ಕೋಗಿಲೆ

ತಾನಗಾನಗಳಲ್ಲಿ ತಣಿಸಿಕೊಳುವದು ಮನವ
ಹಸುರೆಲೆಗಳಲಿ ಅಡಗಿಮಡಗಿಕೊಂಡಿಹ ಕುಕಿಲೆ
ಕುಕಿಲುವದು ಋತುಪತಿಯ ಐಸಿರಿಯ ಈ ಘನವ
ಮೆದ್ದು ಮೆಲ್ಲಗೆ ಮುದದಿ ಮಾಮರದಿ ತಳಿತ ಎಲೆ

ಕಪ್ಪು ಬಣ್ಣವು ಎಂಬ ಕೊರಗು ಒಂದಿನಿತಿಲ್ಲ
ಕಸುವು ತನಗಿಲ್ಲೆಂಬ ಕಳವಳಕೆ ಎಡೆಯಿಲ್ಲ
ಇಂಚರವು ತನಗೆಂಬ ಬಿಂಕ ಒಂದಿನಿತಿಲ್ಲ
ಕೊಟಸ್ಥ ತಾಟಸ್ಥ್ಯ ಪರಪುಟ್ಟ ನಿನಗೆಲ್ಲ

ಹಿಗ್ಗಿ ಕೂಜನಗೈವ ಗಾನ ಋಷಿಯೇ ಹಾಡು
ತುಂಬಿರುವ ದುಗುಡವನು ಕಿತ್ತೆಸೆಯಲೀ ಹಾಡು
ಅಶುಭವೆಲ್ಲಕು ಕೊನೆಯು ಬರುವದೆಂಬುದನುಸುರು
ಮಂಗಲಸು ದಿವಸದಾ ಮಂಗಲವ ನೀನುಸುರು

ನಿನ್ನ ಗಾನದೊಳಿಹುದು ದಿವ್ಯ ತಮ ಮಾಧುರ್‍ಯ
ಅದಕೆ ಜೊತೆಯಾಗಿಹುದು ಗೂಢತನು ಗಾಂಭೀರ್‍ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೮
Next post ಉತ್ತರಣ – ೧೪

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys