Home / ಕವನ / ತತ್ವಪದ / ಚಿನ್ನದ ವೈರಾಗ್ಯ

ಚಿನ್ನದ ವೈರಾಗ್ಯ

ಪತ್ನಿಗೆ ಚಿನ್ನದ ಮೇಲೆ ವ್ಯಾಮೋಹ
ಇದು ಪ್ರಕೃತಿಯ ಸಹಜ ಗುಣಮೋಹ
ಸ್ತ್ರಿಗೆ ಆಸ್ತಿ ಅಂತಸ್ತುಗಳೇ ಪ್ರೀತಿ
ನಿಸರ್ಗದ ಬಾಳಿಕೆಗೆ ಇದೇ ಜ್ಯೋತಿ

ಇತಿಹಾಸಗಳಲೆಲ್ಲ ಸ್ತ್ರೀಯ ಒಡೆತನ ಕಂಡಾಗ
ಸಂತಜನ ಸ್ತ್ರೀಯರಿಗೂ ಸಿರಿ ಅನುರಾಗ
ತುಕಾರಾಮ ಮಡದಿಗೆ ಸಿರಿತನದ ಕನಸು
ಆದರೆ ಸಂತರಿಗೆ ನಿರಾಶೆಯ ಮನಸು

ಬಾಪೂಜಿಯ ಅರ್ಧಾಂಗಿಗೆ ಚಿನ್ನದಲಿ ಆಸೆ
ಕಂಡೊಮ್ಮೆ ವಿಶದಸಿದರು ನಿನಗೋ ಆಸೆ
ಬೇಡ ನಿನಗೆ ಹೇಮದಲಿ ಲೋಭ
ನಮ್ಮ ಬಾಳಿಗೆ ತರುವುದಿಲ್ಲ ಶೋಭ

ಪರಮಹಂಸ ಸತಿ ಶಾರದೆ ಮಾತೆಗೆ
ಪ್ರಾರಂಭದಲಿತ್ತು ಚಿನ್ನದಲಿ ಚಿತ್ತ
ಕ್ಷಣ ಹೊತ್ತು ಅವರ ಅಂತರಂಗ ತೆರೆದರು
ಅಶಾಶ್ವತ ಚಿನ್ನ ಆಸ್ತಿ ಎಂದು ಬಿತ್ತಿದರು

ದೇವರೆ ನಮಗೆಂದೂ ಬಾರದಿರಲಿ
ಅಂತಸ್ತು ಲೋಭಗಳ ಬಯಕೆ
ಬಾಳನ್ನೆ ಪ್ರಪಾತಕ್ಕೆ ತಳ್ಳುವುದು
ಮಾಣಿಕ್ಯವಿಠಲ ನೆನೆಯದಿರೆ ನರಕಕ್ಕೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...