕ್ಷತ್ರಗಳ ತುಂಬ ನಿನ್ನದೇ ಉಸಿರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಕನ್ನಡಿಗ
Next post ವಾರಣಾವತಕ್ಕೆ ಹೊರಟ ಪಾಂಡವರು

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…