ಅಲ್ಪ

ಮಹಿಳೆಯರ ಒಂದೊಂದು ನೋಟ, ಮಾತುಕತೆಗಳಿಗೂ
ಒಂದೊಂದು ವಿಶೇಷಾರ್ಥ ಕಲ್ಪಿಸುವ
ಮಾಮೂಲಿ ಗಂಡಸರ ಜಾತಿಗೆ ಸೇರಿದವನು ನಾನು.

ಅಲ್ಲೀವರೆಗೆ ನನ್ನನ್ನು ಯಾರೂ ಅಷ್ಟೊಂದು
ಹಚ್ಚಿಕೊಂಡಿರಲಿಲ್ಲ.
ನನ್ನ ಪ್ರತಿಭೆಯ ಕುರಿತು ಮಾತಾಡಿರಲಿಲ್ಲ
ಕಷ್ಟ, ಸುಖಗಳಿಗೆ ಸ್ಪಂದಿಸಿರಲಿಲ್ಲ.

ನನ್ನ ಗುಣಕನುಗುಣವಾಗಿ
ನನ್ನನ್ನು ನಾನೇ ಭಾರಿ ವ್ಯಕ್ತಿಯೆಂದುಕೊಂಡು
ನನ್ನನ್ನು ಒಲಿಸಿಕೊಳ್ಳುವ
ಯತ್ನ ವಿದೆಂದು
ನೀವಿಷ್ಟೊಂದು ಆದರಿಸುವ ಕಾರಣವೇನೆಂದು ಕೇಳಿದೆನು
ನೇರವಾಗಿ

ನನ್ನ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ
ಸೂಕ್ಷ್ಮದಲ್ಲಿ ಅರಿತರು
ದೂರ ದೂರ ಹೋದರು

ಬದಲಾಗದಿದ್ದ ನಾನು
ಅವರು ತೋರಿದ ಔದಾರ್ಯಕ್ಕೆ
ಅದಕೆ ಇದಕೆ ಸಮಮಾಡಿ
ನಿಮ್ಮಿಚ್ಛೆಯೇ ನನ್ನಿಚ್ಛೆಯೆಂದು ಪತ್ರ ಬರೆದು ಹಾಕಿದೆನು.

ನನಗಂದು ತಿಳಿಯಲಿಲ್ಲ
ನಾನೆಂತಹ ಅಲ್ಪ, ಅಪಾತ್ರನೆಂದು
ನನ್ನದು ಅಪಾರ್ಥವೆಂದು
ಒಳ್ಳೆಯ ಮನಸೇನೆಂದು, ಎಂತಹದಿರುತ್ತದೆಯೆಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನತನ ನನ್ನನುಡಿ
Next post ಗನ್ನು ನಿಮ್ಮದು ಪೆನ್ನು ನಮ್ಮದು

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…